ಮುಲಾಯಂ ಸಿಂಗ್ ಯಾದವ್ 
ರೇಲ್ವೆ ಬಜೆಟ್

ರೇಲ್ವೇ ಬಜೆಟ್ ಹಾಡಿ ಹೊಗಳಿದ ಮುಲಾಯಂ ಸಿಂಗ್ ಯಾದವ್

ಹೊಸ ರೈಲುಗಳ ಘೋಷಣೆಗಳಂತಹ ಜನಪ್ರಿಯ ಯೋಜನೆಗಳಿಲ್ಲದೆ ಹಿಂದಿನ ಬಜೆಟ್ ಗಳ ಯೋಜನೆಗಳನ್ನು ಅನುಷ್ಟಾನ ಮಾಡುವುದರ ಬಗ್ಗೆ

ನವದೆಹಲಿ: ಹೊಸ ರೈಲುಗಳ ಘೋಷಣೆಗಳಂತಹ ಜನಪ್ರಿಯ ಯೋಜನೆಗಳಿಲ್ಲದೆ ಹಿಂದಿನ ಬಜೆಟ್ ಗಳ ಯೋಜನೆಗಳನ್ನು ಅನುಷ್ಟಾನ ಮಾಡುವುದರ ಬಗ್ಗೆ ಗಮನ ಹರಿಸಿರುವುದಕ್ಕೆ ಸುರೇಶ್ ಪ್ರಭು ಅವರ ರೇಲ್ವೆ ಬಜೆಟ್ ಅನ್ನು ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಶ್ಲಾಘಿಸಿದ್ದಾರೆ.

ಮೈತ್ರಿ ಪಕ್ಷ ಶಿವಸೇನೆಯು ಸೇರಿದಂತೆ ವಿಪಕ್ಷಗಳು ರೈಲ್ವೇ ಬಜೆಟನ್ನು ಟೀಕಿಸುತ್ತಿರುವಾಗ, ಯಾದವ್ ಅವರು ಬಜೆಟ್ ಬಗ್ಗೆ ಪ್ರಶಂಸಿಸಿರುವುದು ಬಿಜೆಪಿ ಪಕ್ಷಕ್ಕೆ ಸ್ವಲ್ಪವಾದರೂ ಹುರುಪು ಬಂದಿದೆ. "ಇದು ಒಳ್ಳೆಯ ಕೆಲಸ. ಅವರು (ಪ್ರಭು) ಯಾವುದೇ ಹೊಸ ಯೋಜನೆಗಳನ್ನು ಘೋಷಿಸಿಲ್ಲ ಬದಲಾಗಿ ಹಿಂದಿನ ಯೋಜನೆಗಳನ್ನು ಪೂರೈಸುವ ಭರವಸೆ ನೀಡಿದ್ದಾರೆ. ಇದನ್ನು ಮಾಡುವಲ್ಲಿ ಅವರು ಸಫಲವಾದರೆ, ಇದು ಅತಿ ದೊಡ್ಡ ಸಾಧನೆಯಾಗಲಿದೆ" ಎಂದು ಸಂಸತ್ತಿನ ಹೊರಗೆ ಯಾದವ್ ತಿಳಿಸಿದ್ದಾರೆ.

ಬಜೆಟ್ ಅನ್ನು ಕಾಂಗ್ರೆಸ್ ಟೀಕಿಸಿರುವ ಬಗ್ಗೆ ಪ್ರಶ್ನಿಸಿದಾಗ ಪ್ರತಿಕ್ರಿಯಿಸಲು ಮುಲಾಯಂ ನಿರಾಕರಿಸಿದ್ದಾರೆ. ಉತ್ತರ ಪ್ರದೇಶಕ್ಕೆ ಯಾವುದೇ ಹೊಸ ಯೋಜನೆಗಳು ಇಲ್ಲದಿರುವ ಬಗ್ಗೆ ಪ್ರಶ್ನಿಸಿದಾಗ, ದೇಶದ ಅತಿ ದೊಡ್ಡ ರಾಜ್ಯ ಯಾವಾಗಲೂ ಅವಗಣನೆಗೆ ಒಳಗಾಗಿದೆ ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT