ಕ್ರೆಡಿಟ್ ರೇಟಿಂಗ್ (ಸಾಂದರ್ಭಿಕ ಚಿತ್ರ) 
ವಾಣಿಜ್ಯ

ಸ್ಥಿರದಿಂದ ಧನಕ್ಕೆ

ಭಾರತದ ಕ್ರೆಡಿಟ್ ರೇಟಿಂಗ್ ನ ಭವಿಷ್ಯವನ್ನು `ಧನಾತ್ಮಕ' ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಮೂಡೀಸ್ ಘೋಷಿಸಿದೆ. ರೇಟಿಂಗ್ `ಸ್ಥಿರ'ದಿಂದ `ಧನಾತ್ಮಕ'ವಾಗಿ ...

ನವದೆಹಲಿ: ಭಾರತದ ಕ್ರೆಡಿಟ್ ರೇಟಿಂಗ್ ನ ಭವಿಷ್ಯವನ್ನು `ಧನಾತ್ಮಕ' ಎಂದು ಜಾಗತಿಕ ರೇಟಿಂಗ್ ಸಂಸ್ಥೆ ಮೂಡೀಸ್ ಘೋಷಿಸಿದೆ. ರೇಟಿಂಗ್ `ಸ್ಥಿರ'ದಿಂದ `ಧನಾತ್ಮಕ'ವಾಗಿ ಬದಲಾಗಿರುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಜನರಿಗೆ ಮತ್ತಷ್ಟು ಭರವಸೆ ಮೂಡುವಂತೆ ಮಾಡಿದೆ. ಜತೆಗೆ, ಅಚ್ಛೇ ದಿನ್ ಸಮೀಪಿಸುತ್ತಿದೆ ಎಂಬ
ನಿರೀಕ್ಷೆಯನ್ನೂ ಹುಟ್ಟುಹಾಕಿದೆ. ಗುರುವಾರ ರೇಟಿಂಗ್‍ನ ಭವಿಷ್ಯವನ್ನು ಘೋಷಿಸಿದ ಮೂಡೀಸ್, ಭಾರತವು ಕಳೆದ ದಶಕದಲ್ಲಿ ಅತ್ಯಂತ ವೇಗವಾಗಿ ಬೆಳೆದಿದೆ. ಸರ್ಕಾರಗಳು ಕೈಗೊಳ್ಳುತ್ತಿರುವ ಕ್ರಮಗಳು ದೇಶದ ಆರ್ಥಿಕ ಬಲಿಷ್ಠತೆಯನ್ನು ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಿಸಲಿದೆ ಎಂದು ಹೇಳಿದೆ. ಜತೆಗೆ, ಮುಂದಿನ 12-18 ತಿಂಗಳಲ್ಲಿ
ದೇಶವು ರೇಟಿಂಗ್‍ನಲ್ಲಿ ಇನ್ನಷ್ಟು ಶ್ರೇಷ್ಠ ಸ್ಥಾನ ಪಡೆಯಲಿದೆ ಎಂದೂ ಮೂಡೀಸ್ ಅಭಿಪ್ರಾಯಪಟ್ಟಿದೆ. ಈ ಹಿಂದೆ ಮೂಡೀಸ್ ಭಾರತಕ್ಕೆ `ಬಿಎಎ3'
(ಕಳಪೆಗಿಂತ ಒಂದು ಹೆಜ್ಜೆ ಮೇಲೆ) ರೇಟಿಂಗ್ ನೀಡಿತ್ತು. ಮೂಡೀಸ್ ರೇಟಿಂಗ್ ಭವಿಷ್ಯದ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಭಾರತದ ರೇಟಿಂಗ್
ಭವಿಷ್ಯ ಮೇಲ್ದರ್ಜೆ ಗೇರಿರುವುದು ಸಂತಸದ ವಿಚಾರ. ಆದರೆ ಸರ್ಕಾರವು ಇನ್ನೂ ಹೆಚ್ಚಿನದನ್ನು ಮಾಡಬೇಕಿದೆ ಎಂದಿದ್ದಾರೆ.




ಸೆನ್ಸೆಕ್ಸ್ 177 ಅಂಕ ಏರಿಕೆ
ಸತತ 5ನೇ ದಿನವೂ ಮುಂಬೈ ಷೇರುಪೇಟೆಯಲ್ಲಿ ಏರಿಕೆಯ ಹಬ್ಬ. ಅದರಲ್ಲೂ ದೇಶದ ಕ್ರೆಡಿಟ್ ರೇಟಿಂಗ್ ಅನ್ನು ಧನಾತ್ಮಕ ಎಂದು ಮೂಡೀಸ್ ಕರೆದಿರುವುದು ಹೂಡಿಕೆದಾರರಲ್ಲಿ ಇನ್ನಿಲ್ಲದ ಖುಷಿ ಮೂಡಿಸಿದೆ. ಗುರುವಾರ ಎಲ್ಲರೂ ಷೇರು ಖರೀದಿಯಲ್ಲಿ ಭಾರಿ ಆಸಕ್ತಿ ವಹಿಸಿದ ಕಾರಣ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ
177 ಅಂಕ ಏರಿಕೆಯÁಗಿ, 28,885ರಲ್ಲಿ ಕೊನೆಗೊಂಡಿತು. ನಿಫ್ಟಿ 63 ಅಂಕ ಏರಿಕೆಯಾ ಗಿ, 8,778ರಲ್ಲಿ ವಹಿವಾಟು ಅಂತ್ಯಗೊಳಿಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ. ನೆರವು - ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

West Asia War: ಇರಾನ್‌ಗೆ ಮಿಲಿಟರಿ ಬೆಂಬಲ ನೀಡಿದರೆ ಶೇ 50ರಷ್ಟು ಸುಂಕ; ಚೀನಾಗೆ ಡೊನಾಲ್ಡ್ ಟ್ರಂಪ್ ಬೆದರಿಕೆ

SIR ಗೆ ಆಕ್ಷೇಪ; ಪಶ್ಚಿಮ ಬಂಗಾಳ ಚುನಾವಣೆ ರದ್ದತಿಗೆ ಕೋರಿದ್ದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್; ವಿರೋಧಿಗಳಿಗೆ ತೀವ್ರ ಹಿನ್ನಡೆ!

ಥಾಣೆ ಬಳಿ ಕಾಂಕ್ರೀಟ್ ಮಿಕ್ಸರ್ ಲಾರಿ - ವ್ಯಾನ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ 11 ಮಂದಿ ಸಾವು

SCROLL FOR NEXT