ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನೆಗಳು 
ರಾಜ್ಯ

ಮಹಿಳಾ-ಮಕ್ಕಳ ಅಭಿವೃದ್ಧಿ ಮತ್ತು ವಿಕಲಚೇತನರ-ಹಿರಿಯ ನಾಗರೀಕರ ಸಬಲೀಕರಣ

2015-16ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಳನ್ನು ಘೋಷಣೆ ಮಾಡಲಾಗಿದ್ದು...

ಬೆಂಗಳೂರು: 2015-16ನೇ ಸಾಲಿನ ರಾಜ್ಯ ಬಜೆಟ್ ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಳನ್ನು ಘೋಷಣೆ ಮಾಡಲಾಗಿದ್ದು, ವಿಕಲ ಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣಕ್ಕಾಗಿಯೂ ಕ್ರಮಗಳನ್ನು ಕೈಗೊಳ್ಳಲಾಗಿದೆ.

• ವಿದ್ಯುನ್ಮಾನ ಮಾಹಿತಿ ನಿರ್ವಹಣಾ (EMIS) ವ್ಯವಸ್ಥೆಯ ಅಭಿವೃದ್ಧಿ -2 ಕೋಟಿ ರೂ.
• ಅಂಗನವಾಡಿ ಕಾರ್ಯಕರ್ತೆಯರಿಗೆ - ರೂ.500 ಮತ್ತು ಸಹಾಯಕಿಯರಿಗೆ ರೂ.250 ಗೌರವಧನ ಹೆಚ್ಚಳ.
• ಆಸಿಡ್ ದಾಳಿಗೊಳಗಾದ ಮಹಿಳೆಯರಿಗಾಗಿ ನಿಧಿ ಸ್ಥಾಪನೆ - 5 ಕೋಟಿ ರೂ. ಚಿಕಿತ್ಸೆಗಾಗಿ ಗರಿಷ್ಠ 2 ಲಕ್ಷ ರೂ ತುರ್ತು ಪರಿಹಾರ, ಮರಣಹೊಂದಿದಲ್ಲಿ 1 ಲಕ್ಷ ರೂ. ಪರಿಹಾರ.
• ಅಂಗನವಾಡಿ ಕೇಂದ್ರಗಳಲ್ಲಿ ಸೌರಶಕ್ತಿ ದೀಪಗಳು, ಫ್ಯಾನ್‍ಗಳ ಅಳವಡಿಕೆ - 5 ಕೋಟಿ ರೂ.
• ಹೆಣ್ಣುಮಕ್ಕಳ ಶೋಷಣೆ ತಡೆ, ಬಾಲ್ಯ ವಿವಾಹ ನಿಷೇಧ, ಅಪೌಷ್ಟಿಕತೆ ನಿವಾರಣೆ ಒಳಗೊಂಡ ಹೆಣ್ಣುಮಕ್ಕಳ ನೀತಿ ಜಾರಿ.
• ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ 68.22 ಕೋಟಿ ರೂ.ಗಳಲ್ಲಿ ಈ ಕೆಳಕಂಡ ಕಾರ್ಯಕ್ರಮಗಳು:
• ಮಾಜಿ ದೇವದಾಸಿಯರಿಗೆ ಬ್ಯಾಂಕ್ ಮೂಲಕ ನೀಡುತ್ತಿರುವ ಸಾಲದ ಬದಲು ಸಹಾಯಧನ 20,000 ರೂ.ಗಳಿಗೆ ಹೆಚ್ಚಳ.
• ಮಾಜಿ ದೇವದಾಸಿಯರ ಮಾಸಾಶನ - 1,000 ರೂ.ಗಳಿಗೆ ಹೆಚ್ಚಳ.
• 11,818 ನಿವೇಶನವುಳ್ಳ ವಸತಿ ರಹಿತ ಮಾಜಿ ದೇವದಾಸಿಯರಿಗೆ ವಸತಿ ಸೌಲಭ್ಯ.
• `ಉದ್ಯೋಗಿನಿ' ಯೋಜನೆಯಡಿ 15,000 ಫಲಾನುಭವಿಗಳಿಗೆ ಸಹಾಯಧನ.
• ಸ್ತ್ರೀಶಕ್ತಿ ಸಂಘಗಳಿಗೆ ನೀಡುತ್ತಿರುವ ಬಡ್ಡಿರಹಿತ ಸಾಲ 2 ಲಕ್ಷ ರೂ.ಗಳಿಗೆ ಹೆಚ್ಚಳ
• `ಚೇತನ' ಯೋಜನೆ ಜಾರಿ-1000 ಲೈಂಗಿಕ ಕಾರ್ಯಕರ್ತೆಯರಿಗೆ ತಲಾ 20,000 ರೂ.ಗಳ ಆರ್ಥಿಕ ಸೌಲಭ್ಯ.
• ಲೈಂಗಿಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ರಾಜ್ಯ ನೀತಿ ಜಾರಿ - ಆದಾಯೋತ್ಪನ್ನ ಚಟುವಟಿಕೆಗಳಿಗೆ 1,000 ಫಲಾನುಭವಿಗಳಿಗೆ 20,000 ರೂ.ಗಳ ಪ್ರೋತ್ಸಾಹಧನ.
• ಶ್ರೀ ನಿಡುಮಾಮಿಡಿ ಮಠದ ಮಹಿಳಾ ಸಾಧನಾಶ್ರಮದ ಕಟ್ಟಡ ನಿರ್ಮಾಣ ಹಾಗೂ ಸೌಲಭ್ಯಕ್ಕೆ - 2 ಕೋಟಿ ರೂ.
• ವಿಕಲಚೇತನ ಗ್ರಾಮೀಣ ಪುನರ್ವಸತಿ ಯೋಜನೆಯಡಿ ವಿ.ಆರ್.ಡಬ್ಲ್ಯೂರವರಿಗೆ ರೂ.2,000ಕ್ಕೆ ಮತ್ತು ಎಂ.ಆರ್.ಡಬ್ಲ್ಯೂರವರಿಗೆ ರೂ.5,000ಕ್ಕೆ ಗೌರವ ಧನ ಹೆಚ್ಚಳ. 3 ಜಿಲ್ಲೆಗಳಿಗೆ ಒಬ್ಬರಂತೆ ರೂ.13,000 ಗೌರವಧನದೊಂದಿಗೆ 10 ಜಿಲ್ಲಾ ಸಂಯೋಜಕರ ನೇಮಕ.
• ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರಗಳು - ಇನ್ನೂ 16 ಜಿಲ್ಲೆಗಳಿಗೆ ವಿಸ್ತರಣೆ.
• ವಿಕಲಚೇತನರ ಸ್ವಯಂ ಉದ್ಯೋಗಕ್ಕಾಗಿ ದಿನಾಂಕ 31.03.2014 ರವರೆಗೆ ನೀಡಲಾದ ಅಸಲು ಮತ್ತು ಬಾಕಿ ಬಡ್ಡಿ ಮನ್ನಾ.
• 46 ಶ್ರವಣದೋಷ ಶಾಲೆಗಳಲ್ಲಿನ 5, 6 ಮತ್ತು 7ನೇ ತರಗತಿಯ ಮಕ್ಕಳಿಗೆ ಉಪಗ್ರಹ ಆಧಾರಿತ ಶಿಕ್ಷಣ ಜಾರಿ - 3.63 ಕೋಟಿ ರೂ.
• 30 ಜಿಲ್ಲೆಗಳಲ್ಲಿ `ವಿಕಲಚೇತನರ ಸಹಾಯವಾಣಿ' ಕೇಂದ್ರ ಪ್ರಾರಂಭ-2.15 ಕೋಟಿ ರೂ.ಗಳ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT