ಇದರ ವಿರುದ್ಧ ಸಯೀದ್ ನ್ಯಾಯಾಲಯದ ಮೆಟ್ಟಿಲೇರಿದ್ದ. ಈ ಅರ್ಜಿ ಕುರಿತಂತೆ ಗುರುವಾರ ವಿಚಾರಣೆ ನಡೆದಿದ್ದು, ವಿಚಾರಣೆ ವೇಳೆ ಸಯೀದ್ ಪರ ವಕೀಲರು ಸುಗ್ರೀವಾಜ್ಞೆ ಅವಧಿ ಮುಕ್ತಾಯಗೊಂಡಿದ್ದು, ನಿಷೇಧವನ್ನು ಮುಂದುವರೆಸುವಂತಿಲ್ಲ ಎಂದು ವಾದ ಮಂಡಿಸಿದ್ದಾರೆ. ಅಲ್ಲದೆ, 2002ರಲ್ಲಿ ಜಮಾದ್ ಉದ್ ದವಾ ಸ್ಥಾಪನೆಗೊಂಡಿದ್ದು, ನಂತರ ನಿಷೇಧಿತ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯೊಂದಿಗನ ಸಂಬಂಧವನ್ನು ಕಡಿದುಕೊಂಡಿತ್ತು. ಆದರೂ, ಭಾರತ ಜೆಯುಡಿಯನ್ನು ಉಗ್ರ ಸಂಘಟನೆಯೆಂದು ಬಿಂಬಿಸುತ್ತಿದೆ. ಭಾರತದ ಒತ್ತಡದ ಪರಿಣಾವಾಗಿ 2009ರಿಂದ 2017ರವರೆಗೂ ಸಯೀದ್ ಅವರನ್ನು ಬಂಧನದಲ್ಲಿರಿಸಲಾಗಿತ್ತು ಎಂದು ತಿಳಿಸಿದ್ದಾರೆ.