ಕಾಶ್ಮೀರ ವಿಷಯದಲ್ಲಿ ಪಾಕಿಸ್ತಾನಕ್ಕೆ ಸರಣಿ ಸೋಲುಗಳುಂಟಾಗುತ್ತಿದ್ದು, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲೂ ಮುಖಭಂಗ ಉಂಟಾಗಿದ್ದು, ಪಾಕಿಸ್ತಾನ ಮೋದಿಯ ಹಿಂದೂ ದೋವಲ್ ಸಿದ್ಧಾಂತದೊಂದಿಗೆ ವ್ಯವಹರಿಸುತ್ತಿದ್ದೇವೆ ಎಂದು ಪಾಕ್ ಸಚಿವ ಖುರೇಷಿ ಹೇಳಿದ್ದಾರೆ.
ಪಾಕಿಸ್ತಾನದ ಡಿಜಿಐಎಸ್ ಪಿಆರ್ ಮೇಜರ್ ಜನರಲ್ ಅಸೀಫ್ ಘಫೂರ್ ಅವರೊಂದಿಗೆ ಜಂಟು ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿರುವ ಶಾ ಮೊಹಮ್ಮದ್ ಖುರೇಷಿ, ನೆಹರು ಅವರ ಹಿಂದೂಸ್ಥಾನಕ್ಕೆ ತದ್ವಿರುದ್ಧವಾಗಿರುವ ಮೋದಿಯ ಹಿಂದೂಸ್ಥಾನದಲ್ಲಿ ದೋವಲ್ ಸಿದ್ಧಾಂತದೊಂದಿಗೆ ವ್ಯವಹರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಭಾರತಕ್ಕೆ ಎದುರಾಗುವ ಬಾಹ್ಯ ಅಪಾಯಗಳನ್ನು ನಿರ್ವಹಣೆ ಮಾಡುವುದರಲ್ಲಿ ಖ್ಯಾತಿ ಪಡೆದಿರುವ ಅಜಿತ್ ದೋವಲ್ ಬಗ್ಗೆ ಪಾಕಿಸ್ತಾನಕ್ಕೆ ಭಯ ಉಂಟಾಗಿದ್ದು, ಮೋದಿ ನೆಹರು ಅವರ ಭಾರತವನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement