ಸಾಂದರ್ಭಿಕ ಚಿತ್ರ 
ಕೃಷಿ-ಪರಿಸರ

ರೈನೋ ಕೊಂಬಿಗೆ ಚಿನ್ನ ವಜ್ರಗಳಿಗಿಂತ ಹೆಚ್ಚು ಬೆಲೆ!

ಭೇಟೆಗಾರರಿಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ ಅಥವಾ ವಜ್ರಕ್ಕಿಂತ ಹೆಚ್ಚಿನ ಹಣ ಗಳಿಸಿಕೊಡುತ್ತದೆ, ಇದು ರೈನೋಸರಸ್ ಅನ್ನು ಅಳಿವಿನಂಚಿಗೆ

ನ್ಯೂಯಾರ್ಕ್: ಭೇಟೆಗಾರರಿಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ ಅಥವಾ ವಜ್ರಕ್ಕಿಂತ ಹೆಚ್ಚಿನ ಹಣ ಗಳಿಸಿಕೊಡುತ್ತದೆ, ಇದು ರೈನೋಸರಸ್ ಅನ್ನು ಅಳಿವಿನಂಚಿಗೆ ತಳ್ಳುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಅಲ್ಲದೆ ವಿಶ್ವದ ಅತಿ ದೊಡ್ಡ ಶಾಖಾಹಾರಿ ಪ್ರಾಣಿಗಳಾದ ಆನೆಗಳು, ರೈನೋಸರಸ್ ಗಳು, ಹಿಪ್ಪಪೋಟಮಸ್ ಮತ್ತು ಗೊರಿಲ್ಲಾಗಳು ಕೂಡ ಅವುಗಳ ಮಾಂಸಕ್ಕೆ ಹಾಗು ಅವುಗಳ ಅಂಗಾಂಗಳ ಅಪಾರ ಬೇಡಿಕೆಗೆ ಅಳಿವಿನಂಚಿಗೆ ಹೋಗುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

"ಉದಾಹರಣೆಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ, ವಜ್ರ ಅಥವಾ ಕೊಕೈನ್  ಗಿಂತ ಹೆಚ್ಚಿನ ಬೆಲೆ ಬಾಳುತ್ತದೆ" ಎಂದು ಅಧ್ಯಯನದ ಮುಖ್ಯ ಲೇಖಕ ಹಾಗು ಅಮೆರಿಕಾದ ಆರೆಗಾನ್ ಸ್ಟೇಟ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಪ್ರೊಫೆಸರ್ ವಿಲಿಯಂ ರಿಪ್ಪಲ್ ತಿಳಿಸಿದ್ದಾರೆ.

೨೦೦೨ ರಿಂದ ೨೦೧೧ ರ ಮಧ್ಯದಲ್ಲಿ ಕಾಡಾನೆಗಳ ಸಂತತಿಯಲ್ಲಿ ೬೨% ಇಳಿಮುಖವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಹಾಗೆಯೇ ೨೦೦೭ ರಿಂದ ೨೦೧೩ ರ ಅವಧಿಯಲ್ಲಿ ಭೇಟೆಯಾಡಿದ ರೈನೋಸರಸ್ ಗಳ ಸಂಖ್ಯೆ ವರ್ಷಕ್ಕೆ ೧೩ ರಿಂದ ೧೦೦೪ ಏರಿದೆ ಎಂದಿದ್ದಾರೆ.

೨೦೧೦ ಮತ್ತು ೨೦೧೨ ರ ಅವಧಿಯಲ್ಲಿ ಸವನ್ನಾ ಆನೆಗಳ ಸಂತತಿಯ ಐದನೇ ಒಂದು ಭಾಗ ಅಂದರೆ ೧ ಲಕ್ಷ ಕಾಡಾನೆಗಳನ್ನು ಭೇಟೆಯಲ್ಲಿ ಕೊಲ್ಲಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

"ಈ ಭೇಟೆಗಳನ್ನು ಕೂಡಲೆ ತಪ್ಪಿಸದೇ ಹೋದರೆ ಪರಿಸರದಲ್ಲಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಸಮತೋಲನ ಉಂಟಾಗಲಿದೆ" ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್, ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

ಲೆಬನಾನ್ ನಲ್ಲಿ ಇಸ್ರೇಲ್ ಆರ್ಭಟ: ಮನೆಗಳ ಮೇಲೆ ಸ್ಫೋಟಕಗಳಿಂದ ದಾಳಿ; ಹಲವು ಹಳ್ಳಿಗಳು ನಾಮಾವಶೇಷ!

IPL 2026: MI vs RCB; ಫಿಲ್ ಸಾಲ್ಟ್, ಕೊಹ್ಲಿ, ಪಾಟಿದಾರ್ ಭರ್ಜರಿ ಬ್ಯಾಟಿಂಗ್, ಮುಂಬೈಗೆ ಗೆಲ್ಲಲು 241 ರನ್ ಬೃಹತ್ ಗುರಿ!

SCROLL FOR NEXT