ಅಲ್ಪ ಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳು 
ರಾಜ್ಯ

ಹಿಂದುಳಿದ ಮತ್ತು ಅಲ್ಪ ಸಂಖ್ಯಾತರಿಗೆ, ಕಾರ್ಮಿಕರಿಗಾಗಿ ಬಜೆಟ್ ನಲ್ಲಿರುವ ಅಂಶಗಳು

ಖಾಸಗಿ ಅನುದಾನಿತ ವಸತಿನಿಲಯದ/ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚ ತಲಾ 100 ರೂ. ಹೆಚ್ಚಳ....

ಹಿಂದುಳಿದ ವರ್ಗಗಳ ಅಭಿವೃದ್ಧಿ
• ಖಾಸಗಿ ಅನುದಾನಿತ ವಸತಿನಿಲಯದ/ ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚ ತಲಾ 100 ರೂ. ಹೆಚ್ಚಳ.
• ಹಿಂದುಳಿದ ವರ್ಗಗಳ 1000 ವಿದ್ಯಾರ್ಥಿಗಳಿಗೆ ಪೂರ್ಣಾವಧಿ ಪಿಎಚ್.ಡಿ, (Full Time) ವ್ಯಾಸಂಗ ವೇತನ/ಫೆಲೋಶಿಪ್ - 5 ಕೋಟಿ ರೂ.
• ಹಿಂದುಳಿದ ವರ್ಗಗಳ ಕೋಶದ (OBC Cell) ಬಲವರ್ಧನೆ ಹಾಗೂ ಸಂಶೋಧನಾ ಚಟುವಟಿಕೆಗಳಿಗೆ - 50 ಲಕ್ಷ ರೂ.
• ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮಾರ್ಗದರ್ಶನ ಶಾಖೆಯನ್ನು `ಮೀಸಲಾತಿ ತನಿಖಾ ಘಟಕ'ವನ್ನಾಗಿ ಮಾರ್ಪಾಡು.
• ಮಾಜಿ ಮುಖ್ಯಮಂತ್ರಿ ದಿ:ಡಿ.ದೇವರಾಜು ಅರಸು ಶತಮಾನೋತ್ಸವ ಆಚರಣೆ.
 - `ಡಿ. ದೇವರಾಜ ಅರಸು'ರವರ ಹೆಸರಿನಲ್ಲಿ 100 ಸಂಖ್ಯಾಬಲದ 100 ಮೆಟ್ರಿಕ್ ನಂತರದ ಬಾಲಕಿಯರ ವಸತಿನಿಲಯಗಳ ಪ್ರಾರಂಭ.
- `ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ' - 4 ಕೋಟಿ ರೂ.
- `ಡಿ.ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ' - 10 ಕೋಟಿ ರೂ.
• ಇಲಾಖೆಯ ಎಲ್ಲಾ ವಿದ್ಯಾರ್ಥಿನಿಲಯಗಳ/ವಸತಿ ಶಾಲೆಗಳ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚ ತಲಾ 100 ರೂ. ಹೆಚ್ಚಳ.
• ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಸ್ವಂತ ಕಟ್ಟಡ ನಿರ್ಮಾಣ - 45 ಕೋಟಿ ರೂ.
• 2195 ವಿದ್ಯಾರ್ಥಿ ನಿಲಯಗಳಿಗೆ ಮೂಲಭೂತ ಸೌಕರ್ಯ - 35 ಕೋಟಿ ರೂ.
• 815 ಬಾಲಕಿಯರ ವಿದ್ಯಾರ್ಥಿ ನಿಲಯಗಳಿಗೆ ಸಿಸಿ ಕ್ಯಾಮರಾ ಅಳವಡಿಕೆ - 3 ಕೋಟಿ ರೂ.
• 46 ಅಲೆಮಾರಿ/ಅರೆ ಅಲೆಮಾರಿ ಜನಾಂಗದವರ ಸರ್ವತೋಮುಖ ಅಭಿವೃದ್ಧಿ ಕಾರ್ಯಕ್ರಮಗಳಿಗೆ - 50 ಕೋಟಿ ರೂ.
• ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು - 189 ಕೋಟಿ ರೂ.
• `ಡಿ.ದೇವರಾಜ ಅರಸು ಸ್ವಯಂ ಉದ್ಯೋಗ ವೈಯಕ್ತಿಕ ಸಾಲ ಯೋಜನೆ' - ಶೇಕಡಾ 15ರ ಸಹಾಯಧನದೊಂದಿಗೆ ಗರಿಷ್ಠ 2 ಲಕ್ಷ ರೂ.ಗಳ ಸಾಲ.
• ಸಾಂಪ್ರದಾಯಿಕ ವೃತ್ತಿದಾರ ಸಮುದಾಯಗಳಿಗೆ ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ರೂ.2.00 ಲಕ್ಷಗಳ ಸಾಲ ಮತ್ತು ಶೇ.15 ರಷ್ಟು ಸಹಾಯಧನ.
• `ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ'ಕ್ಕೆ - 10 ಕೋಟಿ ರೂ.
• `ವಿದ್ಯಾಸಿರಿ ಯೋಜನೆ'-75,000 ವಿದ್ಯಾರ್ಥಿಗಳಿಗೆ ವಿಸ್ತರಣೆ-112.5 ಕೋಟಿ ರೂ.
• ಗಂಗಾ ಕಲ್ಯಾಣ ನೀರಾವರಿ ಯೋಜನೆ-ಘಟಕ ವೆಚ್ಚ 2 ಲಕ್ಷದ ವರೆಗೆ ಹೆಚ್ಚಳ.
• ಡೋಲು ಮತ್ತು ನಾದಸ್ವರ ಸಂಗೀತ ಕಲೆಗಳ ಪುನಶ್ಚೇತನ.
• ಹಿಂದುಳಿದ ವರ್ಗಗಳ ಕೆನೆಪದರ ಮಿತಿಯಲ್ಲಿ 6 ಲಕ್ಷಗಳಿಗೆ ಹೆಚ್ಚಳ.

ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್
• ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯ ವಿಸ್ತರಣೆ
• ತಾಂತ್ರಿಕ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಕಲಿಕಾ ಸಾಮಗ್ರಿ ಖರೀದಿಗೆ ಸಹಾಯಧನ.
• ಮಾನ್ಯ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಯೋಜನೆ ಜಾರಿ.
• ಎಂ.ಎಸ್.ಡಿ.ಪಿ. ಯೋಜನೆಯಡಿ 30 ವಿದ್ಯಾರ್ಥಿನಿಲಯ/ವಸತಿ ಶಾಲೆ/ ವಸತಿ ಕಾಲೇಜುಗಳ ಪ್ರಾರಂಭ. ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿ ಸಂಖ್ಯಾಬಲ ಹೆಚ್ಚಳ.
• 4 ಮೊರಾರ್ಜಿ ವಸತಿ ಶಾಲೆ, 2 ಮೊರಾರ್ಜಿ ಪದವಿ ಪೂರ್ವ ಕಾಲೇಜು, ಮೆಟ್ರಿಕ್ ನಂತರದ 5 ವಿದ್ಯಾರ್ಥಿನಿಲಯ ಮತ್ತು 2 ಅಲ್ಪಸಂಖ್ಯಾತರ ಮಾದರಿಯಲ್ಲಿ ವಸತಿ ಶಾಲೆಗಳ ಪ್ರಾರಂಭ.
• ಕಾಮೆಡ್-ಕೆ ಇಂದ ಆಯ್ಕೆಯಾಗುವ ವಿದ್ಯಾರ್ಥಿಗಳಿಗೂ ಅರಿವು ಸಾಲ ಯೋಜನೆಯ ವಿಸ್ತರಣೆ.
• ವಿದೇಶಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ಪೋಷಕರ ಆದಾಯದನ್ವಯ ಗರಿಷ್ಟ 20/10 ಲಕ್ಷಗಳ ಶುಲ್ಕ ಪಾವತಿ.
• ಮೆಟ್ರಿಕ್ ಪೂರ್ವ/ಮೆಟ್ರಿಕ್ ನಂತರ ಮೊರಾರ್ಜಿ ದೇಸಾಯಿ ವಸತಿ ಶಾಲೆ/ಕಾಲೇಜು ಮತ್ತು ಅಲ್ಪಸಂಖ್ಯಾತ ವಸತಿ ಶಾಲೆಗಳಲ್ಲಿ ಭೋಜನ ವೆಚ್ಚ ತಲಾ 100 ರೂ. ಹೆಚ್ಚಳ.
• `ಕಲಿಕಾ ಮತ್ತು ಸಾಮಗ್ರಿ ಯೋಜನೆ'-350 ಉರ್ದು ಶಾಲೆ ಮತ್ತು 65 ವಸತಿ ಶಾಲೆ /ಕಾಲೇಜುಗಳಲ್ಲಿ ಇ-ಲರ್ನಿಂಗ್ ಸೌಲಭ್ಯ.
• ಅಲ್ಪಸಂಖ್ಯಾತರ ಹಾಸ್ಟೆಲ್/ವಸತಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲೀಷ್ ಮತ್ತು ಕಂಪ್ಯೂಟರ್ ತರಬೇತಿ.
• ವಕ್ಫ್ ಆಸ್ತಿಗಳ ಅತಿಕ್ರಮಣ ತೆರವು ಹಾಗೂ ಸಂರಕ್ಷಣೆಗೆ ಟಾಸ್ಕ್ ಫೋರ್ಸ್ ರಚನೆ.
• ಹಜರತ್ ಹಮೀದ್ ಷಾ ಮತ್ತು ಹಜರತ್ ಮೌಹಿದ್ ಷಾ ಖಾದರಿ ವಕ್ಫ್ ಸಂಸ್ಥೆಗೆ 1 ಕೋಟಿ ರೂ.
• ಮೋತಿನಗರ, ಮಲಬಾರ್ ಮುಸ್ಲಿಂ ಅಸೋಸಿಯೇಷನ್, ಬೆಂಗಳೂರು ನಗರ ಜಿಲ್ಲೆ ಇವರ ನೂತನ ಕಟ್ಟಡ ನಿರ್ಮಾಣ- 3 ಕೋಟಿ ರೂ.
• ಶ್ರೀರಂಗಪಟ್ಟಣದ ಗಂಜಾಂನ ಹಜರತ್ ಟಿಪ್ಪು ಸುಲ್ತಾನ್ ಸ್ಮಾರಕದ ಸಮಗ್ರ ಅಭಿವೃದ್ಧಿ-2 ಕೋಟಿ ರೂ.
• ರಾಜ್ಯದ ಜೈನ ದೇವಾಲಯ (ಬಸದಿ)ಗಳ ಜೀರ್ಣೋದ್ಧಾರ - 2 ಕೋಟಿ ರೂ.
• 2001 ರಿಂದ ಇಲ್ಲಿಯವರೆಗೆ ಪೂರ್ಣಗೊಳ್ಳದೇ ಇರುವ ಶಾದಿ ಮಹಲ್ ಮತ್ತು ಸಮುದಾಯ ಭವನಗಳಿಗೆ - 60 ಕೋಟಿ ರೂ. ವಸತಿ
• ನಿವೇಶನ ರಹಿತ ಬಡ ಫಲಾನುಭವಿಗಳಿಗೆ 20,000 ನಿವೇಶನಗಳ ಹಂಚಿಕೆ.
• ವಿವಿಧ ವಸತಿ ಯೋಜನೆಗಳಡಿ 4.58 ಲಕ್ಷ ಹೊಸ ಮನೆ ನಿರ್ಮಾಣ
- ಪ.ಜಾ/ಪ.ಪಂ. ಕುಟುಂಬಗಳಿಗೆ ಪೂರ್ಣ ಸಹಾಯಧನದೊಂದಿಗೆ 2.98 ಲಕ್ಷ ಮನೆಗಳ ನಿರ್ಮಾಣ - 3405 ಕೋಟಿ ರೂ. ಅವಕಾಶ.
• ಸಮಗ್ರ ಕೊಳಗೇರಿ ಅಭಿವೃದ್ಧಿ ನೀತಿ ಜಾರಿ.
• ಕರ್ನಾಟಕ ಕೊಳಗೇರಿ (ಸುಧಾರಣೆ ಮತ್ತು ನಿರ್ಮೂಲನೆ) ಅಧಿನಿಯಮ, 1973ಕ್ಕೆ ತಿದ್ದುಪಡಿ-ಯೋಜಿತ ವಿಧಾನದಲ್ಲಿ ಕೊಳಗೇರಿ ಉಪಕರ ವಸೂಲಿಗೆ ಅವಕಾಶ.
• ಧಾರಣೀಯ ವಸತಿ ನೀತಿಯಲ್ಲಿ ಅಗತ್ಯ ಪರಿಷ್ಕರಣೆ, ವಸತಿ ಸಂಬಂದಿತ ಕಾಯ್ದೆ, ನಿಯಮಗಳು, ವಿಧಾನಗಳ ಸರಳೀಕರಣ ಹಾಗೂ ಕರ್ನಾಟಕ ಗೃಹ ಮಂಡಳಿ ಅಧಿನಿಯಮ, 1962ಕ್ಕೆ ತಿದ್ದುಪಡಿ.

ಕಾರ್ಮಿಕ, ಉದ್ಯೋಗ ಮತ್ತು ತರಬೇತಿ
• ಯುವ ಯುಗ' - ಗ್ರಾಮೀಣ ಮತ್ತು ನಗರ ಪ್ರದೇಶದ ಯುವ ಜನಾಂಗಕ್ಕೆ ವಿವಿಧ ಕೌಶಲ್ಯ ತರಬೇತಿ ನೀಡಲು ಹೊಸ ಕಾರ್ಯಕ್ರಮ ಜಾರಿ - 10 ಕೋಟಿ ರೂ.
• ಆಯ್ದ ಐ.ಟಿ.ಐ.ಗಳಲ್ಲಿ ಬಹುಕೌಶಲ್ಯ ತರಬೇತಿ ಹಾಗೂ ಮಲ್ಟಿ ಟ್ರೇಡ್‍ಗಳ ಅನುಷ್ಠಾನ. 3.5 ಕೋಟಿ ರೂ.
• ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಹೆಚ್ಚುವರಿ ವೃತ್ತಿಗಳ ಪ್ರಾರಂಭ - 12.5 ಕೋಟಿ ರೂ.
• 22 ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಸಿಸಿಟಿವಿ ಅಳವಡಿಕೆ - 50 ಲಕ್ಷ ರೂ.
• ನೂತನ ಕಾರ್ಮಿಕ ನೀತಿ ಜಾರಿ.
• ಅಸಂಘಟಿತ ಕಾರ್ಮಿಕ ವಲಯಕ್ಕೆ `ಸ್ಮಾರ್ಟ್ ಕಾರ್ಡ್' ವಿತರಣೆಗಾಗಿ ಏಕಗವಾಕ್ಷಿ ವ್ಯವಸ್ಥೆ ಜಾರಿ - 10 ಕೋಟಿ ರೂ.ಗಳು.
• `ಬಾಯ್ಲರ್ ಮೆಟೀರಿಯಲ್ ಪರೀಕ್ಷೆ ಮತ್ತು ತರಬೇತಿ ಕೇಂದ್ರ'ದ ಸ್ಥಾಪನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT