ತಿರುಪತಿ ಲಡ್ಡು 
ಭಕ್ತಿ-ಭವಿಷ್ಯ

೩೦೦ ವರ್ಷ ಪೂರೈಸಿದ 'ತಿರುಪತಿ ಲಡ್ಡು'

'ತಿರುಪತಿ ಲಡ್ಡು' ಪ್ರಸಾದ ನೆನೆದರೆ ಬಾಯಲ್ಲಿ ನೀರೂರುವುದು ಖಂಡಿತ. ತಿರುಪತಿ ಬೆಟ್ಟದ ವೆಂಕಟೇಶ್ವರ ದೇವಾಲಯದ ಈ ಪ್ರಸಿದ್ಧ ಪವಿತ್ರ ಪ್ರಸಾದಕ್ಕೆ ಈಗ ೩೦೦

ಹೈದರಾಬಾದ್: 'ತಿರುಪತಿ ಲಡ್ಡು' ಪ್ರಸಾದ ನೆನೆದರೆ ಬಾಯಲ್ಲಿ ನೀರೂರುವುದು ಖಂಡಿತ. ತಿರುಪತಿ ಬೆಟ್ಟದ ವೆಂಕಟೇಶ್ವರ ದೇವಾಲಯದ ಈ ಪ್ರಸಿದ್ಧ ಪವಿತ್ರ ಪ್ರಸಾದಕ್ಕೆ ಈಗ ೩೦೦ ವರ್ಷ. ಈ ಪವಿತ್ರ ಪ್ರಸಾದವನ್ನು ಮೊದಲು ಪ್ರಾರಂಭಸಿದ್ದು ಆಗಸ್ಟ್ ೨ ೧೭೧೫ರಲ್ಲಿ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಸಾದ ಸ್ವೀಕರಿಸದೆ ತಿರುಪತಿ ದೇವಸ್ಥಾನ ತೀರ್ಥಯತ್ರೆ ಸಂಪೂರ್ಣಗೊಳ್ಳುವುದಿಲ್ಲ. ತುಪ್ಪ ಮತ್ತು ಏಲಕ್ಕಿ ಆಸ್ವಾದ ಹೊಂದಿರುವ ಈ ಲಡ್ಡು ವಿಶ್ವಪ್ರಸಿದ್ಧ.

ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಅಧಿಕಾರಿಗಳ ಪ್ರಕಾರ ೨೦೧೪ರಲ್ಲಿ ೯೦ ದಶಲಕ್ಷ ಲಡ್ಡುಗಳನ್ನು ಭಕ್ತಾದಿಗಳಿಗೆ ನೀಡಲಾಗಿದೆಯಂತೆ.

೩೦೦ ಗ್ರಾಂ ತೂಕದ ತಿರುಪತಿ ಲಡ್ಡು ೨೫ ರೂ. ಲಡ್ಡು ತಯಾರಿಸಲು ಬಳಸುವ ಗುಣಮಟ್ಟದ ಪದಾರ್ಥಗಳಿಗೆ ಹೆಚ್ಚಿನ ಬೆಲೆಯಿದ್ದು ಸಬ್ಸಿಡಿ ಬೆಲೆಯಲ್ಲಿ ಪ್ರಸಾದ ಮಾರಲಾಗುತ್ತಿದೆ ಎನ್ನುತ್ತಾರೆ ಅಧಿಕಾರಿಗಳು. ಅಲ್ಲದೆ ತಿರುಪತಿ ದೇವರ ದರ್ಶನಕ್ಕೆ ಬರುವ ಎಲ್ಲ ಭಕ್ತಾದಿಗಳಿಗೂ ೧೦ ರುಪಾಯಿ ಬೆಲೆಗೆ ಎರಡು ಲಡ್ಡುಗಳನ್ನು ನೀಡಲಾಗುತ್ತದೆ.

ಪ್ರಸಾದದ ಮಾರಾಟ ದೇವಸ್ಥಾನಕ್ಕೆ ಒಳ್ಳೆಯ ಆದಾಯ ತಂದುಕೊಡುತ್ತಿದೆಯಂತೆ. ೨೦೧೪-೨೦೧೫ರಲ್ಲಿ ಈ ಪ್ರಸಾದ ಬಜೆಟ್ ೨೪೦೧ಕೋಟಿ ರೂ.

ಬ್ರಹ್ಮೋತ್ಸವದ ಸಮಯದಲ್ಲಿ ಈ ಲಡ್ಡಿಗೆ ಅಪಾರ ಬೇಡಿಕೆಯಿರುತ್ತದಂತೆ. ೨೭೦ ಜನ ಬಾಣಸಿಗರು ಸೇರಿದಂತೆ ೬೨೦ ಜನ ಲಡ್ಡು ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಾರೆ.

ಅಲ್ಲದೆ ೨೦೧೪ ರಲ್ಲಿ ದೇವಸ್ಥಾನವನ್ನು ೨೨.೬ ದಶಲಕ್ಷ ಭಕ್ತಾದಿಗಳು ಭೇಟಿ ನೀಡಿದ್ದು ಹುಂಡಿಗೆ ೮೩೧ ಕೋಟಿ ರೂ ಕಾಣಿಕೆ ಸಲ್ಲಿಸಿದ್ದಾರಂತೆ. ಅಲ್ಲದೆ ೨೦೧೪-೨೦೧೫ ರಲ್ಲಿ ಬ್ಯಾಂಕುಗಳಿಂದ ಬಡ್ಡಿಯ ರೂಪದಲ್ಲೇ ದೇವಸ್ಥಾನ ೬೫೫ ಕೋಟಿ ರೂ ಗಳಿಸಿದೆ. ದೇವಸ್ಥಾನ, ಬ್ಯಾಂಕ್ ಖಾತೆಗಳಲ್ಲಿ ೧೨ ಸಾವಿರ ಕೋಟಿ ರೂ ಮತ್ತು ೩೨ ಟನ್ ಚಿನ್ನಾಭರಣಗಳನ್ನು ಇಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

'China isn't afraid': ಅಮೆರಿಕದ ಶೇ.100 ರಷ್ಟು ಸುಂಕದ ಬಗ್ಗೆ ಚೀನಿಯರ ಪ್ರತಿಕ್ರಿಯೆ!

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

SCROLL FOR NEXT