ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ 
ರಾಜ್ಯ ಬಜೆಟ್

ವಿಶೇಷಚೇತನರಿಗೆ ಸೂಕ್ತ ಅನುದಾನ, ಸೌಲಭ್ಯ ಬಜೆಟ್ ನಲ್ಲಿ ಸಿಕ್ಕಿಲ್ಲ: ವಿಕಲಾಂಗರ ಅಸಮಾಧಾನ

ವಿಶೇಷಚೇತನರಿಗೆ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳು ಮತ್ತು ಸಾಲಮನ್ನಾ ಕಡಿಮೆಯಾಗಿದ್ದು ...

ಬೆಂಗಳೂರು: ವಿಶೇಷಚೇತನರಿಗೆ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳು ಮತ್ತು ಸಾಲಮನ್ನಾ ಕಡಿಮೆಯಾಗಿದ್ದು ಮಾತ್ರವಲ್ಲದೆ ಅಸಮರ್ಪಕವಾಗಿದೆ ಎಂದು ರಾಜ್ಯ ವಿಶೇಷಚೇತನರು ಮತ್ತು ಆರೈಕೆದಾರರ ಒಕ್ಕೂಟದ ಅಧ್ಯಕ್ಷ ಜಿ ಎನ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಶಕ್ತರ ಹಕ್ಕುಗಳ ಕಾಯ್ದೆ 2016ನ್ನು ಜಾರಿಗೆ ತರಲು ಕಾರ್ಯಪಡೆ ರಚನೆಯನ್ನು ಸರ್ಕಾರ ಘೋಷಣೆ ಮಾಡಿಲ್ಲ ಎಂದು ನಾಗರಾಜ್ ಹೇಳಿದ್ದಾರೆ. ಇತ್ತೀಚೆಗೆ ಎಲ್ಲಾ ವಸ್ತುಗಳಿಗೂ ಬೆಲೆ ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ವಿಕಲಾಂಗರು ಮತ್ತು ವಿಶೇಷಚೇತನರ ಮಾಸಾಶನವನ್ನು ಕೂಡ ಹೆಚ್ಚಳ ಮಾಡಬೇಕಾಗಿತ್ತು ಎಂದು ಅವರು ಹೇಳಿದರು.

21 ವಿಧದ ಅಶಕ್ತತೆ ಹೊಂದಿರುವವರ ಸಾಮಾಜಿಕ-ಆರ್ಥಿಕ ಸಮೀಕ್ಷೆ, ವಿಶೇಷ ಶಿಕ್ಷಕರಿಗೆ ತರಬೇತಿ ಕೇಂದ್ರ, ವಿಶೇಷಚೇತನರು ವಿದೇಶಗಳಲ್ಲಿ ಅಧ್ಯಯನ ಮಾಡಲು ಆಸಕ್ತಿಯಿದ್ದರೆ ಅವರಿಗೆ ನೆರವು ಮತ್ತು ವಿಶೇಷಚೇತನರಿಗೆ ಚಿಕಿತ್ಸಾ ಕೇಂದ್ರಗಳು ಮತ್ತು ಭಿಕ್ಷುಕರ ಕಾಲೊನಿ ಹತ್ತಿರ 20 ಎಕರೆ ಪ್ರದೇಶದಲ್ಲಿ ಟಚ್ ಸೆನ್ಸಿಟಿವಿಟಿ ಗಾರ್ಡನ್ ಸ್ಥಾಪನೆಯ ಸರ್ಕಾರದ ಘೋಷಣೆಯನ್ನು ನಾಗರಾಜ್ ಸ್ವಾಗತಿಸಿದ್ದಾರೆ.

ರಾಷ್ಟ್ರೀಯ ವಿಕಲಾಂಗ ಹಣಕಾಸು ನಿಗಮದಿಂದ ಪಡೆದುಕೊಂಡ ಸಾಲಮನ್ನಾ ಮಾಡಲು 4 ಕೋಟಿ ರೂಪಾಯಿ ನೀಡುವುದರಿಂದ ಕೆಲವು ವಿಕಲಾಂಗರಿಗೆ ಮಾತ್ರ ಅನುಕೂಲವಾಗುತ್ತದೆಯಷ್ಟೇ ಇದಕ್ಕೆ ಹೆಚ್ಚಿನ ಹಣ ಮೀಸಲಿಡಬೇಕಾಗಿತ್ತು ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯದಲ್ಲಿ ಮಳೆ ಅಭಾವ: ನಾಲ್ಕು ಕಂದಾಯ ವಿಭಾಗಗಳಲ್ಲಿ ಮೋಡ ಬಿತ್ತನೆ; 27 ಕೋಟಿ ರೂ ವೆಚ್ಚ- ಜಲ ಸಂಪನ್ಮೂಲ ಸಚಿವ ಚಲುವರಾಯಸ್ವಾಮಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

Congress ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ, ಬಂಧನ ಭೀತಿ!

ಭಾರತದಲ್ಲಿ ಫುಡ್‌ ಕಂಪನಿಗಳ ಲಾಬಿ: ಚಿಪ್ಸ್ ಮತ್ತು ಕೂಲ್ ಡ್ರಿಂಕ್ಸ್ ಮೇಲೆ ‘ರೆಡ್‌ ಅಲರ್ಟ್’ ಪ್ರಸ್ತಾವ ಕೈಬಿಟ್ಟ FSSAI, ಆಗಿದ್ದೇನು?

'ಬ್ರೋ, ನೀವು ಸುಮ್ಮನೆ ಸಮಯ ವ್ಯರ್ಥ ಮಾಡುತ್ತಿದ್ದೀರಿ': ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ನಾಯಕನ ಕಾಲೆಳೆದ ಸರ್ಫರಾಜ್ ಖಾನ್!