ಮುಲಾಯಂ ಸಿಂಗ್ ಯಾದವ್ 
ರೇಲ್ವೆ ಬಜೆಟ್

ರೇಲ್ವೇ ಬಜೆಟ್ ಹಾಡಿ ಹೊಗಳಿದ ಮುಲಾಯಂ ಸಿಂಗ್ ಯಾದವ್

ಹೊಸ ರೈಲುಗಳ ಘೋಷಣೆಗಳಂತಹ ಜನಪ್ರಿಯ ಯೋಜನೆಗಳಿಲ್ಲದೆ ಹಿಂದಿನ ಬಜೆಟ್ ಗಳ ಯೋಜನೆಗಳನ್ನು ಅನುಷ್ಟಾನ ಮಾಡುವುದರ ಬಗ್ಗೆ

ನವದೆಹಲಿ: ಹೊಸ ರೈಲುಗಳ ಘೋಷಣೆಗಳಂತಹ ಜನಪ್ರಿಯ ಯೋಜನೆಗಳಿಲ್ಲದೆ ಹಿಂದಿನ ಬಜೆಟ್ ಗಳ ಯೋಜನೆಗಳನ್ನು ಅನುಷ್ಟಾನ ಮಾಡುವುದರ ಬಗ್ಗೆ ಗಮನ ಹರಿಸಿರುವುದಕ್ಕೆ ಸುರೇಶ್ ಪ್ರಭು ಅವರ ರೇಲ್ವೆ ಬಜೆಟ್ ಅನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಶ್ಲಾಘಿಸಿದ್ದಾರೆ.

ಮೈತ್ರಿ ಪಕ್ಷ ಶಿವಸೇನೆಯು ಸೇರಿದಂತೆ ವಿಪಕ್ಷಗಳು ರೈಲ್ವೇ ಬಜೆಟನ್ನು ಟೀಕಿಸುತ್ತಿರುವಾಗ, ಯಾದವ್ ಅವರು ಬಜೆಟ್ ಬಗ್ಗೆ ಪ್ರಶಂಸಿಸಿರುವುದು ಬಿಜೆಪಿ ಪಕ್ಷಕ್ಕೆ ಸ್ವಲ್ಪವಾದರೂ ಹುರುಪು ಬಂದಿದೆ. "ಇದು ಒಳ್ಳೆಯ ಕೆಲಸ. ಅವರು (ಪ್ರಭು) ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ ಬದಲಾಗಿ ಹಿಂದಿನ ಯೋಜನೆಗಳನ್ನು ಪೂರೈಸುವ ಭರವಸೆ ನೀಡಿದ್ದಾರೆ. ಇದನ್ನು ಮಾಡುವಲ್ಲಿ ಅವರು ಸಫಲವಾದರೆ, ಇದು ಅತಿ ದೊಡ್ಡ ಸಾಧನೆಯಾಗಲಿದೆ" ಎಂದು ಸಂಸತ್ತಿನ ಹೊರಗೆ ಯಾದವ್ ತಿಳಿಸಿದ್ದಾರೆ.

ಬಜೆಟ್ ಅನ್ನು ಕಾಂಗ್ರೆಸ್ ಟೀಕಿಸಿರುವ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಲು ಮುಲಾಯಂ ನಿರಾಕರಿಸಿದ್ದಾರೆ. ಉತ್ತರ ಪ್ರದೇಶಕ್ಕೆ ಯಾವುದೇ ಹೊಸ ಯೋಜನೆಗಳು ಇಲ್ಲದಿರುವ ಬಗ್ಗೆ ಪ್ರಶ್ನಿಸಿದಾಗ, ದೇಶದ ಅತಿ ದೊಡ್ಡ ರಾಜ್ಯ ಯಾವಾಗಲೂ ಅವಗಣನೆಗೆ ಒಳಗಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT