ಸಾಂದರ್ಭಿಕ ಚಿತ್ರ 
ಕೃಷಿ-ಪರಿಸರ

ಕರುನಾಡಲ್ಲಿ ಫಿಲಿಫೈನ್ಸ್ ಮೆಣಸು

ತೀರ್ಥಹಳ್ಳಿಯಿಂದ 26 ಕಿ.ಮೀ ಪಯಣಿಸಿದರೆ ಮಡುಬ ಸಿಗುತ್ತದೆ. ಬಲಬದಿ ತಿರುಗಿ ಪುನಃ 7 ಕಿ.ಮೀ ಪಯಣಿಸಿದರೆ ಸಿಗುವುದೇ ಸತ್ಯನಾರಾಯಣ...

ತೀರ್ಥಹಳ್ಳಿಯಿಂದ 26 ಕಿ.ಮೀ ಪಯಣಿಸಿದರೆ ಮಡುಬ ಸಿಗುತ್ತದೆ. ಬಲಬದಿ ತಿರುಗಿ ಪುನಃ 7 ಕಿ.ಮೀ ಪಯಣಿಸಿದರೆ ಸಿಗುವುದೇ ಸತ್ಯನಾರಾಯಣ ಆಂಬ್ಳೆಯವರ ಕೃಷಿ ಕಣಜ. ಫಿಲಿಫೈನ್ಸ್‌ನಿಂದ ಮೆಣಸು ಬೀಜ ತರಿಸಿ ಕಾಕ್‌ಫಿಟ್‌ನಲ್ಲಿ ಬೆಳೆದು ಯಶಸ್ಸು ಕಂಡಿದ್ದಾರೆ.
ಬೆಳೆಯುವ ಬಗೆ ಹೀಗೆ: ಎರಡೂವರೆ ಅಡಿಯ ಬೆಡ್ ನಿರ್ಮಿಸಬೇಕು. ಇದರ ಎತ್ತರ 8 ಇಂಚು, ಮಧ್ಯೆ ಒಂದೂವರೆ ಅಡಿ ದಾರಿ, ಅದರ ಮೇಲೆ ಡ್ರಿಪ್‌ಲೈನ್ ಹಾಯಿಸಿ ತದನಂತರ ಅದರ ಮೇಲೆ ಮಲ್ಚಿಂಗ್ ಪೇಪರ್ ಹಾಸಬೇಕು. ಬೆಡ್ ಸಿದ್ಧವಾದ ನಂತರ, ಮಧ್ಯ ಭಾಗಕ್ಕೆ ಕೆಂಪು ಮಣ್ಣು ಹಾಸುತ್ತಾ ಹೋಗಬೇಕು. ಒಂದು ಬೆಡ್‌ನಲ್ಲಿ ಎರಡು ಸಾಲು ನಾಟಿ ಮಾಡಬಹುದು. ಬೆಡ್‌ನ ಮೇಲೆ ಹಾಸಿದ ಮಲ್ಚಿಂಗ್ ಪೇಪರ್ ಮೇಲೆ ಗುರುತು ಹಾಕುತ್ತಾ ಹೋಗಬೇಕು. ದೊಡ್ಡ ತ್ರಿಜ್ಯದ ಮೂಲಕ ಗುರುತು ಹಾಕುತ್ತಾ ಹೊದರೆ ಒಂದು ಸಾಲಿನ ಎರಡು ಗಿಡದ ನಡುವೆ ಇನ್ನೊಂದು ಸಾಲಿನ ಗಿಡ ನಾಟಿ ಮಾಡಬಹುದು ಎನ್ನುತ್ತಾರೆ ಸತ್ಯನಾರಾಯಣ. ಒಂದು ಎಕರೆಗೆ 10000 ಗಿಡ ನೆಡಬಹುದು. ಕಾಕ್‌ಫಿಟ್‌ನಲ್ಲಿ ನೆಟ್ಟ ಗಿಡವನ್ನು ಮಣ್ಣು ಸಮೇತ ಬೆಡ್‌ನಲ್ಲಿ ನಾಟಿ ಮಾಡಬಹುದು. ಹೀಗೆ 6 ಎಕರೆ ಜಾಗದಲ್ಲಿ ಫಿಲಿಫೈನ್ಸ್ ಮೆಣಸು ಕೃಷಿ ಮಾಡಿದ್ದಾರೆ.
2 ತಿಂಗಳಿಗೆ ಫಸಲು: ಒಂದು ಎಕರೆಯಲ್ಲಿ ಕೃಷಿ ಮಾಡಿದ ನಂತರ ಇನ್ನೊಂದು ಎಕರೆಯಲ್ಲಿ ಕೃಷಿ ಮಾಡಬಹುದು. ನಾಟಿ ಮಾಡಿದ ಎರಡು ತಿಂಗಳಲ್ಲಿ ಬೆಳೆ ಪಡೆಯಬಹುದು. ಹೀಗೆ 6 ಎಕರೆಯಲ್ಲಿ ಬದಲಿಯಾಗಿ 6 ಬಾರಿ ನಾಟಿ ಮಾಡಬಹುದು. ಒಂದು ಎಕರೆಯಲ್ಲಿ ಬೆಳೆಯತೊಡಗಿದ ನಂತರ ಇನ್ನೊಂದು ಎಕರೆ ನಾಟಿ ಮಾಡಬೇಕು. ಮಧ್ಯ ಭಾಗದಲ್ಲಿ ಎಳೆದ ಪೈಪ್ ಡ್ರಿಪ್ ಮೂಲಕ ನೀರು ಹಾಯಿಸಬೇಕು. ನಾಟಿ ಮಾಡುವಾಗ ಒಂದು ಗಿಡದಿಂದ ಇನ್ನೊಂದು ಗಿಡದ ನಡುವೆ 2 ಅಡಿ ಅಂತರ ಇರಿಸಬೇಕು. ಒಂದು ಸಾಲು ಇನ್ನೊಂದು ಸಾಲಿನ ಅಂತರ 4 ಅಡಿ ಇರಬೇಕು.
20 ಟನ್ ಇಳುವರಿ: ಒಂದು ಗಿಡದ ಜೀವತ ಅವಧಿ 8 ತಿಂಗಳು. 4 ಬಾರಿ ಕೊಯ್ಲು ಮಾಡಬಹುದು. ಒಂದು ಎಕರೆಯಲ್ಲಿ 20 ಟನ್ ಮೆಣಸು ಪಡೆಯಬಹುದು. ಬೆಳೆ ಬಂದನ ನಂತರ ಕೆಂಪು ಕೆಂಪಾಗಿ ಆಕರ್ಷಕವಾಗಿ ಕಾಣಿಸುತ್ತದೆ. ಅಂಬ್ಳೆಯವರು ಮೊದಲ ವರ್ಷದ ಕೃಷಿಯಲ್ಲಿ ಒಟ್ಟು 120 ಟನ್ ಮೆಣಸು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ನಾಮಧಾರಿ ಕಂಪನಿಯ ಮುಖಾಂತರ ಇಂಗ್ಲೆಂಡ್ ಅಮೆರಿಕ, ಫಿಲಿಫೈನ್ಸ್ ಮತ್ತು ಇತರ ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಿದ್ದಾರೆ. 1 ಎಕರೆಯಲ್ಲಿ 2 ಲಕ್ಷದಷ್ಟು ಲಾಭ ಬರಬಹುದು. ಆ ಲೆಕ್ಕದಲ್ಲಿ 12 ಲಕ್ಷ ರುಪಾಯಿ ವಾರ್ಷಿಕ ಲಾಭ ಪಡೆಯಬಹುದು. ಮಾಹಿತಿಗೆ ಸತ್ಯನಾರಾಣಯ ಆಂಬ್ಳೆಯವರ ಮೊ. 9146791586.
- ಬಾಲಕೃಷ್ಣ ಶಿರ್ವ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT