ಸಂಗ್ರಹ ಚಿತ್ರ 
ವಾಣಿಜ್ಯ

ಐಟಿ ರಿಟರ್ನ್ಸ್ ಇನ್ನು ಸರಳ

ಆನ್‍ಲೈನ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಸುವವರು ಇನ್ನು ಮುಂದೆ ಸ್ವೀಕೃತಿ ಪತ್ರ(ಅಕ್ನಾಲೆಡ್ಜ್‍ಮೆಂಟ್)ವನ್ನು ಅಂಚೆ ಮೂಲಕ ಕಳುಹಿಸಬೇಕಾಗಿಲ್ಲ...

ನವದೆಹಲಿ: ಆನ್‍ಲೈನ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಸುವವರು ಇನ್ನು ಮುಂದೆ ಸ್ವೀಕೃತಿ ಪತ್ರ(ಅಕ್ನಾಲೆಡ್ಜ್‍ಮೆಂಟ್)ವನ್ನು ಅಂಚೆ ಮೂಲಕ ಕಳುಹಿಸಬೇಕಾಗಿಲ್ಲ.

ಬದಲಿಗೆ ಆಧಾರ್ ಆಧರಿತ ಎಲೆಕ್ಟ್ರಾನಿಕ್ ದೃಢೀಕರಣ ಕೋಡ್ ಮೂಲಕ ಈ ದಾಖಲೆಯನ್ನು ದೃಢೀಕರಿಸಲಾಗುತ್ತದೆ. ತೆರಿಗೆದಾರರಿಗೆ ಸುಲಭವಾಗಲೆಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಈ ಹೊಸ ನಿಯಮ ಜಾರಿ ಮಾಡಿದೆ. ಅದರಂತೆ, 2015-16ರ ಐಟಿಆರ್ ಅರ್ಜಿಯಲ್ಲಿ ಹೊಸ ಕಾಲಂ ಸೇರಿಸಲಾಗಿದೆ.

ಅದರಲ್ಲಿ ತೆರಿಗೆದಾರರು ತಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ಈ ಸಂಖ್ಯೆಯನ್ನು ಆದಾಯ ತೆರಿಗೆ ಇಲಾಖೆಯು ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ಒನ್ ಟೈಂ ಪಾಸ್‍ವರ್ಡ್ ಮೂಲಕ ದೃಢೀಕರಿಸುತ್ತದೆ. ಇಲಾಖೆಯ ಇ-ಫೈಲಿಂಗ್ ಲಿಂಕ್‍ನ ವೆಬ್‍ಸೈಟ್‍ಗೆ ಶೀಘ್ರದಲ್ಲೇ ಇದನ್ನು ಸೇರಿಸಲಾಗುತ್ತದೆ.

ಹೀಗಾಗಿ ತೆರಿಗೆದಾರರು ಬೆಂಗಳೂರಿನಲ್ಲಿರುವ ಸಿಪಿಸಿಗೆ ಸ್ವೀಕೃತಿ ಪತ್ರವನ್ನು ಕಳುಹಿಸುವ ಕಷ್ಟ ಇರುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT