ಬುಕ್ ಸೈಟ್

ಕಾದಂಬರಿ ಲೋಕ

ಪ್ರೊಫೆಸರ್ ವಿ. ಎಂ. ಇನಾಂದಾರರು (1912-86) ಕನ್ನಡದ ಅತ್ಯುತ್ತಮ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದರು. ಅವರು ಶ್ರೇಷ್ಠ ಅನುವಾದಕರೂ...

ಪ್ರೊಫೆಸರ್ ವಿ. ಎಂ. ಇನಾಂದಾರರು (1912-86) ಕನ್ನಡದ ಅತ್ಯುತ್ತಮ ಕಾದಂಬರಿಕಾರರಲ್ಲಿ ಒಬ್ಬರಾಗಿದ್ದರು. ಅವರು ಶ್ರೇಷ್ಠ ಅನುವಾದಕರೂ, ಬಹುಶ್ರುತ ವಿಮರ್ಶಕರೂ ಹೌದು. ಇಂಗ್ಲಿಷಿನಲ್ಲಿಯೂ ಕೆಲವು ಪುಸ್ತಕಗಳನ್ನು ಪ್ರಕಟಿಸಿರುವ ಅವರಿಗೆ ಕನ್ನಡ, ಮರಾಠಿ, ಸಂಸ್ಕೃತ ಭಾಷೆ ಸಾಹಿತ್ಯಗಳಲ್ಲಿ ಖಚಿತವಾದ ಪ್ರವೇಶವಿತ್ತು. ಬದುಕಿನ ತೇಲಿಕೆಯ ಸ್ತರಗಳನ್ನೇ ಆಗಲಿ, ಆಳವಾದ ತಾತ್ವಿಕ ಮುಖಗಳನ್ನೇ ಆಗಲಿ ಅವರು ತಮ್ಮ ಕೃತಿಯಲ್ಲಿ ಗಂಭೀರವಾಗಿ ನಿರೂಪಿಸಿದ್ದಾರೆ; ಚರ್ಚಿಸಿದ್ದಾರೆ. ಅವರ ಶೈಲಿಯಲ್ಲಿ ಆಕರ್ಷಣೆಯಿದೆ; ಪಾತ್ರ ನಿರ್ವಹಣೆಯಲ್ಲಿ ಕುತೂಹಲವಿದೆ; ಸಂದರ್ಭ ಚಿತ್ರಣದಲ್ಲಿ ಗಾಂಭೀರ್ಯವಿದೆ. ಇವೆಲ್ಲದರಿಂದ ಅವರು ಕನ್ನಡ ಕಾದಂಬರಿಯ ಸಾಧ್ಯತೆಗಳನ್ನು ವಿಸ್ತರಿಸಿದ ಹಿರಿಯರಲ್ಲಿ ಒಬ್ಬರೆನಿಸಿದ್ದಾರೆ.

ಪರಿಪೂರ್ಣತೆಯ ಹಾಗೂ ಶ್ರೇಷ್ಠತೆಯ ಆರಾಧಕರಾಗಿದ್ದ ಅವರ ಅಭಿರುಚಿಗೆ ಅನುಗುಣವಾದ ಕಾದಂಬರಿ ಲೋಕ ಕನ್ನಡ ವಿಮರ್ಶೆಯ ಕ್ಷೇತ್ರಕ್ಕೆ ಒಂದು ಗಣನೀಯ ಕೊಡುಗೆಯಾಗಿದೆ. ಕಾದಂಬರಿ ಪ್ರಕಾರಕ್ಕೆ ರೂಪಸ್ವರೂಪಗಳನ್ನು ತಂದುಕೊಟ್ಟ, ಜಗತ್ತಿನ ಶ್ರೇಷ್ಠ ಕಾದಂಬರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮೂವತ್ತೊಂದು ಇಂಗ್ಲಿಷ್, ಅಮೆರಿಕನ್ ಹಾಗೂ ಯುರೋಪಿಯನ್ ಕಾದಂಬರಿಗಳ ಪರಿಚಯ, ವಿಮರ್ಶೆ, ವಿಶ್ಲೇಷಣೆ ಇಲ್ಲಿದೆ. ಈ ವ್ಯಾಪ್ತಿಯ ಪುಸ್ತಕ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಪ್ರಕಟವಾಗುತ್ತಿದೆ. ಕನ್ನಡದ ಹೆಸರಾಂತ ಹಿರಿಯ ಕಿರಿಯ ಲೇಖಕರು ಈ ಸಂಪುಟಕ್ಕೆ ಬರೆದಿದ್ದಾರೆ.

ಮಹತ್ವದ ಈ ವಿಮರ್ಶಾಕೃತಿ ಇನಾಂದಾರರ ಜನ್ಮಶತಾಬ್ದ ವರ್ಷದಲ್ಲಿ ಇದೀಗ ಮರುಮುದ್ರಣಗೊಂಡು ಸಾಹಿತ್ಯಾಸಕ್ತರಿಗೆ ಮತ್ತೊಮ್ಮೆ ಲಭ್ಯವಾಗುತ್ತಿದೆ.


ಈವಾರದ ಹೊತ್ತಗೆ : ಕಾದಂಬರಿ ಲೋಕ (ಕೆಲವು ಪ್ರಮುಖ ವಿಶ್ವ ಕಾದಂಬರಿಗಳ ಅವಲೋಕನ)
ಸಂಪಾದಕರು: ಡಾ. ಹಾ. ಮಾ. ನಾಯಕ
ಎಂ ವಿ  ವೆಂಕಟೇಶ ಮೂರ್ತಿ


ವಸಂತ ಪ್ರಕಾಶನ
ನಂ.360, 10 ನೇ 'ಬಿ' ಮುಖ್ಯ ರಸ್ತೆ,
3 ನೇ ಬ್ಲಾಕ್ ಜಯನಗರ
ಬೆಂಗಳೂರು -560011
ದೂರವಾಣಿ: 22443996
ಇಮೇಲ್: info@vasantaprakashana.com
www.vasanthaprakashana.com


ಬೆಲೆ ರು: 350

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT