ಖಲಿಸ್ತಾನಿ ಪ್ರತ್ಯೇಕತಾವಾದಿ ಹತ್ಯೆ ಯತ್ನ ಪ್ರಕರಣ: ಭಾರತದಿಂದ 'ಅರ್ಥಪೂರ್ಣ ಹೊಣೆಗಾರಿಕೆ' ಬಯಸುತ್ತೇವೆ- ಅಮೇರಿಕಾ

ಮಾತುಕತೆಗಾಗಿ ಅಮೆರಿಕಾಗೆ ಭಾರತೀಯ ತನಿಖಾ ಸಮಿತಿಯ ಕಳೆದ ವಾರ ಭೇಟಿಗೆ ಪ್ರತಿಕ್ರಿಯೆಯಾಗಿ ವೇದಾಂತ್ ಪಟೇಲ್ ಈ ಹೇಳಿಕೆ ನೀಡಿದ್ದಾರೆ.
Sikh separatist leader Gurpatwant Singh Pannun
ಉಗ್ರ ಗುರ್ಪತ್ವಂತ್ ಸಿಂಗ್ ಪನ್ನುನ್ online desk
Updated on

ನವದೆಹಲಿ: ಅಮೆರಿಕಾದ ನೆಲದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರ್ಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಯ ವಿಫಲ ಯತ್ನದ ಬಗ್ಗೆ ಭಾರತದ ತನಿಖೆಯ "ಅರ್ಥಪೂರ್ಣ ಹೊಣೆಗಾರಿಕೆ" ಇರುವವರೆಗೆ ತಾನು ಸಂಪೂರ್ಣವಾಗಿ ತೃಪ್ತನಾಗುವುದಿಲ್ಲ ಎಂದು ಅಮೇರಿಕಾ ಹೇಳಿದೆ.

"ನಾವು ಆ ತನಿಖೆಯ ಫಲಿತಾಂಶಗಳ ಆಧಾರದ ಮೇಲೆ ಹೊಣೆಗಾರಿಕೆಯನ್ನು ನಿರೀಕ್ಷಿಸುತ್ತೇವೆ ಮತ್ತು ನೋಡಲು ಬಯಸುತ್ತೇವೆ ಮತ್ತು ಆ ತನಿಖೆಯಿಂದ ಉಂಟಾಗುವ ಅರ್ಥಪೂರ್ಣ ಹೊಣೆಗಾರಿಕೆ ಇರುವವರೆಗೆ ಯುನೈಟೆಡ್ ಸ್ಟೇಟ್ಸ್ ಸಂಪೂರ್ಣವಾಗಿ ತೃಪ್ತರಾಗುವುದಿಲ್ಲ" ಎಂದು ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ್ ಪಟೇಲ್ ಹೇಳಿದ್ದಾರೆ.

ಮಾತುಕತೆಗಾಗಿ ಅಮೆರಿಕಾಕ್ಕೆ ಭಾರತೀಯ ತನಿಖಾ ಸಮಿತಿಯ ಕಳೆದ ವಾರ ಭೇಟಿಗೆ ಪ್ರತಿಕ್ರಿಯೆಯಾಗಿ ವೇದಾಂತ್ ಪಟೇಲ್ ಈ ಹೇಳಿಕೆ ನೀಡಿದ್ದಾರೆ.

ಅಮೇರಿಕಾ ನೆಲದಲ್ಲಿ ಪನ್ನುನ್‌ನ್ನು ಕೊಲ್ಲುವ ಅಂತಹ ಯಾವುದೇ ಸಂಚಿನೊಂದಿಗೆ ತನ್ನ ಸಹಭಾಗಿತ್ವ ಅಥವಾ ಒಳಗೊಳ್ಳುವಿಕೆಯನ್ನು ಭಾರತ ಸರ್ಕಾರ ನಿರಾಕರಿಸಿದೆ. ಅಮೆರಿಕದ ಆರೋಪದ ನಂತರ, ಈ ವಿಷಯದ ಬಗ್ಗೆ ತನಿಖೆ ನಡೆಸಲು ಭಾರತ ತನಿಖಾ ಸಮಿತಿಯನ್ನು ರಚಿಸಿತ್ತು.

Sikh separatist leader Gurpatwant Singh Pannun
ಅನಪೇಕ್ಷಿತ ಮತ್ತು ಆಧಾರರಹಿತ: ಭಾರತ ಸರ್ಕಾರದ ವಿರುದ್ಧ ಪನ್ನುನ್ ಕೇಸ್ ಗೆ MEA ಪ್ರತಿಕ್ರಿಯೆ

ಕಳೆದ ಬೇಸಿಗೆಯಲ್ಲಿ ಪ್ರೇಗ್‌ನಲ್ಲಿ ಬಂಧನಕ್ಕೊಳಗಾಗಿದ್ದ ಭಾರತೀಯ ಪ್ರಜೆ ಎನ್ನಲಾಗುತ್ತಿರುವ ನಿಖಿಲ್ ಗುಪ್ತಾನನ್ನು ಯುಎಸ್‌ಗೆ ಹಸ್ತಾಂತರಿಸಲಾಗಿದೆ. ಅಮೇರಿಕಾ ಇತ್ತೀಚೆಗೆ ಮತ್ತೊಬ್ಬ ಭಾರತೀಯ ವಿಕಾಸ್ ಯಾದವ್ ಅವರನ್ನು ಕೊಲೆ-ಬಾಡಿಗೆ ಸಂಚಿನ ಮಾಸ್ಟರ್ ಮೈಂಡ್ ಎಂದು ಹೆಸರಿಸಿದ್ದು, ಆತನ ಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಹೇಳಿಕೊಂಡಿದೆ.

ಸಿಸಿ1 ಎಂದು ಹೆಸರಿಸಲಾದ ಅಧಿಕಾರಿ, ನಂತರ ಯಾದವ್ ಎಂದು ಗುರುತಿಸಲ್ಪಟ್ಟರು, ಆತ ಸರ್ಕಾರಕ್ಕಾಗಿ ಕೆಲಸ ಮಾಡುತ್ತಿಲ್ಲ ಎಂದು ಭಾರತ ಇತ್ತೀಚೆಗೆ ಹೇಳಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com