ಪಶ್ಚಿಮ ಘಟ್ಟದ ಪಕ್ಷಿಗಳಿಗೆ ರೋಬಸ್ಟಾ ಕಾಫಿಯೇ ಇಷ್ಟ! 
ಕೃಷಿ-ಪರಿಸರ

ಪಶ್ಚಿಮ ಘಟ್ಟದ ಪಕ್ಷಿಗಳಿಗೆ ರೋಬಸ್ಟಾ ಕಾಫಿಯೇ ಇಷ್ಟ!

ಅರೇಬಿಕಾ ಕಾಫಿಯ ಸ್ವಾದಕ್ಕೆ ಫಿದಾ ಆಗದವರು ಬಹಳ ವಿರಳ, ಮನುಷ್ಯರಂತೆ ಕಾಫಿಯನ್ನು ಇಷ್ಟಪಡುವ ಪಕ್ಷಿಗಳೂ ಇದ್ದು, ಅರೇಬಿಕಾದ ಬದಲಾಗಿ ರೋಬಸ್ಟಾ ಕಾಫಿಯನ್ನೇ ಇಷ್ಟಪಡುತ್ತವೆ ಎನ್ನುತ್ತಿವೆ ಹೊಸ

ಬೆಂಗಳೂರು: ಅರೇಬಿಕಾ ಕಾಫಿಯ ಸ್ವಾದಕ್ಕೆ ಫಿದಾ ಆಗದವರು ಬಹಳ ವಿರಳ, ಮನುಷ್ಯರಂತೆ ಕಾಫಿಯನ್ನು ಇಷ್ಟಪಡುವ ಪಕ್ಷಿಗಳೂ ಇದ್ದು, ಅರೇಬಿಕಾದ ಬದಲಾಗಿ ರೋಬಸ್ಟಾ ಕಾಫಿಯನ್ನೇ ಇಷ್ಟಪಡುತ್ತವೆ ಎನ್ನುತ್ತಿವೆ ಹೊಸ ಸಂಶೋಧನೆ 
ಪಶ್ಚಿಮ ಘಟ್ಟದಲ್ಲಿ ನಡೆದಿರುವ ಸಂಶೋಧನೆಯೊಂದರ ಪ್ರಕಾರ ಅರೇಬಿಕಾ ಕಾಫಿಗಿಂತ ರೋಬಸ್ಟಾ ಕಾಫಿಯೆಡೆಗೇ ಹೆಚ್ಚು ಆಕರ್ಷಿತವಾಗುತ್ತವಂತೆ. ಈ ಹೊಸ ಸಂಶೋಧನಾ ವರದಿ ಹಿಂದೆಂದಿಗಿಂತಲೂ ವಿಭಿನ್ನವಾಗಿದ್ದು, ಅರೇಬಿಕಾ ಹೆಚ್ಚು ಪಕ್ಷಿ ಸಂತತಿಯನ್ನು ಆಕರ್ಷಿಸುತ್ತಿತ್ತಾದರೂ ಈಗ ರೋಬಸ್ಟಾ ತಳಿಯ ಕಾಫಿ ಹಣ್ಣುಗಳು ಪಕ್ಷಿಗಳನ್ನು ಹೆಚ್ಚು ಆಕರ್ಷಿಸುತ್ತಿದೆಯಂತೆ.  
ಅತಿ ಹೆಚ್ಚು ಕಾಫಿ ಬೆಳೆಯುವ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗುಗಳಲ್ಲಿ ಅಧ್ಯಯನ ನಡೆಸಲಾಗಿದ್ದು,  ಅರಣ್ಯದಲ್ಲಿ ಜೀವಿಸುವ ಪಕ್ಷಿಗಳು, ಐಯುಸಿಎನ್ ರೆಡ್ ಲಿಸ್ಟೆಡ್ ಜೀವಿಗಳು ಹಾಗೂ ಸ್ಥಳೀಯ ಪ್ರಭೇದದ ಪಕ್ಷಿಗಳನ್ನು ಅಧ್ಯಯನಕ್ಕೊಳಪಡಿಸಲಾಗಿದ್ದು,  ಪಶ್ಚಿಮ ಘಟ್ಟಗಳಲ್ಲಿ ಅರೇಬಿಕಾ ಹಾಗೂ ರೋಬಾಸ್ಟಾ ಕಾಫಿ ತಳಿ ಪಕ್ಷಿ ಸಂಕುಲಕ್ಕೆ ಸಮಾನವಾದ ಆಕರ್ಷಣೀಯ ಕಾಫಿ ಬೆಳೆಗಳಾಗಿವೆ.  
ಅಧ್ಯಯನ ವರದಿಯಲ್ಲಿ ಅರಣ್ಯದ ಮೇಲೆ ಅವಲಂಬಿತವಾಗಿರುವ 79 ವಿಧದ ಪ್ರಭೇದಗಳು ಕಂಡುಬಂದಿದ್ದು, 14 ಸ್ಥಳೀಯ ಪ್ರಭೇದಗಳು ದಾಖಲಾಗಿವೆ. ಇದೇ ವೇಳೆ ಐಯುಸಿಎನ್ ರೆಡ್ ಲಿಸ್ಟೆಡ್ ಪ್ರಭೇಧಗಳಲ್ಲಿ ಪ್ರಮುಖವಾದ ಅಲೆಕ್ಸಾಂಡ್ರೈನ್ ಪ್ಯಾರಕೆಟ್, ಗ್ರೇ-ಹೆಡೆಡ್ ಬುಲ್ಬುಲ್ ಮತ್ತು ನೀಲಗಿರಿ ವುಡ್-ಪಾರಿವಾಳಗಳು ಕಂಡುಬಂದಿದ್ದು, ಹೆಚ್ಚಿನ ಪ್ರಭೇದದ ಪಕ್ಷಿಗಳು ರೋಬಾಸ್ಟಾ ಕಾಫಿಯೆಡೆಗೇ ಹೆಚ್ಚು ಆಕರ್ಷಿತವಾಗುತ್ತವೆ ಎಂದು ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ತಜ್ಞರು ಹೇಳಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

ಕಳ್ಳಬಟ್ಟಿ ಸಾರಾಯಿ–ಸೇಂದಿ ದಂಧೆಕೋರರು ಗಡಿಪಾರು: ಸಚಿವ ತಿಮ್ಮಾಪುರ ಸೂಚನೆ

SCROLL FOR NEXT