ಪ್ರಧಾನಿ ಮೋದಿಯನ್ನು ಕೊಂದು, ಭಾರತವನ್ನು ವಿಭಜಿಸುತ್ತೇವೆ: ಉಗ್ರ ಹಫೀಜ್ ಸಯೀದ್ ಆಪ್ತ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂದು ಭಾರತವನ್ನು ವಿಭಜನೆ ಮಾಡುತ್ತೇವೆ ಎಂದು 2008ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಾಗೂ ನಿಷೇಧಿತ...
ನರೇಂದ್ರ ಮೋದಿ-ಹಫೀಜ್ ಸಯೀದ್
ನರೇಂದ್ರ ಮೋದಿ-ಹಫೀಜ್ ಸಯೀದ್
ರಾವಲ್ ಕೋಟ್: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಂದು ಭಾರತವನ್ನು ವಿಭಜನೆ ಮಾಡುತ್ತೇವೆ ಎಂದು 2008ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಹಾಗೂ ನಿಷೇಧಿತ ಜಮಾದ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ನ ಆಪ್ತ ಹಾಗೂ ಜೆಯುಡಿ ಸಂಚಾಲಕ ಬಶೀರ್ ಅಹ್ಮದ್ ಖರ್ಘಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾನೆ. 
ಭಾರತ ಮತ್ತು ಅಮೆರಿಕದಲ್ಲಿ ಇಸ್ಲಾಮಿನ ಬಾವುಟವನ್ನು ಸ್ಥಾಪಿಸುತ್ತೇವೆ. ಭಾರತದ ಪ್ರದಾನಿ ಮೋದಿಯನ್ನು ಹತ್ಯೆ ಮಾಡುತ್ತೇವೆ. ಭಾರತ ಹಾಗೂ ಇಸ್ರೇಲ್ ಅನ್ನು ವಿಭಜನೆ ಮಾಡುತ್ತೇವೆ. ಅತೀ ಹೆಚ್ಚು ಹುತಾತ್ಮರನ್ನು ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದಾನೆ. 
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಪೂಂಚ್ ಜಿಲ್ಲೆಯ ಮಸೀದಿಯೊಂದರಲ್ಲಿ ನಡೆದ ರಂಜಾನ್ ನ ಶುಕ್ರವಾರದ ನಮಾಜ್ ನ ಭಾಷಣದ ವೇಳೆ ಬಶೀರ್ ನಾಲಿಗೆ ಹರಿದು ಬಿಟ್ಟಿದ್ದಾನೆ. 
ರಂಜಾನ್ ಜಿಹಾದ್ ನ ತಿಂಗಳಾಗಿದ್ದು ಈ ತಿಂಗಳಿನಲ್ಲಿ ಹುತಾತ್ಮರಾದವರಿಗೆ ಸ್ವರ್ಗದ ಬಾಗಿಲು ತೆರೆದಿರುತ್ತದೆ. ನಮ್ಮ ಸೈನಿಕರು ಕಾಶ್ಮೀರದಲ್ಲಿ ಭಾರತದ ವಿರುದ್ಧ ಹೋರಾಟ ಮಾಡಿ ಜಿಹಾದ್ ಮಾಡುತ್ತಿದ್ದಾರೆ. ನಾವು ಕಾಶ್ಮೀರಕ್ಕೆ ಸ್ವತಂತ್ರ ಕೊಡಿಸಿ ಭಾರತವನ್ನು ನಾಶ ಮಾಡುತ್ತೇವೆ ಎಂದು ಹೇಳಿದ್ದಾನೆ. 
ಇದೇ ವೇಳೆ ಭಾರತದ ವಿರುದ್ಧದ ನಮ್ಮ ಹೋರಾಟಕ್ಕೆ ನೀವು ಬೆಂಬಲ ನೀಡಬೇಕು. ನಮಗೆ ಆಹಾರ ಧಾನ್ಯ ಹಾಗೂ ಹಣವನ್ನು ದಾನ ಮಾಡಬೇಕು. ಅಲ್ಲದೆ ಮಹಿಳೆಯರು ತಮ್ಮ ಮಕ್ಕಳನ್ನು ನಮಗೆ ಅರ್ಪಿಸಬೇಕೆಂದು ಅಂಗಲಾಚಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com