“ನಮ್ಮ ತಾಳ್ಮೆ ಪರೀಕ್ಷಿಸಬೇಡಿ; ಉಗ್ರ ಚಟುವಟಿಕೆ ನಿಲ್ಲಿಸದಿದ್ದರೆ ಭೂಪಟದಲ್ಲಿರಬೇಕಾ-ಇತಿಹಾಸದಲ್ಲಿರಬೇಕಾ ತೀರ್ಮಾನಿಸಿ”: ಪಾಕಿಸ್ತಾನಕ್ಕೆ ಭಾರತ ಖಡಕ್ ಎಚ್ಚರಿಕೆ

ಪಾಕಿಸ್ತಾನ ಉಗ್ರರನ್ನು ಆಶ್ರಯಿಸಿ ಭಾರತ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದರೆ, ಅವರು ಭೂಗೋಳದ ಭಾಗವಾಗಿರಬೇಕಾ ಅಥವಾ ಇತಿಹಾಸದ ಭಾಗವಾಗಿರಬೇಕಾ ಎಂಬುದನ್ನು ನಿರ್ಧರಿಸಬೇಕು.
Army Chief General Upendra Dwivedi
ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ
Updated on

ನವದೆಹಲಿ: ಭಾರತ ವಿರುದ್ಧ ಉಗ್ರ ಚಟುವಟಿಕೆಗಳನ್ನು ಮುಂದುವರಿಸಿದರೆ ಪಾಕಿಸ್ತಾನ “ಭೂಗೋಳದ ಭಾಗವಾಗಿರಬೇಕಾ ಅಥವಾ ಇತಿಹಾಸದ ಭಾಗವಾಗಿರಬೇಕಾ” ಎಂಬುದನ್ನು ತೀರ್ಮಾನಿಸಿಕೊಳ್ಳಬೇಕಾಗುತ್ತದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಕಠಿಣ ಎಚ್ಚರಿಕೆ ನೀಡಿದ್ದಾರೆ.

ರಾಜಧಾನಿ ದೆಹಲಿಯಲ್ಲಿ ನಡೆದ ‘ಸೇನಾ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ್ ನಂತೆಯೇ ಪರಿಸ್ಥಿತಿ ಮತ್ತೆ ಎದುರಾದರೆ ಭಾರತ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ ಈ ಹೇಳಿಕೆ ನೀಡಿದರು.

“ಪಾಕಿಸ್ತಾನ ಉಗ್ರರನ್ನು ಆಶ್ರಯಿಸಿ ಭಾರತ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದರೆ, ಅವರು ಭೂಗೋಳದ ಭಾಗವಾಗಿರಬೇಕಾ ಅಥವಾ ಇತಿಹಾಸದ ಭಾಗವಾಗಿರಬೇಕಾ ಎಂಬುದನ್ನು ನಿರ್ಧರಿಸಬೇಕು” ಎಂದು ಹೇಳಿದರು.

ಭಾರತದ ಗಡಿ ನುಸುಳುವ ಪ್ರಯತ್ನಗಳು, ಉಗ್ರ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇತ್ತೀಚಿನ ತಿಂಗಳುಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಇದೇ ರೀತಿಯ ಕಠಿಣ ಸಂದೇಶ ನೀಡಿದ್ದರು.

ಕಳೆದ ವರ್ಷ ಗುಜರಾತಿನ ಭುಜ್‌ನಲ್ಲಿ ಮಾತನಾಡಿದ್ದ ರಾಜನಾಥ್ ಸಿಂಗ್, ಪಾಕಿಸ್ತಾನ ಯಾವುದೇ ದುಸ್ಸಾಹಸಕ್ಕೆ ಮುಂದಾದರೆ ಅದರ ಪರಿಣಾಮ ಇತಿಹಾಸ ಮತ್ತು ಭೂಗೋಳ ಎರಡನ್ನೂ ಬದಲಾಯಿಸಬಹುದು ಎಂದು ಎಚ್ಚರಿಸಿದ್ದರು.

Army Chief General Upendra Dwivedi
ಇರಾನ್-ಅಮೆರಿಕ ಮಧ್ಯಸ್ಥಿಕೆಗೆ ಭಾರತ ಸಮರ್ಥ ಎಂದ ರಷ್ಯಾ ವಿದೇಶಾಂಗ ಸಚಿವ; ಪಾಕಿಸ್ತಾನ ಬಗ್ಗೆ ಹೇಳಿದ್ದೇನು?

1965ರ ಭಾರತ–ಪಾಕಿಸ್ತಾನ ಯುದ್ಧವನ್ನು ಉಲ್ಲೇಖಿಸಿದ್ದ ಅವರು, ಭಾರತೀಯ ಸೇನೆ ಲಾಹೋರ್ ಸಮೀಪವರೆಗೆ ತಲುಪಿತ್ತು ಎಂದು ನೆನಪಿಸಿದ್ದರು. “ಕರಾಚಿಗೆ ಹೋಗುವ ನೇರ ಮಾರ್ಗಗಳಲ್ಲಿ ಸರ್ ಕ್ರೀಕ್ ಕೂಡ ಒಂದು” ಎಂದು ಹೇಳಿದ್ದರು.

ಭಾರತದ ನೆಲದ ಮೇಲೆ ನಡೆಯುವ ಯಾವುದೇ ಉಗ್ರ ದಾಳಿಗೆ ತೀವ್ರ ಮತ್ತು ನಿಖರ ಪ್ರತಿಕ್ರಿಯೆ ನೀಡಲಾಗುವುದು ಎಂದು ಭಾರತ ಈಗಾಗಲೇ ಸ್ಪಷ್ಟಪಡಿಸಿದೆ.

ಉಗ್ರರ ತರಬೇತಿ ಶಿಬಿರಗಳು ಸೇರಿದಂತೆ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದ ಸ್ಥಳಗಳನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.

ಅಣ್ವಸ್ತ್ರ ಬೆದರಿಕೆಯನ್ನು ಭಾರತ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂಬ ಸಂದೇಶವನ್ನೂ ಸರ್ಕಾರ ಹಲವು ವೇದಿಕೆಗಳಲ್ಲಿ ಪುನರುಚ್ಚರಿಸಿದೆ. ಉಗ್ರ ಕೃತ್ಯ ಎಸಗುವವರು ಮತ್ತು ಅವರಿಗೆ ಆಶ್ರಯ ನೀಡುವ ರಾಷ್ಟ್ರಗಳ ನಡುವೆ ಯಾವುದೇ ವ್ಯತ್ಯಾಸ ನೋಡುವುದಿಲ್ಲ ಎಂದೂ ಭಾರತ ಎಚ್ಚರಿಸಿದೆ.

ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರೂ ಇದೇ ವಿಚಾರವಾಗಿ ಹೇಳಿಕೆ ನೀಡಿದ್ದರು. ಪಾಕಿಸ್ತಾನದೊಂದಿಗೆ ಮಾತುಕತೆಗೆ ಅವಕಾಶದ ಕಿಟಕಿ ತೆರೆದಿರಬೇಕು ಎಂದು ಹೇಳಿದ್ದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಶಾಂತಿ ಪ್ರಯತ್ನಗಳನ್ನು ಉದಾಹರಣೆಯಾಗಿ ಅವರು ಉಲ್ಲೇಖಿಸಿದ್ದರು.

ಇದೇ ವೇಳೆ ಭಾರತದಲ್ಲಿ ಮಾತುಕತೆಗೆ ಬೆಂಬಲ ವ್ಯಕ್ತವಾಗುತ್ತಿರುವುದು “ಸಕಾರಾತ್ಮಕ ಬೆಳವಣಿಗೆ” ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಪ್ರತಿಕ್ರಿಯಿಸಿದ್ದು, ನವದೆಹಲಿ ಅಧಿಕೃತ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದಾಗಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com