ಪಾಕ್ ತನ್ನ ನೆರೆರಾಷ್ಟ್ರಗಳ ಜೊತೆ ಉತ್ತಮ ಸಂಬಂಧ ಬಯಸುತ್ತೆ, ಆದರೆ ಭಾರತ ಇದನ್ನು ದೌರ್ಬಲ್ಯವೆಂದು ಪರಿಗಣಿಸಿದೆ: ಅಧ್ಯಕ್ಷ ಅಲ್ವಿ

ಪಾಕಿಸ್ತಾನ ಯಾವಾಗಲೂ ತನ್ನ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತಿತ್ತು. ಆದರೆ ಭಾರತ ಮಾತ್ರ ನಮ್ಮ ಉದ್ದೇಶವನ್ನು ಒಂದು ದೌರ್ಬಲ್ಯವೆಂದು ಪರಿಗಣಿಸಿದೆ ಎಂದು ಅಧ್ಯಕ್ಷ ಆರಿಫ್ ಅಲ್ವಿ ಹೇಳಿದ್ದಾರೆ. 
ಆರಿಫ್ ಅಲ್ವಿ
ಆರಿಫ್ ಅಲ್ವಿ
Updated on

ಇಸ್ಲಾಮಾಬಾದ್: ಪಾಕಿಸ್ತಾನ ಯಾವಾಗಲೂ ತನ್ನ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತಿತ್ತು. ಆದರೆ ಭಾರತ ಮಾತ್ರ ನಮ್ಮ ಉದ್ದೇಶವನ್ನು ಒಂದು ದೌರ್ಬಲ್ಯವೆಂದು ಪರಿಗಣಿಸಿದೆ ಎಂದು ಅಧ್ಯಕ್ಷ ಆರಿಫ್ ಅಲ್ವಿ ಹೇಳಿದ್ದಾರೆ. 

ಇದೇ ವೇಳೆ ಬೀಜಿಂಗ್ ಜೊತೆ ಇಸ್ಲಾಮಾಬಾದ್ ನ ಸಂಬಂಧವನ್ನು ಹಾಳುಗೆಡವಲು ಭಾರತ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ರಾಷ್ಟ್ರೀಯ ಅಸೆಂಬ್ಲಿಯ ನಾಲ್ಕನೇ ಸಂಸತ್ ವರ್ಷದ ಆರಂಭದಲ್ಲಿ ಉಭಯ ಸದನಗಳ ಸಂಸತ್ತು, ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಅಲ್ವಿ ಈ ಹೇಳಿಕೆ ನೀಡಿದ್ದಾರೆ. 

ಪಾಕಿಸ್ತಾನವು ಯಾವಾಗಲೂ ತನ್ನ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತಿತ್ತು. ಆದರೆ ಭಾರತವು ಈ ಆಸೆಯನ್ನು ಒಂದು ದೌರ್ಬಲ್ಯವೆಂದು ಪರಿಗಣಿಸಿದೆ. ಇದೇ ವೇಳೆ ಅಲ್ವಿ 2019ರಲ್ಲಿ ಪಾಕಿಸ್ತಾನದಲ್ಲಿ ಭಯೋತ್ಪಾದನಾ ಶಿಬಿರದ ಮೇಲೆ ಭಾರತೀಯ ವಾಯುದಾಳಿಯನ್ನು ನೆನಪಿಸಿಕೊಂಡರು.

ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತದ ಯುದ್ಧ ವಿಮಾನಗಳು ಫೆಬ್ರವರಿ 26, 2019ರಂದು ಪಾಕಿಸ್ತಾನದೊಳಗೆ ನುಗ್ಗಿ ಜೈಶ್-ಎ-ಮೊಹಮ್ಮದ್(ಜೆಇಎಂ) ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದವು.

ಭಯೋತ್ಪಾದನೆ, ಹಗೆತನ ಮತ್ತು ಹಿಂಸೆಯಿಲ್ಲದ ಪರಿಸರದಲ್ಲಿ ಇಸ್ಲಾಮಾಬಾದ್‌ನೊಂದಿಗೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ ಎಂದು ಭಾರತವು ಪಾಕಿಸ್ತಾನಕ್ಕೆ ತಿಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com