2016ರ ಬಜೆಟ್ ಪ್ರತಿಯನ್ನು ಸಂಸತ್ತಿನ ಒಳಗೆ ಕೊಂಡುಹೋಗುವ ಮುನ್ನ ಶ್ವಾನದಿಂದ ತಪಾಸಣೆ ನಡೆಸುತ್ತಿರುವ ಸಿಬ್ಬಂದಿ 
ಕೇಂದ್ರ ಬಜೆಟ್

ವಿವಿಧ ವಲಯಗಳ ಮೇಲೆ ಬಜೆಟ್ ಪರಿಣಾಮ

ವಿತ್ತ ಸಚಿವ ಅರುಣ್ ಜೇಟ್ಲಿಯವರು ಸಂಸತ್ತಿನಲ್ಲಿ ಮಂಡಿಸಿದ 2016-17ನೇ ಸಾಲಿನ ಬಜೆಟ್ ನಲ್ಲಿ ವಿವಿಧ ವಲಯಗಳಿಗೆ ಯಾವ ರೀತಿ...

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿಯವರು ಸಂಸತ್ತಿನಲ್ಲಿ ಮಂಡಿಸಿದ 2016-17ನೇ ಸಾಲಿನ ಬಜೆಟ್ ನಲ್ಲಿ ವಿವಿಧ ವಲಯಗಳಿಗೆ ಯಾವ ರೀತಿ ಉಪಯೋಗವಾಗಿದೆ ನೋಡೋಣ ಬನ್ನಿ:

ಗ್ರಾಮೀಣ ಮತ್ತು ಕೃಷಿ ವಲಯ:
- ಕೃಷಿ ವಲಯಕ್ಕೆ ಈ ಬಾರಿಯ ಬಜೆಟ್ ನಲ್ಲಿ 35 ಸಾವಿರದ 984 ಕೋಟಿ ರೂಪಾಯಿ ಮೀಸಲು.
- ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ 19 ಸಾವಿರ ಕೋಟಿ ರೂಪಾಯಿ.
-ಗ್ರಾಮೀಣ ವಲಯಗಳ ಅಭಿವೃದ್ಧಿಗೆ 87 ಸಾವಿರದ 765 ಕೋಟಿ ರೂಪಾಯಿ.
-ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 38 ಸಾವಿರದ 500 ಕೋಟಿ ರೂಪಾಯಿ.
-ಮೇ 1, 2018ರ ಹೊತ್ತಿಗೆ ಗ್ರಾಮೀಣ ಭಾಗಗಳಿಗೆ ಸಂಪೂರ್ಣ ವಿದ್ಯುತ್.
- ಕೃಷಿ ಸಾಲದ ಗುರಿ 9 ಲಕ್ಷ ಕೋಟಿ ರೂಪಾಯಿ. ಬೆಳೆ ವಿಮಾ ಯೋಜನೆಗೆ 5 ಸಾವಿರದ 500 ಕೋಟಿ ರೂಪಾಯಿ.
-ಸಾವಯವ ಕೃಷಿಯಡಿ ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿ 5 ಲಕ್ಷ ಎಕರೆ,

 ಸಾಮಾಜಿಕ ವಲಯ:
-ಶಿಕ್ಷಣ, ಆರೋಗ್ಯ ಸೇರಿದಂತೆ ಇತರ ಸಾಮಾಜಿಕ ವಲಯಗಳಿಗೆ 1 ಲಕ್ಷದ 51 ಸಾವಿರದ 581 ಕೋಟಿ ರೂಪಾಯಿ ಮೀಸಲು.
- ಪ್ರತಿ ಕುಟುಂಬಕ್ಕೆ 1 ಲಕ್ಷ ರೂಪಾಯಿ ನೀಡುವ ಆರೋಗ್ಯ ರಕ್ಷಣೆ ಯೋಜನೆ. ಹಿರಿಯ ನಾಗರಿಕರಿಗೆ 30 ಸಾವಿರ ರೂಪಾಯಿ ಹೆಚ್ಚು ಮೊತ್ತ ನೀಡಿಕೆ.
- ಜೆನಿರಿಕ್ ಔಷಧಿಗಳ ಮಾರಾಟಕ್ಕೆ 3 ಸಾವಿರ ಮಳಿಗೆಗಳು.
-ಸ್ವಚ್ಛ ಭಾರತ ಅಭಿಯಾನಕ್ಕೆ 9 ಸಾವಿರ ಕೋಟಿ ರೂಪಾಯಿ.
-ಸಾರ್ವಜನಿಕ ಮತ್ತು ಖಾಸಗಿ ಸಹಯೋಗದಲ್ಲಿ ರಾಷ್ಟ್ರೀಯ ಡಯಾಲಿಸಿಸ್ ಸೇವಾ ಕೇಂದ್ರ. ಗ್ರಾಮೀಣ ಭಾಗದ ಮಹಿಳೆಯರಿಗೆ ಎಲ್ ಪಿಜಿ ಸಂಪರ್ಕ.

ಶಿಕ್ಷಣ ಮತ್ತು ಉದ್ಯೋಗ:
-62 ಹೊಸ ನವೋದಯ ವಿದ್ಯಾಲಯಗಳ ಸ್ಥಾಪನೆ.
- ಸಾವಿರ ಕೋಟಿ ರೂಪಾಯಿ ಹೂಡಿಕೆಯಲ್ಲಿ ಉನ್ನತ ಶಿಕ್ಷಣ ಹಣಕಾಸು ನೆರವು ಸಂಸ್ಥೆ ಸ್ಥಾಪನೆ.
-10 ಸರ್ಕಾರಿ ಮತ್ತು 10 ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವಿಶ್ವದರ್ಜೆ ಮಟ್ಟಕ್ಕೇರಿಸುವುದು. ಶಾಲೆ ಮತ್ತು ಡಿಪ್ಲೊಮಾ ಪದವಿ ಮುಗಿಸಿದವರಿಗೆ ಡಿಜಿಟಲ್ ಪ್ರಮಾಣಪತ್ರ.
-ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಕ್ಕೆ ಸಾವಿರದ 804 ಕೋಟಿ ರೂಪಾಯಿ ಮೀಸಲು.
- ಎಲ್ಲಾ ನೌಕರರಿಗೆ ಮೊದಲ ಮೂರು ವರ್ಷಗಳಲ್ಲಿ ಪಿ.ಎಫ್ ಹಣದ ಶೇಕಡಾ 8.33 ಸರ್ಕಾರವೇ ಭರಿಸಲಿದೆ.

ಮೂಲಭೂತ ಸೌಕರ್ಯ:
-ರಸ್ತೆ ನಿರ್ಮಾಣಕ್ಕೆ 97 ಸಾವಿರ ಕೋಟಿ ರೂಪಾಯಿ.
-ಮೂಲಭೂತ ಸೌಕರ್ಯಕ್ಕೆ ಈ ವರ್ಷದ ಬಜೆಟ್ ನಲ್ಲಿ 2 ಲಕ್ಷದ 21 ಸಾವಿರದ 246 ಕೋಟಿ ರೂಪಾಯಿ.
-10 ಸಾವಿರ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಮತ್ತು 50 ಸಾವಿರ ಕಿಲೋ ಮೀಟರ್ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಬದಲಾವಣೆ.
- ಪೂರ್ವ ಮತ್ತು ಪಶ್ಚಿಮ ತೀರಗಳಲ್ಲಿ ಹೊಸ ಹಸಿರು ಬಂದರು ಅಭಿವೃದ್ಧಿ. ಹಳೆ ವಿಮಾನ ನಿಲ್ದಾಣಗಳು ಪುನರುಜ್ಜೀವನ. ಸಣ್ಣ ಬಂದರುಗಳ ಅಭಿವೃದ್ಧಿಗೆ ರಾಜ್ಯಗಳೊಂದಿಗೆ ಕೇಂದ್ರದ ಸಹಕಾರ.
- ಮುಂದಿನ 15-20 ವರ್ಷಗಳಲ್ಲಿ ಪರಮಾಣು ಶಕ್ತಿಯ ವೃದ್ಧಿಗೆ ಯೋಜನೆ.
-ವಿಮೆ ಮತ್ತು ಪಿಂಚಣಿ, ಸಂಪತ್ತು ಪುನರ್ರಚನಾ ಕಂಪೆನಿ, ಷೇರು ವಿನಿಮಯಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಸುಧಾರಣೆ.

ಹಣಕಾಸು ವಲಯ:
ಹಣಕಾಸು ಮಸೂದೆ-2016ರ ಮೂಲಕ ಹಣಕಾಸು ನೀತಿ ಚೌಕಟ್ಟು ಮತ್ತು ಹಣಕಾಸು ನೀತಿ ಸಮಿತಿಯ ಶಾಸನಬದ್ಧ ಆಧಾರ
-ಸಾರ್ವಜನಿಕ ವಲಯ ಬ್ಯಾಂಕುಗಳ ಮರುಬಂಡವಾಳೀಕರಣಕ್ಕೆ 25 ಸಾವಿರ ಕೋಟಿ ರೂಪಾಯಿ ಮೀಸಲು.
-ಷೇರು ಮಾರುಕಟ್ಟೆಗೆ ಸಾಮಾನ್ಯ ವಿಮಾ ಕಂಪೆನಿಗಳ ಸೇರ್ಪಡೆ.

ಖಾಸಗಿ ಹಣಕಾಸು ವಲಯ:
5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬಗಳ ಮಕ್ಕಳಿಗೆ ಸೆಕ್ಷನ್ 87 ಎ ಅಡಿ 5 ಸಾವಿರ ಶಾಲಾ ಶುಲ್ಕ ವಿನಾಯಿತಿ. ಬಾಡಿಗೆ ರಿಯಾಯಿತಿ ಮೊತ್ತ ಪ್ರತಿವರ್ಷ 24 ಸಾವಿರದಿಂದ 60 ಸಾವಿರಕ್ಕೆ ಏರಿಕೆ.
-ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ನಿವೃತ್ತಿ ಸಂದರ್ಭದಲ್ಲಿ ಪಡೆಯುವ ಪಿಂಚಣಿಯ ಮೊತ್ತದ ಶೇಕಡಾ 40 ರಷ್ಟು ಹಣಕ್ಕೆ ತೆರಿಗೆ ವಿನಾಯ್ತಿ.
- 35 ಲಕ್ಷದವರೆಗಿನ ಮನೆ ಕೊಳ್ಳುವವರಿಗೆ ಗೃಹ ಸಾಲದಲ್ಲಿ 50 ಸಾವಿರ ರೂಪಾಯಿ ವಿನಾಯ್ತಿ, ಮೊದಲ ಮನೆ ಕೊಳ್ಳುವವರು 50 ಲಕ್ಷದೊಳಗಿನ ಮನೆ ಕೊಂಡವರಿಗೆ ಸಹ 50 ಸಾವಿರ ರೂಪಾಯಿ ವಿನಾಯ್ತಿ.
ಪ್ರಸ್ತುತ ಇರುವ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT