ಮಥುರಾ ಹಿಂಸೆಯ ಚಿತ್ರ 
ಕೃಷಿ-ಪರಿಸರ

ಮಥುರಾ ಹಿಂಸೆಯಲ್ಲಿ ಸಾವಿರಾರು ಮರಗಳ ನಾಶ

ಮಥುರಾದ ಜವಾಹರ್ ಭಾಗ್ ನಲ್ಲಿ ಅತಿಕ್ರಮಣಕಾರರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಘರ್ಷಣೆ ಹಿಂಸೆಗೆ ತಿರುಗಿದ್ದರಿಂದ ಸಾವಿರಾರು ಮರಗಳು ಸುಟ್ಟು ನಾಶವಾಗಿವೆ.

ಮಥುರಾ: ಮಥುರಾದ ಜವಾಹರ್ ಭಾಗ್ ನಲ್ಲಿ ಅತಿಕ್ರಮಣಕಾರರು ಮತ್ತು ಪೊಲೀಸರ ನಡುವೆ ನಡೆದ ಗುಂಡಿನ ಘರ್ಷಣೆ ಹಿಂಸೆಗೆ ತಿರುಗಿದ್ದರಿಂದ ಸಾವಿರಾರು ಮರಗಳು ಸುಟ್ಟು ನಾಶವಾಗಿವೆ.

ಸುಮಾರು ೫೦೦೦ ಮರಗಳು ಅವುಗಳಲ್ಲಿ ಹೆಚ್ಚಿನವು ಹಣ್ಣಿನ ಮರಗಳು ಸುಟ್ಟು ಕರುಕಲಾಗಿವೆ ಎಂದು ಉತ್ತರ ಪ್ರದೇಶ ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಹಸಿರು ನಾಶಕ್ಕೆ ಕಾರಣವಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಮಥುರಾದಲ್ಲಿ ಪರಿಸರವಾದಿಗಳು ಆಗ್ರಹಿಸಿದ್ದಾರೆ.

೨೬೦ ಎಕರೆ ತೋಟವನ್ನು ಆಕ್ರಮಿಸಿಕೊಂಡಿದ್ದ ಅತಿಕ್ರಮಣಕಾರರ ವಿರುದ್ಧ ತೋಟಗಾರಿಕಾ ಇಲಾಖೆ ಕ್ರಮ ತೆಗೆದುಕೊಳ್ಳಬೇಕಿತ್ತು ಆದರೆ ಪರಿಸರಕ್ಕೆ ಆಗುತ್ತಿರುವ ತೊಂದರೆಯ ವಿರುದ್ಧ ಉದಾಸೀನ ತಳೆದರು ಅಧಿಕಾರಿಗಳು ಎಂದು ಬ್ರಜ್ ಬಚಾವೋ ಸಮಿತಿ ಸದಸ್ಯರು ಆರೋಪಿಸಿದ್ದಾರೆ.

ಆದರೆ ಇಲಾಖೆಯ ಅಧಿಕಾರಿಗಳು ಹಲವಾರು ಬಾರಿ ಇದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು ಮತ್ತು ಹಿರಿಯ ಜಿಲ್ಲ ಅಧಿಕಾರಿಗಳಿಗೂ ಪದೇ ಪದೇ ಸೂಚಿಸಲಾಗಿತ್ತು ಎಂದು ಅಧಿಕಾರಿಗಳು ಸ್ಪಷ್ಟೀಕರಿಸಿದ್ದಾರೆ.

ಹಲವಾರು ವರ್ಷಗಳಿಂದ ಕಷ್ಟ ಪಟ್ಟು ಬೆಳೆಸಿದ್ದ ಈ ಮರಗಳು ಇಡೀ ಜವಾಹರ್ ಭಾಗ್ ಅನ್ನು ಹಸಿರುಮಯ ಮಾಡಿದ್ದವು ಎಂದಿರುವ ಅಧಿಕಾರಿ "ಈ ನಷ್ಟ ಸರಿಪಡಿಸಲು ಕಷ್ಟ, ಮತ್ತೆ ಈ ಹಸಿರನ್ನು ಮರುಕಳಿಸಲು ವರ್ಷಗಳೇ ಬೇಕು" ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಟಿ ತ್ರಿಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಆರೋಪ: ನಾನು ಅವರ ಹೆಸರನ್ನೂ ಉಲ್ಲೇಖಿಸಿದ್ದೇನೆಯೇ? ಬಂಧನದ ಬಳಿಕ ಉದಯನಿಧಿ ಸ್ಟಾಲಿನ್

ನಟಿ ತ್ರಿಶಾ ಕುರಿತು ಆಕ್ಷೇಪಾರ್ಹ ಹೇಳಿಕೆ; DMK ನಾಯಕ ಉದಯನಿಧಿ ಸ್ಟಾಲಿನ್ ಪೊಲೀಸ್ ವಶಕ್ಕೆ, ತಮಿಳುನಾಡು ರಾಜಕೀಯದಲ್ಲಿ ತೀವ್ರ ಸಂಚಲನ..!

ಸಿದ್ದರಾಮಯ್ಯ ಮಾತಿಗೆ ಯಾವುದೇ ಬೆಲೆ ಇಲ್ಲ, ಅವರ ಆಪ್ತನಾಗಿದ್ದಕ್ಕೆ ಸಚಿವ ಸ್ಥಾನ ಕೈ ತಪ್ಪಿದೆ: CM ಡಿಕೆಶಿ ವಿರುದ್ಧ ಸುಧಾಕರ್ ಕಿಡಿ

Crass, cheap and derogatory': ನಟಿ ತ್ರಿಶಾಗೆ ಅಸಭ್ಯ, ಕೀಳುಮಟ್ಟದಲ್ಲಿ ಅಪಮಾನ, ಉದಯನಿಧಿ ಸ್ಟಾಲಿನ್ ಕ್ಷಮೆಯಾಚನೆಗೆ ಖುಷ್ಬೂ ಸುಂದರ್ ಒತ್ತಾಯ!

ಹೊಸ ಸುಂಕ ನೀತಿಗೆ ಅಮೆರಿಕದಲ್ಲೇ ಭಾರಿ ವಿರೋಧ: ಭಾರತ ಸೇರಿ 59 ದೇಶಗಳ ಪರ ನಿಂತ 25 ರಾಜ್ಯಗಳು; ಟ್ರಂಪ್ ಸರ್ಕಾರಕ್ಕೆ ಕಾನೂನು ಸಂಕಷ್ಟ..!