ಸಾಂದರ್ಭಿಕ ಚಿತ್ರ 
ಕೃಷಿ-ಪರಿಸರ

ರೈನೋ ಕೊಂಬಿಗೆ ಚಿನ್ನ ವಜ್ರಗಳಿಗಿಂತ ಹೆಚ್ಚು ಬೆಲೆ!

ಭೇಟೆಗಾರರಿಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ ಅಥವಾ ವಜ್ರಕ್ಕಿಂತ ಹೆಚ್ಚಿನ ಹಣ ಗಳಿಸಿಕೊಡುತ್ತದೆ, ಇದು ರೈನೋಸರಸ್ ಅನ್ನು ಅಳಿವಿನಂಚಿಗೆ

ನ್ಯೂಯಾರ್ಕ್: ಭೇಟೆಗಾರರಿಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ ಅಥವಾ ವಜ್ರಕ್ಕಿಂತ ಹೆಚ್ಚಿನ ಹಣ ಗಳಿಸಿಕೊಡುತ್ತದೆ, ಇದು ರೈನೋಸರಸ್ ಅನ್ನು ಅಳಿವಿನಂಚಿಗೆ ತಳ್ಳುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಅಲ್ಲದೆ ವಿಶ್ವದ ಅತಿ ದೊಡ್ಡ ಶಾಖಾಹಾರಿ ಪ್ರಾಣಿಗಳಾದ ಆನೆಗಳು, ರೈನೋಸರಸ್ ಗಳು, ಹಿಪ್ಪಪೋಟಮಸ್ ಮತ್ತು ಗೊರಿಲ್ಲಾಗಳು ಕೂಡ ಅವುಗಳ ಮಾಂಸಕ್ಕೆ ಹಾಗು ಅವುಗಳ ಅಂಗಾಂಗಳ ಅಪಾರ ಬೇಡಿಕೆಗೆ ಅಳಿವಿನಂಚಿಗೆ ಹೋಗುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

"ಉದಾಹರಣೆಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ, ವಜ್ರ ಅಥವಾ ಕೊಕೈನ್  ಗಿಂತ ಹೆಚ್ಚಿನ ಬೆಲೆ ಬಾಳುತ್ತದೆ" ಎಂದು ಅಧ್ಯಯನದ ಮುಖ್ಯ ಲೇಖಕ ಹಾಗು ಅಮೆರಿಕಾದ ಆರೆಗಾನ್ ಸ್ಟೇಟ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಪ್ರೊಫೆಸರ್ ವಿಲಿಯಂ ರಿಪ್ಪಲ್ ತಿಳಿಸಿದ್ದಾರೆ.

೨೦೦೨ ರಿಂದ ೨೦೧೧ ರ ಮಧ್ಯದಲ್ಲಿ ಕಾಡಾನೆಗಳ ಸಂತತಿಯಲ್ಲಿ ೬೨% ಇಳಿಮುಖವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಹಾಗೆಯೇ ೨೦೦೭ ರಿಂದ ೨೦೧೩ ರ ಅವಧಿಯಲ್ಲಿ ಭೇಟೆಯಾಡಿದ ರೈನೋಸರಸ್ ಗಳ ಸಂಖ್ಯೆ ವರ್ಷಕ್ಕೆ ೧೩ ರಿಂದ ೧೦೦೪ ಏರಿದೆ ಎಂದಿದ್ದಾರೆ.

೨೦೧೦ ಮತ್ತು ೨೦೧೨ ರ ಅವಧಿಯಲ್ಲಿ ಸವನ್ನಾ ಆನೆಗಳ ಸಂತತಿಯ ಐದನೇ ಒಂದು ಭಾಗ ಅಂದರೆ ೧ ಲಕ್ಷ ಕಾಡಾನೆಗಳನ್ನು ಭೇಟೆಯಲ್ಲಿ ಕೊಲ್ಲಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

"ಈ ಭೇಟೆಗಳನ್ನು ಕೂಡಲೆ ತಪ್ಪಿಸದೇ ಹೋದರೆ ಪರಿಸರದಲ್ಲಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಸಮತೋಲನ ಉಂಟಾಗಲಿದೆ" ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT