ಭಾರತ ಸೇನೆ ದಾಳಿ ಆತಂಕ: ಕರಾಚಿ, ಲಾಹೋರ್ ವಾಯುಪ್ರದೇಶ ತಾತ್ಕಾಲಿಕ ಮುಚ್ಚಿದ ಪಾಕಿಸ್ತಾನ

ಭಾರತದಿಂದ ಪ್ರತೀಕಾರದ ಕ್ರಮದ ಬಗ್ಗೆ ಇಸ್ಲಾಮಾಬಾದ್‌ನ ಆತಂಕದ ನಡುವೆ ವಾಯುಯಾನ ಅಧಿಕಾರಿಗಳ ಘೋಷಣೆ ಬಂದಿದೆ.
Pakistan closes Karachi, Lahore airspace temporarily
ವಾಯುಪ್ರದೇಶ ಮುಚ್ಚಿದ ಪಾಕಿಸ್ತಾನ (ಸಾಂದರ್ಭಿಕ ಚಿತ್ರ)
Updated on

ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತ ಸೇನಾದಾಳಿ ನಡೆಸಲಿದೆ ಎಂಬ ಆತಂಕದಲ್ಲಿರುವ ಪಾಕಿಸ್ತಾನ ಭಾರತಕ್ಕೆ ತನ್ನ ವಾಯುಪ್ರದೇಶ ಮುಚ್ಚಿದ್ದಲ್ಲದೇ ಇದೀಗ ತನ್ನದೇ ಎರಡು ಪ್ರಮುಖ ನಗರಗಳ ವಾಯು ಪ್ರದೇಶವನ್ನೂ ಕೂಡ ತಾತ್ಕಾಲಿಕವಾಗಿ ಮುಚ್ಚಿದೆ.

ಪಾಕಿಸ್ತಾನದ ಪ್ರಮುಖನಗರಗಳಾದ ಲಾಹೋರ್ ಮತ್ತು ಕರಾಚಿಯ ವಾಯುಪ್ರದೇಶವನ್ನು ಪಾಕಿಸ್ತಾನ ಸರ್ಕಾರ ತಾತ್ಕಾಲಿಕವಾಗಿ ಮುಚ್ಚಿದ್ದು, ಈ ನಗರಗಳ ಮೇಲೆ ಯಾವುದೇ ರೀತಿಯ ವೈಮಾನಿಕ ಹಾರಾಟವನ್ನು ಸರ್ಕಾರ ನಿಷೇಧಿಸಿದೆ.

ಭದ್ರತಾ ಆತಂಕದ ಮೇರೆಗೆ, ಮೇ ತಿಂಗಳಲ್ಲಿ ಪ್ರತಿದಿನ ಸೀಮಿತ ಅವಧಿಗೆ ಕರಾಚಿ ಮತ್ತು ಲಾಹೋರ್ ವಿಮಾನ ಮಾಹಿತಿ ಪ್ರದೇಶಗಳ ನಿರ್ದಿಷ್ಟ ಭಾಗಗಳನ್ನು ಮುಚ್ಚುವುದಾಗಿ ಪಾಕಿಸ್ತಾನ ಸರ್ಕಾರ ಘೋಷಿಸಿದೆ ಎಂದು ಪಾಕ್ ಮಾಧ್ಯಮ ವರದಿಯೊಂದು ಗುರುವಾರ ತಿಳಿಸಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನ ಮತ್ತು ಇಸ್ಲಾಮಾಬಾದ್ ನಡುವೆ ಹೆಚ್ಚಿದ ಉದ್ವಿಗ್ನತೆ ಮತ್ತು ಭಾರತದಿಂದ ಪ್ರತೀಕಾರದ ಕ್ರಮದ ಬಗ್ಗೆ ಇಸ್ಲಾಮಾಬಾದ್‌ನ ಆತಂಕದ ನಡುವೆ ವಾಯುಯಾನ ಅಧಿಕಾರಿಗಳ ಘೋಷಣೆ ಬಂದಿದೆ.

Pakistan closes Karachi, Lahore airspace temporarily
'Pahalgam ದಾಳಿಕೋರ ಉಗ್ರರು ಇನ್ನೂ ದಕ್ಷಿಣ ಕಾಶ್ಮೀರದಲ್ಲಿ ಅಡಗಿದ್ದಾರೆ, ಸ್ಥಳೀಯರಿಂದ ಆಹಾರ, ಇತರೆ ವಸ್ತುಗಳ ನೆರವು ಸಿಗುತ್ತಿದೆ'!

"ಮೇ 1 ರಿಂದ ಮೇ 31 ರವರೆಗೆ ಸ್ಥಳೀಯ ಸಮಯ ಬೆಳಿಗ್ಗೆ 4:00 ರಿಂದ ಬೆಳಿಗ್ಗೆ 8:00 ರವರೆಗೆ ನಿರ್ಬಂಧಿತ ವಾಯುಪ್ರದೇಶವನ್ನು ಮುಚ್ಚಲಾಗುತ್ತದೆ" ಎಂದು ಅಧಿಕೃತ ಸೂಚನೆಯನ್ನು ಉಲ್ಲೇಖಿಸಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.

ನಾಗರಿಕ ವಿಮಾನಯಾನ ಪ್ರಾಧಿಕಾರ (ಸಿಎಎ) ವಾಯುಪ್ರದೇಶ ಮುಚ್ಚುವಿಕೆ ನಿರ್ಣಯದಿಂದ ವಾಣಿಜ್ಯ ಹಾರಾಟ ಕಾರ್ಯಾಚರಣೆಗಳಿಗೆ ಗಮನಾರ್ಹವಾಗಿ ಅಡ್ಡಿಯಾಗುವುದಿಲ್ಲ. ಏಕೆಂದರೆ ನಿರ್ಬಂಧಿತ ಸಮಯದಲ್ಲಿ ವಿಮಾನಗಳನ್ನು ಪರ್ಯಾಯ ವಿಮಾನ ಮಾರ್ಗಗಳ ಮೂಲಕ ತಿರುಗಿಸಲಾಗುತ್ತದೆ ಎಂದು ಹೇಳಿದೆ.

Pakistan closes Karachi, Lahore airspace temporarily
ಇಂಥಹ ಕ್ರಮಗಳು ಸೇನೆಯ ಸ್ಥೈರ್ಯ ಕುಗ್ಗಿಸುತ್ತೆ; ಸಮಯ ವ್ಯರ್ಥ ಮಾಡ್ಬೇಡಿ: Pahalgam attack ಕುರಿತ ಪಿಐಎಲ್ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್ ತರಾಟೆ

ಪಾಕ್ ಪ್ರಮುಖ ನಗರಗಳೇ ಭಾರತದ ಟಾರ್ಗೆಟ್?

ಪಹಲ್ಗಾಮ್ ಉಗ್ರ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿರುವ ಭಾರತ ಈ ಬಾಕಿ ಪಾಕಿಸ್ತಾನದ ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವ ಸಾಧ್ಯತೆ ಇದೆ. ಪ್ರಮುಖವಾಗಿ ಭಾರತದ ಗಡಿ ಪ್ರದೇಶಕ್ಕೆ ಹತ್ತಿರ ಇರುವ ಕರಾಚಿ ಮತ್ತು ಲಾಹೋರ್ ನಗರಗಳನ್ನು ಭಾರತ ಗುರಿಯಾಗಿಸಿಕೊಂಡು ದಾಳಿ ಮಾಡಬಹುದು ಎಂದು ಪಾಕ್ ಮಾಧ್ಯಮಗಳು ವಿಶ್ಲೇಷಿಸುತ್ತಿವೆ. ಇದೇ ಕಾರಣಕ್ಕೆ ಪಾಕ್ ಸರ್ಕಾರ ಈ ನಿರ್ಣಯ ಕೈಗೊಂಡಿದೆ ಎಂದೂ ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com