ಕೇರಳದ ಕೋಝಿಕ್ಕೋಡ್ ನಲ್ಲಿ ವಿಮಾನ ದುರಂತ: ದುಬೈ, ಶಾರ್ಜಾ ದೂತಾವಾಸ ಕಚೇರಿ ಸಹಾಯವಾಣಿ ಮಾಹಿತಿ ಇಲ್ಲಿದೆ

ಕೇರಳದ ಕೋಝಿಕ್ಕೋಡ್ ನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತಕ್ಕೀಡಾಗಿ ಅನೇಕ ಮಂದಿ ಮೃತಪಟ್ಟ ಘಟನೆ ನಡೆದ ಕೂಡಲೇ ದುಬೈ ಮತ್ತು ಶಾರ್ಜಾದಲ್ಲಿರುವ ಭಾರತೀಯ ದೂತಾವಾಸ ಕಚೇರಿ ಪ್ರಯಾಣಿಕರ ಕುಟುಂಬಸ್ಥರಿಗೆ ಮಾಹಿತಿ ನೀಡಲು 5 ಸಹಾಯವಾಣಿಗಳನ್ನು ತೆರೆದಿದೆ. 
ಗಾಯಗೊಂಡವರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿರುವುದು
ಗಾಯಗೊಂಡವರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿರುವುದು
Updated on

ದುಬೈ: ಕೇರಳದ ಕೋಝಿಕ್ಕೋಡ್ ನಲ್ಲಿ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಅಪಘಾತಕ್ಕೀಡಾಗಿ ಅನೇಕ ಮಂದಿ ಮೃತಪಟ್ಟ ಘಟನೆ ನಡೆದ ಕೂಡಲೇ ದುಬೈ ಮತ್ತು ಶಾರ್ಜಾದಲ್ಲಿರುವ ಭಾರತೀಯ ದೂತಾವಾಸ ಕಚೇರಿ ಪ್ರಯಾಣಿಕರ ಕುಟುಂಬಸ್ಥರಿಗೆ ಮಾಹಿತಿ ನೀಡಲು 5 ಸಹಾಯವಾಣಿಗಳನ್ನು ತೆರೆದಿದೆ. 

ದುಬೈಯಿಂದ ಕಲ್ಲಿಕೋಟೆಗೆ ಬರುತ್ತಿದ್ದ ಐಎಕ್ಸ್ 1344 ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ 191 ಮಂದಿ ಇದ್ದರು, ಅವರಲ್ಲಿ ಇಬ್ಬರು ಪೈಲಟ್ ಗಳು, ನಾಲ್ವರು ಸಿಬ್ಬಂದಿ, 10 ಮಕ್ಕಳನ್ನೂ ಒಳಗೊಂಡಿತ್ತು. ರನ್ ವೇ 10ರಲ್ಲಿ ಲ್ಯಾಂಡಿಂಗ್ ಆದ ಮೇಲೆ ಬೋಯಿಂಗ್ 737 ವಿಮಾನ ರನ್ ವೇಯ ಕೊನೆಯವರೆಗೂ ಹಾರಾಡಲು ಪ್ರಯತ್ನಿಸಿತ್ತು. ಆಗ ನಿಯಂತ್ರಣ ತಪ್ಪಿ 50 ಅಡಿ ಆಳವಾದ ಕಂದಕಕ್ಕೆ ಬಿದ್ದು ಎರಡು ಹೋಳಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ನಾವು ಪ್ರಾರ್ಥಿಸಿಕೊಳ್ಳುತ್ತಿದ್ದೇವೆ. ನಮ್ಮ ಸಹಾಯವಾಣಿ +97156 5463903, +971543090572, +971543090571, +971543090575 ಎಂದು ದುಬೈಯಲ್ಲಿರುವ ಭಾರತೀಯ ಕೌನ್ಸಲ್ ಜನರಲ್ ಡಾ ಅಮನ್ ಪುರಿ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. 

ಶಾರ್ಜಾದಲ್ಲಿನ ಸಹಾಯವಾಣಿ +97165970303 ಆಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com