ಕದನ ವಿರಾಮ ಘೋಷಣೆ ಬೆನ್ನಲ್ಲೇ ವಾಯು ಪ್ರದೇಶ ಸಂಚಾರಕ್ಕೆ ಮುಕ್ತ ಎಂದ ಪಾಕಿಸ್ತಾನ!

ದೇಶದ ಎಲ್ಲಾ ವಿಮಾನ ನಿಲ್ದಾಣಗಳು ಸಾಮಾನ್ಯ ವಿಮಾನ ಕಾರ್ಯಾಚರಣೆಗಳಿಗೆ ಲಭ್ಯವಿದೆ. ಪ್ರಯಾಣಿಕರು ತಮ್ಮ ವಿಮಾನಗಳ ಇತ್ತೀಚಿನ ವೇಳಾಪಟ್ಟಿಗಾಗಿ ಸಂಬಂಧಿತ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ಕೋರಲಾಗಿದೆ ಎಂದು PAA ಹೇಳಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಇಸ್ಲಾಮಾಬಾದ್: ಭಾರತದೊಂದಿಗೆ ಕದನ ವಿರಾಮ ಘೋಷಣೆಯೊಂದಿಗೆ 'ಬೀಸೋ ದೊಣ್ಣೆಯಿಂದ ಪಾರಾದ ಪಾಕಿಸ್ತಾನ, ತನ್ನ ವಾಯುಪ್ರದೇಶವನ್ನು ಎಲ್ಲಾ ರೀತಿಯ ವಾಯು ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಶನಿವಾರ ಪ್ರಕಟಿಸಿದೆ.

ಭಾರತದೊಂದಿಗೆ ಉದ್ವಿಗ್ನತೆ ಕೊನೆಗೊಂಡಂತೆ ದೇಶ ಸಹಜ ಸ್ಥಿತಿಗೆ ಮರಳುತ್ತಿದೆ. ಹೀಗಾಗಿ ಪಾಕಿಸ್ತಾನ ವಿಮಾನ ನಿಲ್ದಾಣ ಪ್ರಾಧಿಕಾರ (PAA) ಈ ಘೋಷಣೆ ಮಾಡಿದೆ.

ದೇಶದ ಎಲ್ಲಾ ವಿಮಾನ ನಿಲ್ದಾಣಗಳು ಸಾಮಾನ್ಯ ವಿಮಾನ ಕಾರ್ಯಾಚರಣೆಗಳಿಗೆ ಲಭ್ಯವಿದೆ. ಪ್ರಯಾಣಿಕರು ತಮ್ಮ ವಿಮಾನಗಳ ಇತ್ತೀಚಿನ ವೇಳಾಪಟ್ಟಿಗಾಗಿ ಸಂಬಂಧಿತ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಲು ಕೋರಲಾಗಿದೆ ಎಂದು PAA ಹೇಳಿದೆ.

ಎಲ್ಲಾ ರೀತಿಯ ವಿಮಾನಗಳಿಗೆ ಪಾಕಿಸ್ತಾನದ ವಾಯುಪ್ರದೇಶವನ್ನು ಸಂಪೂರ್ಣವಾಗಿ ಪುನ: ಸ್ಥಾಪಿಸಲಾಗಿದೆ ಮತ್ತು ದೇಶದ ಎಲ್ಲಾ ವಿಮಾನ ನಿಲ್ದಾಣಗಳು ಸಾಮಾನ್ಯ ವಿಮಾನ ಕಾರ್ಯಾಚರಣೆಗೆ ಲಭ್ಯವಿದೆ ಎಂದು ಹೇಳಿದೆ.

ಭಾರತದೊಂದಿಗಿನ ಉದ್ವಿಗ್ನತೆಯೊಂದಿಗೆ ಪಾಕಿಸ್ತಾನದ ವಾಯುಪ್ರದೇಶ ಮತ್ತು ಮಾರ್ಗಗಳನ್ನು ನಿರ್ದಿಷ್ಟ ಅವಧಿಗೆ ಮುಚ್ಚಲಾಗಿತ್ತು. ಇದು ನಿಯಮಿತ ವಾಯು ಸಂಚಾರಕ್ಕೆ ಅಡ್ಡಿಯಾಗಿ, ಪ್ರಯಾಣಿಕರಿಗೆ ತೀವ್ರ ಸಮಸ್ಯೆಯಾಗಿತ್ತು.

Casual Images
ಎರಡ್ಮೂರು ದಿನಗಳ ಹಿಂದೆಯೇ ಕದನ ವಿರಾಮ ಒಪ್ಪಂದ ಆಗ್ಬೇಕಿತ್ತು: ಸಿಎಂ ಒಮರ್ ಅಬ್ದುಲ್ಲಾ

ವಾಯುಪ್ರದೇಶವನ್ನು ತೆರೆಯುವ ನಿರ್ಧಾರದಿಂದ ಪಾಕಿಸ್ತಾನ ಮತ್ತು ಭಾರತದ ವಿಮಾನಗಳ ಹಾರಾಟ ಸೇವೆ ಪುನರ್ ಆರಂಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com