ಬಜೆಟ್ ಮಂಡನೆಗೆ ಮುನ್ನ ಸೂಟ್ ಕೇಸ್ ನೊಂದಿಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ 
ಕೇಂದ್ರ ಬಜೆಟ್

ಬಜೆಟ್ ಮಂಡನೆಯ 'ಸೂಟ್ ಕೇಸ್' ನ ಕುತೂಹಲಕಾರಿ ಕಥೆ

ಸಾಮಾನ್ಯವಾಗಿ ಪ್ರತಿವರ್ಷ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆಗೆ ಮುುನ್ನ ಹಣಕಾಸು ಸಚಿವರು ...

ನವದೆಹಲಿ: ಸಾಮಾನ್ಯವಾಗಿ ಪ್ರತಿವರ್ಷ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆಗೆ ಮುುನ್ನ ಹಣಕಾಸು ಸಚಿವರು ಕೆಂಪು ಸೂಟ್ ಕೇಸ್ ಹಿಡಿದುಕೊಂಡು ಬಂದು ಸಂಸತ್ತು ಹೊರಗೆ ಮಾಧ್ಯಮಗಳ ಕ್ಯಾಮರಾಗಳಿಗೆ ನಸುನಗುತ್ತಾ ಫೋಸ್ ಕೊಡುತ್ತಾರೆ.

ಪ್ರತಿವರ್ಷ ಹಣಕಾಸು ಸಚಿವರು ಕೆಂಪು ಬಣ್ಣದ ಸೂಟ್ ಕೇಸನ್ನೇ ಹಿಡಿದುಕೊಂಡು ಬರುತ್ತಾರೆ ಎಂಬುದೇನಿಲ್ಲ. ಅದು ಕೆಲ ವರ್ಷ ಕಪ್ಪು ಬಣ್ಣ, ಕಂದು, ಕೇಸರಿ, ಬೂದು ಬಣ್ಣ ಕೂಡ ಆಗಿರಬಹುದು. ಪ್ರಣಬ್ ಮುಖರ್ಜಿಯವರು ಡಾ ಮನಮೋಹನ್ ಸಿಂಗ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದಾಗ ಬ್ರಿಟನ್ ನ ಗ್ರಾಡ್ ಸ್ಟೊನ್ ಗೆ ಹೋಲುವ ವೆಲ್ವೆಟ್ ಬಣ್ಣದ ಸೂಟ್ ಕೇಸ್ ಹೊತ್ತು ಲೋಕಸಭೆಗೆ ಬಂದಿದ್ದರು.

ಸರ್ಕಾರದ ಬಜೆಟ್ ನ ಲೆಕ್ಕಪತ್ರದ ದಾಖಲೆಗಳನ್ನು ಸೂಟ್ ಕೇಸ್ ನಲ್ಲಿ ಹೊತ್ತುತರುವ ಸಂಪ್ರದಾಯ ಆರಂಭವಾಗಿದ್ದು 18ನೇ ಶತಮಾನದಲ್ಲಿ ಬ್ರಿಟನ್  ಸರ್ಕಾರದ ಖಜಾನೆಯ ಚಾನ್ಸೆಲರ್ ಮೂಲಕ.

1860ರಲ್ಲಿ ಅಂದಿನ ಬ್ರಿಟನ್ ಬಜೆಟ್ ಮುಖ್ಯಸ್ಥ ವಿಲಿಯಮ್ ಇ ಗ್ಲಾಡ್ ಸ್ಟನ್ ಕೆಂಪು ಬಣ್ಣದ ಸೂಟ್ ಕೇಸ್ ನಲ್ಲಿ ಹೊತ್ತು ತಂದಿದ್ದರು. ನಂತರ ಅವರು ಬ್ರಿಟನ್ ಪ್ರಧಾನಿಯಾದರು. ನಂತರ ಬಂದ ಅನೇಕ ಸರ್ಕಾರಗಳು ಅದೇ ಸೂಟ್ ಕೇಸನ್ನು ಬಳಸಿದವು.

ಭಾರತದಲ್ಲಿ ಮೊದಲ ಬಾರಿಗೆ ಕೇಂದ್ರ ಸಾಮಾನ್ಯ ಬಜೆಟ್ ಮಂಡನೆಯಾಗಿದ್ದು 1947ರಲ್ಲಿ ಆರ್ ಕೆ ಶಣ್ಮುಖಮ್ ಚೆಟ್ಟಿಯವರ ಮೂಲಕ. ಸ್ವಾತಂತ್ರ್ಯ ಸಿಕ್ಕಿ ಕೆಲ ತಿಂಗಳುಗಳು ಕಳೆದಿದ್ದವು. ಅಂದು ಚರ್ಮದ ಬ್ಯಾಗಿನಲ್ಲಿ ಬಜೆಟ್ ನ ದಾಖಲೆಗಳನ್ನು ಅವರು ಹೊತ್ತು ತಂದು ಮಂಡಿಸಿದ್ದರು. ನಂತರ 10 ವರ್ಷಗಳ ನಂತರ ಟಿಟಿ ಕೃಷ್ಣಮಾಚಾರಿ ಫೈಲ್ ಬ್ಯಾಗ್ ನ ರೀತಿಯದ್ದನ್ನು ತಂದಿದ್ದರು. 1958ರಲ್ಲಿ ಬಜೆಟ್ ಮಂಡಿಸಿದ್ದ ಜವಹರಲಾಲ್ ನೆಹರೂ ಕಪ್ಪು ಬಣ್ಣದ ಸೂಟ್ ಕೇಸ್ ತಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT