ಆಟೋ ಚಾಲಕಿ ಯಲ್ಲಮ್ಮ 
ಸಾಧನೆ

ಐಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ ಆಟೋ ಚಾಲಕಿ ಯಲ್ಲಮ್ಮ!

22 ಹರೆಯದ ಯೆಲ್ಲಮ್ಮ ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡುತ್ತಿದ್ದರೂ ಆಕೆಯಲ್ಲೊಂದು ಛಲವಿದೆ, ಐಎಎಸ್ ಆಗಬೇಕೆಂಬ ಕನಸೂ...

ಬೆಂಗಳೂರಿನ ಬ್ಯುಸಿ ರಸ್ತೆಗಳಲ್ಲಿ ಯಲ್ಲಮ್ಮ ಆಟೋ ಓಡಿಸುತ್ತಿದ್ದಾರೆ. ಇದು ಈಕೆಯ ಹೊಟ್ಟೆ ಪಾಡು ಮಾತ್ರವಲ್ಲ ಮಹತ್ ಸಾಧನೆಯ ದಾರಿಯಲ್ಲಿರುವ ಓಟವೂ ಹೌದು.
22 ಹರೆಯದ ಯಲ್ಲಮ್ಮ ಬೆಂಗಳೂರಿನಲ್ಲಿ ಆಟೋ ಚಾಲನೆ ಮಾಡುತ್ತಿದ್ದರೂ ಆಕೆಯಲ್ಲೊಂದು ಛಲವಿದೆ, ಐಎಎಸ್ ಆಗಬೇಕೆಂಬ ಕನಸೂ. ಹೌದು ಈಕೆ ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದಾಳೆ. 
ಯಲ್ಲಮ್ಮನಿಗೆ 18 ವರುಷವಿದ್ದಾಗ ಡೆಕೊರೇಟರ್ ಒಬ್ಬನ ಜತೆ ಮದುವೆಯಾಗಿತ್ತು. ಆ ಸಂಬಂಧದಲ್ಲಿ ಒಂದು ಮಗುವೂ ಇದೆ. ಆದರೆ ಈಕೆ ಈಗ ಸಿಂಗಲ್ ಮದರ್.  
ತನ್ನ ಭಾವನ ಸಹಾಯದಿಂದ ಆಟೋ ಚಾಲನೆ ಮಾಡಲು ಕಲಿತ ಯಲ್ಲಮ್ಮನಿಗೆ ಮೊದಲು ಯಾರೊಬ್ಬರೂ ಆಟೋ ನೀಡಲು ಮುಂದೆ ಬರಲಿಲ್ಲ. ಬಾಡಿಗೆಗೆ ಆಟೋ ಚಾಲನೆ ಮಾಡುವುದಾಗಿ ಆಟೋ ಮಾಲೀಕರನ್ನು ಭೇಟಿಯಾದಾಗ, ಮಹಿಳೆಯರಿಗೆ ಆಟೋ ನೀಡುವುದಿಲ್ಲ ಎಂಬ ಉತ್ತರ ಸಿಕ್ಕಿತು. ಹೀಗೆ ತುಂಬ ಪ್ರಯತ್ನಗಳನ್ನು ಮಾಡಿದ ನಂತರ ಮೆಕ್ಯಾನಿಕ್ ಒಬ್ಬರು ದಿನಕ್ಕೆ ರು. 130 ಬಾಡಿಗೆಗೆ ಆಟೋ ಕೊಟ್ಟರು. ಯಲ್ಲಮ್ಮ ಬೆಳಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆ ವರೆಗೆ ಆಟೋ ಚಲಾಯಿಸುತ್ತಾರೆ. ಬಿಡುವಿನಲ್ಲಿ ಸುದ್ದಿ ಪತ್ರಿಕೆ, ಮ್ಯಾಗಜಿನ್‌ಗಳನ್ನೋದಿ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿರುತ್ತಾರೆ.
ದಿನಕ್ಕೆ  ರು. 700-800 ಸಂಪಾದನೆ ಮಾಡುವ ಯಲ್ಲಮ್ಮನಿಗೆ ದುಡಿದ ದುಡ್ಡಿನ ಸಮಾರ್ಧ ಪಾಲು ಆಟೋ ಮಾಲೀಕನಿಗೆ ಮತ್ತು ಇಂಧನಕ್ಕೆ ವ್ಯಯವಾಗುತ್ತದೆ. ಅಷ್ಟೇ ಅಲ್ಲ, ಆಟೋ  ಚಾಲನೆಗಾಗಿ ರೋಡಿಗಿಳಿದಾಗ ಇತರ ಆಟೋ ಚಾಲಕರು ಈಕೆಯಿಂದಾಗಿ ತಮ್ಮ ಬಾಡಿಗೆಗೆ ಸಂಚಕಾರವುಂಟಾಗುತ್ತದೆ ಎಂದು ಮೂತಿ ತಿರುವಿದ್ದೂ ಉಂಟು. ಆದರೆ ಯೆಲ್ಲಮ್ಮ ಧೈರ್ಯಗುಂದದೆ ತಮ್ಮ ಕಾಯಕ ನಿರ್ವಹಿಸುತ್ತಿದ್ದಾರೆ. 
ತನ್ನ ಜೀವನ ನಿರ್ವಹಣೆಯೊಂದಿಗೆ ದೊಡ್ಡ ಕನಸೊಂದನ್ನು ಇಟ್ಟುಕೊಂಡು ಅದಕ್ಕಾಗಿ ಪರಿಶ್ರಮ ಪಡುತ್ತಿರುವ ಯಲ್ಲಮ್ಮನಿಗೆ ಶುಭವಾಗಲಿ.
ಆಕೆಗೆ ನಿಮ್ಮ ಹಾರೈಕೆಯೂ ಇರಲಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT