ಸಾಂದರ್ಭಿಕ ಚಿತ್ರ 
ಕೃಷಿ-ಪರಿಸರ

ರೈನೋ ಕೊಂಬಿಗೆ ಚಿನ್ನ ವಜ್ರಗಳಿಗಿಂತ ಹೆಚ್ಚು ಬೆಲೆ!

ಭೇಟೆಗಾರರಿಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ ಅಥವಾ ವಜ್ರಕ್ಕಿಂತ ಹೆಚ್ಚಿನ ಹಣ ಗಳಿಸಿಕೊಡುತ್ತದೆ, ಇದು ರೈನೋಸರಸ್ ಅನ್ನು ಅಳಿವಿನಂಚಿಗೆ

ನ್ಯೂಯಾರ್ಕ್: ಭೇಟೆಗಾರರಿಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ ಅಥವಾ ವಜ್ರಕ್ಕಿಂತ ಹೆಚ್ಚಿನ ಹಣ ಗಳಿಸಿಕೊಡುತ್ತದೆ, ಇದು ರೈನೋಸರಸ್ ಅನ್ನು ಅಳಿವಿನಂಚಿಗೆ ತಳ್ಳುತ್ತಿದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಅಲ್ಲದೆ ವಿಶ್ವದ ಅತಿ ದೊಡ್ಡ ಶಾಖಾಹಾರಿ ಪ್ರಾಣಿಗಳಾದ ಆನೆಗಳು, ರೈನೋಸರಸ್ ಗಳು, ಹಿಪ್ಪಪೋಟಮಸ್ ಮತ್ತು ಗೊರಿಲ್ಲಾಗಳು ಕೂಡ ಅವುಗಳ ಮಾಂಸಕ್ಕೆ ಹಾಗು ಅವುಗಳ ಅಂಗಾಂಗಳ ಅಪಾರ ಬೇಡಿಕೆಗೆ ಅಳಿವಿನಂಚಿಗೆ ಹೋಗುವ ಸಾಧ್ಯತೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

"ಉದಾಹರಣೆಗೆ ರೈನೋಸರಸ್ ನ ಕೊಂಬು ಅಷ್ಟೇ ತೂಗುವ ಚಿನ್ನ, ವಜ್ರ ಅಥವಾ ಕೊಕೈನ್  ಗಿಂತ ಹೆಚ್ಚಿನ ಬೆಲೆ ಬಾಳುತ್ತದೆ" ಎಂದು ಅಧ್ಯಯನದ ಮುಖ್ಯ ಲೇಖಕ ಹಾಗು ಅಮೆರಿಕಾದ ಆರೆಗಾನ್ ಸ್ಟೇಟ್ ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ಪ್ರೊಫೆಸರ್ ವಿಲಿಯಂ ರಿಪ್ಪಲ್ ತಿಳಿಸಿದ್ದಾರೆ.

೨೦೦೨ ರಿಂದ ೨೦೧೧ ರ ಮಧ್ಯದಲ್ಲಿ ಕಾಡಾನೆಗಳ ಸಂತತಿಯಲ್ಲಿ ೬೨% ಇಳಿಮುಖವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಹಾಗೆಯೇ ೨೦೦೭ ರಿಂದ ೨೦೧೩ ರ ಅವಧಿಯಲ್ಲಿ ಭೇಟೆಯಾಡಿದ ರೈನೋಸರಸ್ ಗಳ ಸಂಖ್ಯೆ ವರ್ಷಕ್ಕೆ ೧೩ ರಿಂದ ೧೦೦೪ ಏರಿದೆ ಎಂದಿದ್ದಾರೆ.

೨೦೧೦ ಮತ್ತು ೨೦೧೨ ರ ಅವಧಿಯಲ್ಲಿ ಸವನ್ನಾ ಆನೆಗಳ ಸಂತತಿಯ ಐದನೇ ಒಂದು ಭಾಗ ಅಂದರೆ ೧ ಲಕ್ಷ ಕಾಡಾನೆಗಳನ್ನು ಭೇಟೆಯಲ್ಲಿ ಕೊಲ್ಲಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

"ಈ ಭೇಟೆಗಳನ್ನು ಕೂಡಲೆ ತಪ್ಪಿಸದೇ ಹೋದರೆ ಪರಿಸರದಲ್ಲಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅಸಮತೋಲನ ಉಂಟಾಗಲಿದೆ" ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!