ಮೇನಕಾ ಗಾಂಧಿ 
ಕೃಷಿ-ಪರಿಸರ

ಬಿಟಿ ಹತ್ತಿ ಮತ್ತು ಕೀಟನಾಶಕಗಳನ್ನು ವಿರುದ್ಧ ಧ್ವನಿ ಎತ್ತಿದ ಮೇನಕಾ ಗಾಂಧಿ

ರಾಷ್ಟೀಯ ಸಾವಯವ ಕೃಷಿ ಸಮಾವೇಶದಲ್ಲಿ ಮಾತನಾಡಿದ ಎಲ್ಲ ಸಚಿವರು, ಕೃಷಿಯ ಸಾಂಪ್ರದಾಯಿಕ ಬಗೆಗಳು ಮನುಷ್ಯ ಆರೋಗ್ಯ ಮತ್ತು ಪರಿಸರದ ಮೇಲೆ

ಚಂಡೀಘರ್: ರಾಷ್ಟೀಯ ಸಾವಯವ ಕೃಷಿ ಸಮಾವೇಶದಲ್ಲಿ ಮಾತನಾಡಿದ ಎಲ್ಲ ಸಚಿವರು, ಕೃಷಿಯ ಸಾಂಪ್ರದಾಯಿಕ ಬಗೆಗಳು ಮನುಷ್ಯ ಆರೋಗ್ಯ ಮತ್ತು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾವಯವ ಕೃಷಿಯ ಕಡಗೆ ಹೊರಳುವುದು ಇಂದಿನ ಅಗತ್ಯ ಮತ್ತು ಸರಿಯಾದ ದಾರಿ ಎಂದು ಕೂಡ ಅಭಿಪ್ರಾಯಪಟ್ಟಿದ್ದಾರೆ.

ಇದೇ ಸಮಾವೇಶದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರಿಂದ ಕೀಟನಾಶಕ ಮತ್ತು ಜೈವಿಕ ತಳಿ ಮಾರ್ಪಡಿಸಿದ(ಜಿಎಂ) ಬೆಳೆಗಳ ವಿರುದ್ಧ ಧ್ವನಿ ಕೇಳಿಬಂತು. ತುಂಬಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಜೈವಿಕ ತಂತ್ರಜ್ಞಾನ ಸಂಸ್ಥೆಗಳ ವಿರುದ್ಧ ಹರಿಹಾಯ್ದರು. "ಬಿಟಿ ಹತ್ತಿಯ ಮಾಲಿಕರು (ಭಾತದಲ್ಲಿ ಬೆಳೆಯಬಹುದಾದ ಜೈವಿಕತಳಿ ಮಾರ್ಪಾಡಿನ ಒಂದೇ ವಾಣಿಜ್ಯ ಬೆಳೆ) ನಮಗೆ ಸುಳ್ಳು ಹೇಳಿದ್ದಾರೆ. ಇದಕ್ಕೆ ಕ್ರಿಮಿನಾಶಕದ ಅವಶ್ಯಕತೆ ಇಲ್ಲ ಎಂದಿದ್ದರು.... ಆದರೆ ಈಗ ನಮಗೆ ಗೊತ್ತಾಗುತ್ತಿದೆ, ಅಪಾಯಕಾರಿ ಕೀಟನಾಶಕಗಳ ಹೊರತಾಗಿ ಬಿ ಟಿ ಬದನೆ ಬೆಳೆಯುವುದಿಲ್ಲ" ಎಂದು ಅವರು ಹೇಳಿದ್ದಾರೆ.

ಜೋಳ ಮತ್ತು ಬಿ ಟಿ ಬದನೆ ಬೆಳೆಯಲು ರೈತರು ಉಪಯೋಗಿಸುತ್ತಿರುವ ನಿಯೋಕಾಟಿನಾಯ್ಡ್ ಕೀಟನಾಶಕದ ಕುರಿತು ಮೇನಕ ಮಾತನಾಡುತ್ತಿದ್ದರು. ಯೂರೋಪಿನ ಹಲವು ದೇಶಗಳು ಈ ಕೀಟನಾಶಕವನ್ನು ನಿಷೇಧಿಸಿದ್ದಾರೆ ಅಥವಾ ಅದರ ಬಳಕೆಯನ್ನು ನಿಯಂತ್ರಿಸಿದ್ದಾರೆ ಆದರೆ ಇದರ ಉಪಯೋಗ ಭಾರತದಲ್ಲಿ ಎಗ್ಗಿಲ್ಲದಂತೆ ಮುಂದುವರೆಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT