ಜಿ20 ಶೃಂಗಸಭೆ: ಸುನಕ್, ಬೈಡನ್ ಜೊತೆ ಮೋದಿ ದ್ವಿಪಕ್ಷೀಯ ಸಭೆ!
17ನೇ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಾಲಿಗೆ ತೆರಳಿದ್ದು, ನಿರ್ಣಾಯಕ ವೇದಿಕೆಯಲ್ಲಿ, ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
Published: 14th November 2022 08:41 AM | Last Updated: 14th November 2022 06:50 PM | A+A A-

ಜಿ20 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ
ಬಾಲಿ: 17ನೇ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಬಾಲಿಗೆ ತೆರಳಿದ್ದು, ನಿರ್ಣಾಯಕ ವೇದಿಕೆಯಲ್ಲಿ, ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಇದಲ್ಲದೆ, ಮೋದಿ ಮತ್ತು ಇತರ ಭಾಗವಹಿಸುವ ನಾಯಕರ ನಡುವೆ ಇತರ ದ್ವಿಪಕ್ಷೀಯ ಮಾತುಕತೆಗಳು ನಡೆಯಲಿದ್ದು, ಶೃಂಗಸಭೆಯ ಮುಕ್ತಾಯದ ಅಧಿವೇಶನವು ಜಿ 20 ಅಧ್ಯಕ್ಷ ಸ್ಥಾನವನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿದೆ. ಪ್ರಧಾನಿ ಮೋದಿ ಅವರು ಇಂಡೋನೇಷ್ಯಾದಲ್ಲಿ ಕಳೆಯಲಿರುವ ಎರಡು ದಿನಗಳಲ್ಲಿ ಸುಮಾರು 20 ಸಭೆ ಮತ್ತು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. ಈ ಪೈಕಿ ಪ್ರಮುಖವಾಗಿ ಅವರು 3 ಅಂಶಗಳ ಮೇಲೆ ನಿರ್ಧಾರಗಳನ್ನು ಕೈಗೊಳ್ಳಲಿದ್ದು, ಮೊದಲನೆಯದಾಗಿ ಆಹಾರ ಮತ್ತು ಇಂಧನ ಸುರಕ್ಷತೆ. ಎರಡನೆಯದು ಆರೋಗ್ಯ ಮತ್ತು ಮೂರನೆಯದು ಡಿಜಿಟಲ್ ರೂಪಾಂತರ ವಿಷಯಗಳ ಮೇಲೆ ಚರ್ಚೆಗಳು ಕೇಂದ್ರೀಕೃತವಾಗಿರಲಿವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಹೇಳಿದ್ದಾರೆ.
ಇದನ್ನೂ ಓದಿ: ಆಸಿಯಾನ್ ಶೃಂಗಸಭೆ: ಜೈಶಂಕರ್ - ಬ್ಲಿಂಕನ್ ಭೇಟಿ; ಉಕ್ರೇನ್ ಯುದ್ಧ, ಭಾರತ-ಅಮೆರಿಕ ಸಂಬಂಧಗಳ ಬಗ್ಗೆ ಚರ್ಚೆ
ಇಡೀ ಜಗತ್ತು ಆರ್ಥಿಕ ಹಿಂಜರಿತದಿಂದಾಗಿ ವ್ಯಾಪಕ ಹೊಡತೆಕ್ಕೊಳಗಾಗಿದ್ದು, ಹಾಲಿ G20 ಸಭೆಯಲ್ಲಿ ಇದು ಪ್ರಮುಖ ಚರ್ಚಿತ ವಿಷಯವಾಗಿರಲಿದೆ. ನಾಯಕರು ಸಾಂಘಿಕ ಚೇತರಿಕೆ, 'ಒಟ್ಟಿಗೆ ಚೇತರಿಕೆ, ಬಲಿಷ್ಠ ಚೇತರಿಕೆ' (Recover Together, Recover Stronger) ಎಂಬ ಘೋಷವಾಕ್ಯ ಮತ್ತು ವಿಷಯದ ಅಡಿಯಲ್ಲಿ ಜಾಗತಿಕ ಕಾಳಜಿಯ ಪ್ರಮುಖ ವಿಷಯಗಳ ಕುರಿತು ವ್ಯಾಪಕವಾಗಿ ಚರ್ಚಿಸಲಿದ್ದಾರೆ. "ಶೃಂಗಸಭೆಯ ಸಮಯದಲ್ಲಿ, ಪ್ರಧಾನಿ ಮೋದಿ ಮತ್ತು ಇತರ ಜಿ 20 ನಾಯಕರು ಜಾಗತಿಕ ಆರ್ಥಿಕತೆಯ ಸ್ಥಿತಿ, ಇಂಧನ, ಪರಿಸರ, ಕೃಷಿ, ಆರೋಗ್ಯ ಮತ್ತು ಡಿಜಿಟಲ್ ರೂಪಾಂತರಕ್ಕೆ ಸಂಬಂಧಿಸಿದ ಸಮಸ್ಯೆಗಳು ಸೇರಿದಂತೆ ಸಮಕಾಲೀನ ಪ್ರಸ್ತುತತೆಯ ಪ್ರಮುಖ ವಿಷಯಗಳ ಬಗ್ಗೆ ವ್ಯಾಪಕವಾಗಿ ಚರ್ಚಿಸಲಿದ್ದಾರೆ" ಎಂದು ಕ್ವಾತ್ರಾ ಹೇಳಿದರು.
Pandemic Fund—formerly called the financial intermediary fund (FIF)—for pandemic prevention, preparedness, and response (PPR) will be launched on 13 November 2022 on the margins of the G20 JFHMM hosted by the G20 Presidency of Indonesia. #G20Indonesia pic.twitter.com/KRGotwD2kU
— G20 Indonesia (@g20org) November 13, 2022
ಉಕ್ರೇನ್ನಲ್ಲಿನ ಸಂಘರ್ಷದ ಬೆಳಕಿನಲ್ಲಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಅನುಪಸ್ಥಿತಿಯಲ್ಲಿ, ಶೃಂಗಸಭೆಯಲ್ಲಿ ಭಾಗವಹಿಸುವ ಎಲ್ಲಾ ವಿಶ್ವ ನಾಯಕರಿಂದ ಸಂಘರ್ಷದ ಕುರಿತು ಸಾಕಷ್ಟು ಚರ್ಚೆಗಳು ನಡೆಯಲಿವೆ. "ಭಾರತವು ನಿರಂತರವಾಗಿ ಸಂಘರ್ಷದ ಮೇಲೆ ಸಮತೋಲಿತ ನಿಲುವನ್ನು ಹೊಂದಿದೆ, ಸಶಸ್ತ್ರ ಸಂಘರ್ಷವನ್ನು ನಿಲ್ಲಿಸಲು ಪ್ರತಿಪಾದಿಸುತ್ತಿದ್ದು, ಎರಡೂ ಕಡೆಯವರು ಸಂವಾದ ಮೂಲಕ ಸಮಸ್ಯೆ ಪರಿಹಾರಕ್ಕೆ ಮುಂದಾಗುವಂತೆ ಒತ್ತಾಯಿಸುತ್ತದೆ" ಎಂದು ಕ್ವಾತ್ರಾ ಸೇರಿಸಲಾಗಿದೆ.
ಇದನ್ನೂ ಓದಿ: ಯುಸ್ ಹೌಸ್ ಗೆ ಐವರು ಭಾರತೀಯ-ಅಮೆರಿಕನ್ ಚುನಾಯಿತ ಪ್ರತಿನಿಧಿಗಳು ಆಯ್ಕೆ; ರಾಜ್ಯ ಶಾಸಕಾಂಗದಿಂದಲೂ ಹಲವರ ಗೆಲುವು
ಪ್ರಸ್ತುತ ಜಾಗತಿಕ ಆರ್ಥಿಕ ಮತ್ತು ರಾಜಕೀಯ ಸನ್ನಿವೇಶದಲ್ಲಿ G20 ಚರ್ಚೆಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು, ಅಸ್ತಿತ್ವದಲ್ಲಿರುವ ಪರಿಸರ ಸವಾಲುಗಳು, ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ (SDGs) ಪ್ರಗತಿಯ ಕೊರತೆ ಮತ್ತು ಸಾಂಕ್ರಾಮಿಕ ವಿಚಾರದ ಕುರಿತು ಚರ್ಚೆಗಳು ನಡೆಯಲಿವೆ. ಇವುಗಳಲ್ಲಿ ಅಸಮವಾದ ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆ, ವಿಶೇಷವಾಗಿ ಜಾಗತಿಕ ದಕ್ಷಿಣದ ದೇಶಗಳಲ್ಲಿ ಸಾಲದ ದುರ್ಬಲತೆಗಳು, ಯುರೋಪಿನಲ್ಲಿ ನಡೆಯುತ್ತಿರುವ ಸಂಘರ್ಷ, ಮತ್ತು ಆಹಾರ ಭದ್ರತೆ ಸವಾಲುಗಳು, ಇಂಧನ ಬಿಕ್ಕಟ್ಟು ಮತ್ತು ವಿಶ್ವದ ಎಲ್ಲಾ ದೇಶಗಳಲ್ಲಿನ ಹಣದುಬ್ಬರದಂತಹ ಅದರ ನಾಕ್-ಆನ್ ಪರಿಣಾಮ ಸೇರಿವೆ. . G20 ನಾಯಕರು ಈ ಸವಾಲುಗಳನ್ನು ಚರ್ಚಿಸಲಿದ್ದು, ಈ ಸವಾಲುಗಳನ್ನು ಜಯಿಸಲು ಸಹಾಯ ಮಾಡಲು ನಿಕಟವಾದ ಬಹುಪಕ್ಷೀಯ ಸಹಕಾರದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾರೆ.
ಇದನ್ನೂ ಓದಿ: ಯುದ್ಧದ ಪರಿಣಾಮಗಳನ್ನು ನೋಡಿದ್ದೇವೆ, ಶಾಂತಿ ಮಾತುಕತೆಗೆ ಮರಳಿ: ರಷ್ಯಾಗೆ ಜೈಶಂಕರ್ ಸಲಹೆ
ಏತನ್ಮಧ್ಯೆ, ನವೆಂಬರ್ 16 ರಂದು, ಬಾಲಿಯ ಮ್ಯಾಂಗ್ರೋವ್ ಅರಣ್ಯವಾದ ತಮನ್ ಹುತಾನ್ ರಾಯಾಗೆ ನಾಯಕರ ಭೇಟಿಯನ್ನು ಯೋಜಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಕ್ವಾತ್ರಾ ಅವರು, "ನಿಮಗೆ ತಿಳಿದಿರುವಂತೆ, ಮ್ಯಾಂಗ್ರೋವ್ಗಳು ಕರಾವಳಿಯ ಜೀವವೈವಿಧ್ಯತೆಯ ಪ್ರಮುಖ ಆಶ್ರಯವಾಗಿದೆ ಮತ್ತು ವಿಪರೀತ ಹವಾಮಾನ ಘಟನೆಗಳ ವಿರುದ್ಧ ಜೈವಿಕ ಗುರಾಣಿಗಳಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಪ್ರಮುಖವಾಗಿ ಇಂಗಾಲದ ಪರಿಣಾಮಗಳನ್ನು ತಗ್ಗಿಸುತ್ತವೆ. ಭಾರತದ ಸ್ವಂತ ಮ್ಯಾಂಗ್ರೋವ್ ರಕ್ಷಣೆ ಮಹತ್ವದ್ದಾಗಿದ್ದು, ಇದು ವಿಶ್ವದ ಅತ್ಯುನ್ನತ ಜೀವವೈವಿಧ್ಯಗಳಲ್ಲಿ ಒಂದಾಗಿದೆ. ನಾವು ಇತ್ತೀಚೆಗೆ ಗ್ಲೋಬಲ್ ಮ್ಯಾಂಗ್ರೋವ್ ಅಲೈಯನ್ಸ್ಗೆ ಸೇರಲು ಒಪ್ಪಿಕೊಂಡಿದ್ದೇವೆ, ಇದನ್ನು ಇಂಡೋನೇಷ್ಯಾ ಮತ್ತು ಯುಎಇ ಜಂಟಿಯಾಗಿ ಪ್ರಾರಂಭಿಸಿದವು ಎಂದು ಅವರು ಹೇಳಿದರು.