ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತದ ಜತೆ UK ಇದೆ: ಸರ್ವಪಕ್ಷ ನಿಯೋಗಕ್ಕೆ ಇಂಡೋ-ಪೆಸಿಫಿಕ್ ಸಚಿವೆ

ಏಪ್ರಿಲ್‌ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಯುಕೆ ಖಂಡಿಸಿದ್ದನ್ನು ಕ್ಯಾಥರೀನ್ ವೆಸ್ಟ್ ಪುನರುಚ್ಚರಿಸಿದರು ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಸ್ಥಿರತೆಗೆ ಭಾರತದ ಕೊಡುಗೆಗಳನ್ನು ಶ್ಲಾಘಿಸಿದರು.
ಕ್ಯಾಥರೀನ್ ವೆಸ್ಟ್ ಹಾಗೂ ಭಾರತದ ಸಂಸದರು
ಕ್ಯಾಥರೀನ್ ವೆಸ್ಟ್ ಹಾಗೂ ಭಾರತದ ಸಂಸದರು
Updated on

ಲಂಡನ್: ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟವನ್ನು ಬ್ರಿಟನ್ ಬೆಂಬಲಿಸುತ್ತದೆ ಎಂದು ಇಂಡೋ-ಪೆಸಿಫಿಕ್ ಸಚಿವೆ ಕ್ಯಾಥರೀನ್ ವೆಸ್ಟ್ ಅವರು ಸೋಮವಾರ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್ ನೇತೃತ್ವದ ಸರ್ವಪಕ್ಷ ನಿಯೋಗಕ್ಕೆ ತಿಳಿಸಿದ್ದಾರೆ.

ಭಾರತದ ಸರ್ವಪಕ್ಷ ಸಂಸದರ ನಿಯೋಗ ಇಂದು ಲಂಡನ್‌ನ ವಿದೇಶಾಂಗ, ಕಾಮನ್‌ವೆಲ್ತ್ ಮತ್ತು ಅಭಿವೃದ್ಧಿ ಕಚೇರಿಯಲ್ಲಿ(ಎಫ್‌ಸಿಡಿಒ) ಕ್ಯಾಥರೀನ್ ವೆಸ್ಟ್ ಅವರೊಂದಿಗೆ ಸಭೆ ನಡೆಸಿತು.

ಈ ವೇಳೆ ಭಯೋತ್ಪಾದನೆಯ ವಿರುದ್ಧ ಭಾರತದ ಸಂಕಲ್ಪವನ್ನು ಸಂಸದರ ನಿಯೋಗವು ಎತ್ತಿ ತೋರಿಸಿತು ಮತ್ತು ಮಾನವೀಯತೆಯ ಹಿತಾಸಕ್ತಿಗಳಿಂದ ಇದನ್ನು ನಿರ್ಮೂಲನೆ ಮಾಡಬೇಕು ಎಂದು ಒತ್ತಿ ಹೇಳಿದೆ.

ಕ್ಯಾಥರೀನ್ ವೆಸ್ಟ್ ಹಾಗೂ ಭಾರತದ ಸಂಸದರು
Little disappointed: ಆಪರೇಷನ್ ಸಿಂಧೂರ್‌ ಬಗ್ಗೆ ಕೊಲಂಬಿಯಾ ನಿಲುವಿಗೆ ತರೂರ್ ಬೇಸರ!

ಏಪ್ರಿಲ್‌ನಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಯುಕೆ ಖಂಡಿಸಿದ್ದನ್ನು ಕ್ಯಾಥರೀನ್ ವೆಸ್ಟ್ ಪುನರುಚ್ಚರಿಸಿದರು ಮತ್ತು ಇಂಡೋ-ಪೆಸಿಫಿಕ್‌ನಲ್ಲಿ ಸ್ಥಿರತೆಗೆ ಭಾರತದ ಕೊಡುಗೆಗಳನ್ನು ಶ್ಲಾಘಿಸಿದರು.

"ಭಯೋತ್ಪಾದನೆಯು ಎಲ್ಲಾ ರಾಷ್ಟ್ರಗಳಿಗೆ ಬೆದರಿಕೆಯಾಗಿ ಉಳಿದಿದೆ. ಆದ್ದರಿಂದ ಎಲ್ಲಾ ಮಾನವೀಯತೆಯ ಹಿತಾಸಕ್ತಿಗಳಿಗಾಗಿ ಜಗತ್ತು ಈ ಪಿಡುಗನ್ನು ನಿರ್ಮೂಲನೆ ಮಾಡಬೇಕಾಗಿದೆ ಎಂದು ವೆಸ್ಟ್ ಹೇಳಿದರು" ಎಂದು ಸಭೆಯ ನಂತರ ಭಾರತದ ಹೈಕಮಿಷನ್ ಸಾಮಾಜಿಕ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com