ಸಾಂದರ್ಭಿಕ ಚಿತ್ರ 
ಭಕ್ತಿ-ಜ್ಯೋತಿಷ್ಯ

ಶಾಲೆಗಳಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ಮಕ್ಕಳಿಗೆ ಹಬ್ಬಗಳ ಮಹತ್ವ ಹೇಳಿಕೊಡಿ: ಡಾ. ಆರತಿ .ವಿ.ಬಿ

ಭಾರತೀಯ ಸಂಸ್ಕೃತಿಯ ಹೆಗ್ಗುರುತು ಹಬ್ಬಹರಿದಿನಗಳು, ಹಬ್ಬ ಎಂದರೆ ಪರ್ವ ಎಂಬ ಶಬ್ದದಿಂದ ಬಂದ ಪದ. ಪರ್ವ ಎಂದರೆ ಬಹಳ ಪ್ರಧಾನವಾದದ್ದು, ಜೀವನದ ನಮ್ಮ ಕಲೆ,ಸಂಸ್ಕೃತಿ, ಸಾಮಾಜಿಕ ಜೀವನ, ಬಂಧು ಮಿತ್ರರೊಂದಿಗಿನ ಒಡನಾಟ, ದೈವಚಿಂತನೆ, ವ್ಯಾಪಾರ, ದಿನ ನಿತ್ಯದ ಜೀವನಗಳು ಗರಿಗೆದರಿ ನಿಲ್ಲುವ ದಿನವನ್ನು ಹಬ್ಬ ಎಂದು ಕರೆಯುತ್ತೇವೆ.

ಭಾರತೀಯ ಸಂಸ್ಕೃತಿಯ ಹೆಗ್ಗುರುತು ಹಬ್ಬಹರಿದಿನಗಳು, ಹಬ್ಬ ಎಂದರೆ ಪರ್ವ ಎಂಬ ಶಬ್ದದಿಂದ ಬಂದ ಪದ. ಪರ್ವ ಎಂದರೆ ಬಹಳ ಪ್ರಧಾನವಾದದ್ದು, ಜೀವನದ ನಮ್ಮ ಕಲೆ,ಸಂಸ್ಕೃತಿ, ಸಾಮಾಜಿಕ ಜೀವನ, ಬಂಧು ಮಿತ್ರರೊಂದಿಗಿನ ಒಡನಾಟ, ದೈವಚಿಂತನೆ, ವ್ಯಾಪಾರ, ದಿನ ನಿತ್ಯದ ಜೀವನಗಳು ಗರಿಗೆದರಿ ನಿಲ್ಲುವ ದಿನವನ್ನು ಹಬ್ಬ ಎಂದು ಕರೆಯುತ್ತೇವೆ.

ಈ ಹಬ್ಬದಂದು ಅದು ನಾಡಹಬ್ಬ ದಸರಾದಿಂದ ಹಿಡಿದು ಯಾವ ಹಬ್ಬವೇ ಆಗಿರಲಿ ಮನೆಮಂದಿಯೆಲ್ಲಾ ಒಟ್ಟಿಗೆ ಸೇರಿ ಸಂತಸ-ಸಂಭ್ರಮದಿಂದ ಒಟ್ಟಿಗೆ ಕೆಲಸ ಮಾಡಿ, ಒಟ್ಟಿಗೆ ಜತೆಯಲ್ಲಿ ಪೂಜೆ ಮಾಡಿ, ಭಕ್ಷ-ಭೋಜ್ಯಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ಒಟ್ಟಿಗೆ ಕುಳಿತು ಊಟ ಮಾಡುವ, ಒಟ್ಟಿಗೆ ಗೀತ-ನೃತ್ಯ ಮಾಡುತ್ತಾ, ನಕ್ಕು ನಲಿಯುತ್ತಾ ಬೆರೆಯುವ ಸುಸಂದರ್ಭಗಳು ಹಬ್ಬಗಳ ದಿನಗಳು.

ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ಮನುಷ್ಯರ ಮನಸ್ಸಿನಲ್ಲಿ ಹೊಸ ಉತ್ಸಾಹ, ಸಂಭ್ರಮ ಮೂಡುತ್ತದೆ, ಒಂದು ಸಾಮಾಜಿಕ ಬಾಂಧವ್ಯ ಉಂಟಾಗುತ್ತದೆ, ಭಾವೈಕ್ಯ ಮೂಡುತ್ತದೆ, ದೇಶದ, ಸಂಸ್ಕೃತಿಯ ಅಸ್ಮಿತೆ ನಮ್ಮ ಹಬ್ಬಗಳು. 

ಈ ಅರ್ಥಪೂರ್ಣವಾದ ವ್ಯವಸ್ಥೆ ಹಬ್ಬಗಳ ಸಮಯದಲ್ಲಿ ಮನೆಯಲ್ಲಿ ಪೋಷಕರು, ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಇದರ ಮಹತ್ವವನ್ನು, ಹಬ್ಬಗಳ ಆಚರಣೆ, ಸಂಪ್ರದಾಯ, ಪೂಜಾ ವಿಧಾನ, ಆಚಾರ-ವಿಚಾರಗಳು, ನೈವೇದ್ಯ-ಮನೆಯವರೊಂದಿಗೆ, ಅಕ್ಕಪಕ್ಕದ ಮನೆಯವರು, ಬಂಧು-ಮಿತ್ರರೊಂದಿಗೆ ಬೆರೆಯುವುದನ್ನು ಹೇಳಿಕೊಡಬೇಕು. ಹಬ್ಬಗಳ ದಿನ ಮನೆಯಲ್ಲಿ ಮಕ್ಕಳು ತಮ್ಮ ಪಾಡಿಗೆ ಒಂದು ಶರ್ಟ್, ಚಡ್ಡಿ ಧರಿಸಿಕೊಂಡು ಮೊಬೈಲ್, ಟಿವಿ-ಕಂಪ್ಯೂಟರ್ ಮುಂದೆ ಕುಳಿತುಕೊಂಡಿರುವುದು ಸರಿಯಲ್ಲ ಎನ್ನುತ್ತಾರೆ ಧಾರ್ಮಿಕ, ಆಧ್ಯಾತ್ಮಿಕ ಚಿಂತಕಿ ಡಾ.ಆರತಿ.ವಿ.ಬಿ.

ಅವಿಭಕ್ತ ಕುಟುಂಬಗಳಲ್ಲಿ ಕುಟುಂಬ ಸದಸ್ಯರು ಸೇರಿ ಕೆಲಸ ಮಾಡುತ್ತಾರೆ, ಆದರೆ ವಿಭಕ್ತ ಕುಟುಂಬದಲ್ಲಿ ಕಚೇರಿಗಳಲ್ಲಿ ರಜೆ ಸಿಗದಿದ್ದರೆ ಮಹಿಳೆಯರಿಗೂ ಹಬ್ಬಗಳನ್ನು ಆಚರಿಸಲು, ಮಕ್ಕಳಿಗೆ ಹಬ್ಬಗಳ ಮಹತ್ವ ಹೇಳಿಕೊಡಲು ಕಷ್ಟವಾಗುತ್ತದೆ. ಹಬ್ಬಗಳ ದಿನವಾದರೂ ಮನೆಗಳಲ್ಲಿ ಮಕ್ಕಳು ಬೆಳಗ್ಗೆಯೇ ಆಭ್ಯಂಜನ ಮಾಡಿ, ಶುಚಿಯ ಬಣ್ಣದ ಬಟ್ಟೆ ಧರಿಸಿ ಕೈಗೆ ಬಳೆ, ತಲೆಗೂದಲನ್ನು ಚೆನ್ನಾಗಿ ಬಾಚಿಕೊಂಡು ಹೂ ಮುಡಿದು ಅಕ್ಕಪಕ್ಕದ ಮನೆಗಳಿಗೆ ಕುಂಕುಮಕ್ಕೆ ಹೋಗಿ ಅವರನ್ನೂ ಬರಲು ಹೇಳುವ ಸಂಸ್ಕೃತಿಯನ್ನು ರೂಢಿಸಿಕೊಳ್ಳಬೇಕು. 

ಹಬ್ಬಹರಿದಿನಗಳ ಹಿಂದೆ-ಮುಂದೆ ಶಾಲೆಗಳಲ್ಲಿ ಸಹ ಸಣ್ಣ ಮಕ್ಕಳಿಗೆ ಪರೀಕ್ಷೆ ಇಡುವುದು, ಹಬ್ಬಗಳ ರಜೆಯ ಸಂದರ್ಭದಲ್ಲಿ ಎಲ್ಲಿಗೋ ಪಿಕ್ ನಿಕ್ ಕರೆದುಕೊಂಡು ಹೋಗುವುದು ಸರಿಯಾದ ಸಂಸ್ಕೃತಿ, ಕ್ರಮವಲ್ಲ ಎನ್ನುತ್ತಾರೆ ಅವರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT