ಸಾಂದರ್ಭಿಕ ಚಿತ್ರ 
ವಾಣಿಜ್ಯ

ಇನ್ನು ಎಸ್ಎಂಎಸ್ ಚೆಕ್ ಮಾಡ್ಕೊಳ್ಳಿ

ಇನ್ನು ಮುಂದೆ ಬ್ಯಾಂಕುಗಳಲ್ಲಿ ಚೆಕ್ ವಹಿವಾಟು ನಡೆಸಿದೊಡನೆ ಹಣ ಪಾವತಿಸಿದವನು...

- ವಹಿವಾಟಿಗೆ ಎಸ್ಎಂಎಸ್ ರವಾನೆ ಕಡ್ಡಾಯ

ಮುಂಬೈ:
ಇನ್ನು ಮುಂದೆ ಬ್ಯಾಂಕುಗಳಲ್ಲಿ ಚೆಕ್ ವಹಿವಾಟು ನಡೆಸಿದೊಡನೆ ಹಣ ಪಾವತಿಸಿದವನು, ಪಡೆದುಕೊಂಡವನು ಇಬ್ಬರಿಗೂ ಎಸ್ಸೆಮ್ಮೆಸ್ ಸಂದೇಶ ರವಾನೆಯಾಗಲಿದೆ.

ಚೆಕ್‌ಗೆ ಸಂಬಂಧಿಸಿದ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಇಂಥ ಹೊಸ ನಿಯಮ ಜಾರಿ ಮಾಡಿದೆ. ಚೆಕ್ ವಹಿವಾಟು ಆದೊಡನೆ ಇಬ್ಬರಿಗೂ ಎಸ್ಸೆಮ್ಮೆಸ್ ಸಂದೇಶ ಕಳುಹಿಸಬೇಕಾದ್ದು ಕಡ್ಡಾಯಗೊಳಿಸಿ ಆರ್‌ಬಿಐ ಆದೇಶ ಹೊರಡಿಸಿದೆ.

ದೃಢಪಡಿಸಿ: ಅತ್ಯಧಿಕ ಮೌಲ್ಯದ ಚೆಕ್ ಕ್ಲಿಯರೆನ್ಸ್‌ಗೆ ಬಂದಾಗ ಅಥವಾ ಯಾವುದಾದರೂ ಚೆಕ್ ಬಗ್ಗೆ ಅನುಮಾನ ವ್ಯಕ್ತವಾದಾಗ ಬ್ಯಾಂಕುಗಳು ತಕ್ಷಣ ಆಯಾ ಗ್ರಾಹಕನಿಗೆ ದೂರವಾಣಿ ಕರೆ ಮಾಡಿ ಈ ಬಗ್ಗೆ ದೃಢಪಡಿಸಬೇಕು ಎಂದೂ ಆರ್‌ಬಿಐ ಸುತ್ತೋಲೆಯಲ್ಲಿ ಸೂಚಿಸಿದೆ.

ಈವರೆಗೆ ಕಾರ್ಡ್‌ನ ವಹಿವಾಟುಗಳಿಗೆ ಮಾತ್ರ ಎಸ್ಸೆಮ್ಮೆಸ್ ಆರ್‌ಬಿಐ ಸುತ್ತೋಲೆಯಲ್ಲಿ ಸೂಚಿಸಿದೆ.

ಈವರೆಗೆ ಕಾರ್ಡ್‌ನ ವಹಿವಾಟುಗಳಿಗೆ ಮಾತ್ರ ಎಸ್ಸೆಮ್ಮೆಸ್ ಅಲರ್ಟ್ ಕಡ್ಡಾಯವಾಗಿತ್ತು. ಇನ್ನು ಚೆಕ್‌ಗಳಿಗೂ ಇದು ಅನ್ವಯ.

ಯಾವುದೇ ಕಾರಣಕ್ಕೂ ಗ್ರಾಹಕರ ಹೆಸರು, ಖಾತೆ ಸಂಖ್ಯೆ, ಸಹಿ, ಚೆಕ್‌ನ ಸೀರಿಯಲ್ ನಂಬರ್ ಮತ್ತಿತರ ರಹಸ್ಯ ವಿಚಾರಗಳೊಂದಿಗೆ ರಾಜಿ ಮಾಡಿಕೊಳ್ಳಲೇ ಬಾರದು ಎಂದೂ ಆರ್‌ಬಿಐ ತಿಳಿಸಿದೆ.

ಹೆಚ್ಚಿನ ಭದ್ರತೆ

  • ರು.2 ಲಕ್ಷಕ್ಕಿಂತ ಅಧಿಕ ಮೌಲ್ಯದ ಎಲ್ಲ ಚೆಕ್‌ಗಳನ್ನು ಅಲ್ಟ್ರಾವಯಲೆಟ್(ಅತಿನೇರಳೆ) ದೀಪದಿಂದ ಸ್ಕ್ಯಾನ್ ಮಾಡಬೇಕು. ಈ ಮೂಲಕ ಚೆಕ್‌ಗಳನ್ನು ಅಕ್ರಮವಾಗಿ ತಿದ್ದಲಾಗಿದೆಯೇ ಎಂಬುದನ್ನು ಪರೀಕ್ಷಿಸಬೇಕು.
  • ರು.5 ಲಕ್ಷಕ್ಕಿಂತ ಅಧಿಕ ಮೌಲ್ಯದ ಚೆಕ್‌ಗಳನ್ನು ಹಲವು-ಮಟ್ಟದಲ್ಲಿ ಪರೀಕ್ಷಿಸಬೇಕು
  • ಚೆಕ್ ಕ್ಲಿಯರ್ ಮಾಡುವ ಸಿಬ್ಬಂದಿ, ಸರಕರಣೆಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT