ಚಂಬಲ್ ಕಣಿವೆಯ ಒಂದು ದೃಶ್ಯ 
ಕೃಷಿ-ಪರಿಸರ

ಅರಣ್ಯನಾಶದ ವಿರುದ್ಧ ಧ್ವನಿ ಎತ್ತಲಿರುವ ಪರಿವರ್ತಿತ ಚಂಬಲ್ ಕಣಿವೆ ಡಕಾಯಿತರು

ಬದಲಾಗಿರುವ ಚಂಬಲ್ ಕಡಿವೆಯ ಮಾಜಿ ಡಕಾಯಿತರು, ಪರಿಸರ ಉಳಿಸಲು ಅರಣ್ಯನಾಶದ ವಿರುದ್ಧ ಚಳುವಳಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.

ಜೈಪುರ: ಬದಲಾಗಿರುವ ಚಂಬಲ್ ಕಡಿವೆಯ ಮಾಜಿ ಡಕಾಯಿತರು, ಪರಿಸರ ಉಳಿಸಲು ಅರಣ್ಯನಾಶದ ವಿರುದ್ಧ ಚಳುವಳಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ.

ಅಂತರಾಷ್ಟ್ರೀಯ ಅರಣ್ಯ ದಿನವಾದ ಭಾನುವಾರದಂದು ೨೫ಕ್ಕೂ ಹೆಚ್ಚು ಮಾಜಿ ಡಕಾಯಿತರು ಜೈಪುರದಲ್ಲಿ ಒಂದೇ ಸೂರಿನಡಿ ಸೇರಿ, ಯಾವ ವ್ಯವಸ್ಥೆಯ ವಿರುದ್ಧವೂ ಅಲ್ಲ, ಯಾವ ವ್ಯಕ್ತಿಯ ವಿರುದ್ಧವೂ ಅಲ್ಲ ನಮ್ಮ ಹೋರಾಟ ಮಾಲಿನ್ಯ ಮತ್ತು ಅರಣ್ಯ ನಾಶದ ವಿರುದ್ಧ ಎಂದಿದ್ದಾರೆ.

ಪರಿಸರ ಮತ್ತು ಅರಣ್ಯ ನಾಶದ ಬಗ್ಗೆ ಜನರಿಗೆ ಅರಿವು ಮೂಡಿಸಲು ಮೊದಲು ಎನ್ನಬಹುದಾದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈಗ ಹೊಸ ಗುರಿ ಹೊಂದಿರುವ ಈ ಮಾಜಿ ಡಕಾಯಿತರು, ನಾವು ಕಾಡಿನಲ್ಲಿರಬೇಕಾದರೆ ಅರಣ್ಯ ನಾಶ ಬಹಳ ಕಡಿಮೆ ಇತ್ತು. ನಾವೆಲ್ಲರೂ ಕಾಡನ್ನು ರಕ್ಷಿಸುತ್ತಿದ್ದೆವು, ಏಕೆಂದರೆ ಅದು ನಮಗೆ ರಕ್ಷಣೆ ನೀಡುತ್ತಿತ್ತು ಎಂದಿದ್ದಾರೆ.

ಅವರು ಈಗ ಕಾಡನ್ನು ತೊರೆದಿದ್ದು, ಈ ಎಲ್ಲ ಮಾಜಿ ಡಕಾಯಿತರು ಒಟ್ಟಾಗಿ ಸೇರಿ ಪರಿಸರಕ್ಕೆ ಬಹಳ ಪ್ರಮುಖವಾಗಿರುವ ಕಾಡ-ಮರಗಳನ್ನು ಉಳಿಸಲು ಮುಂದಾಗಿದ್ದಾರೆ.

ಕಲ್ಪತರು ಎಂಬ ಎನ್ ಜಿ ಒ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಇವರೆಲ್ಲರೂ ಮರಗಳನ್ನು ಮತ್ತು ಕಾಡುಗಳನ್ನು ಉಳಿಸುವ ವಚನ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT