ಡಾ.ದೇವಿಪ್ರಸಾದ್ ಶೆಟ್ಟಿ 
ವಾಣಿಜ್ಯ

ನಾರಾಯಣ ಹೃದಯಾಲಯದಿಂದ ಸಾರ್ವಜನಿಕ ಷೇರು ವಿತರಣೆ

ರೋಗ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಾರಾಯಣ ಹೃದಯಾಲಯ ಇದೀಗ ಷೇರು ಕ್ಷೇತ್ರಕ್ಕೆ ಪ್ರವೇಶಿಸಿದ್ದು,..

ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಾರಾಯಣ ಹೃದಯಾಲಯ ಇದೀಗ ಷೇರು ಕ್ಷೇತ್ರಕ್ಕೆ ಪ್ರವೇಶಿಸಿದ್ದು, ಡಿಸೆಂಬರ್ 17ರಿಂದ ಸಾರ್ವಜನಿಕ ಷೇರು ವಿತರಣೆಗೆ ಚಾಲನೆ ನೀಡಲಿದೆ.

ಈ ಸಂಬಂಧ ವಿವರಣಾ ಪತ್ರಿಕೆಯ ಮೂಲಕ ಸಾರ್ವಜನಿಕ ಷೇರು ವಿತರಣೆಯನ್ನು ಆರಂಬಿಸಲು ಡಿಸೆಂಬರ್ 8ರಂದು ನೋಂದಣಿ ಮಾಡಿದ್ದು, ತಲಾ ರು. 10 ಮುಖಬೆಲೆಯ 24,523,297 ಈಕ್ವಿಟಿ ಷೇರುಗಳನ್ನು ಪ್ರತಿ ಈಕ್ವಿಟಿ ಷೇರಿಗೆ ರು. 245 ರಿಂದ ರು.250ರ ದರಪಟ್ಟಿಯಲ್ಲಿ ವಿತರಿಸಲಿದೆ ಎಂದು ನಾರಾಯಣ ಹೃದಯಾಲಯ ಮುಖ್ಯಸ್ಥ ಡಾ.ದೇವಿಪ್ರಸಾದ್ ಶೆಟ್ಟಿ ಅವರು ತಿಳಿಸಿದ್ದಾರೆ.

ಈ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೇವಿಪ್ರಸಾದ್ ಶೆಟ್ಟಿ, ಇದರಲ್ಲಿ ಷೇರು ಪ್ರೀಮಿಯಂ ಸೇರಿದ್ದು, ಒಟ್ಟು 6,287,978 ಈಕ್ವಿಟಿ ಷೇರುಗಳನ್ನು ಅಶೋಕಾ ಇನ್‍ವೆಸ್ಟ್‍ಮೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಮೂಲಕ; 1,886,455 ಈಕ್ವಿಟಿ ಷೇರುಗಳನ್ನು ಅಂಬಾದೇವಿ ಮಾರಿಷಸ್ ಹೋಲ್ಡಿಂಗ್ ಕಂಪೆನಿ ಮೂಲಕ; 12,261,648 ಈಕ್ವಿಟಿ ಷೇರುಗಳನ್ನು ಜೆಪಿ ಮಾರ್ಗನ್ ಮಾರಿಷಸ್ ಹೋಲ್ಡಿಂಗ್ v1ಲಿಮಿಟೆಡ್ ಮೂಲಕ (ದಿ ಇನ್‍ವೆಸ್ಟರ್ ಸೆಲ್ಲಿಂಗ್ ಷೇರ್‍ಹೋಲ್ಡರ್ಸ್) ಮೂಲಕ; 2,043,608 ಈಕ್ವಿಟಿ ಷೇರುಗಳನ್ನು ಸಂಗ್ರಹಿಸಲಾಗುವುಗು ಎಂದು ತಿಳಿಸಿದರು.

ಕನಿಷ್ಠ ಬಿಡ್ ಲಾಟ್ 60 ಈಕ್ವಿಟಿ ಷೇರುಗಳಾಗಿದ್ದು, ಆ ಬಳಿಕ 60ರ ಗುಣಕದಲ್ಲಿ ಖರೀದಿ ಮಾಡಬಹುದು. ಕಂಪೆನಿ, ಸೆಲ್ಲಿಂಗ್ ಶೇರ್‍ಹೋಲ್ಡರ್‍ಸ್‍ಗಳು ಬಿಆರ್‍ಎಲ್‍ಎಂ ಜೊತೆಗೆ ಚರ್ಚಿಸಿ, ಭಾಗವಹಿಸುವ ಆ್ಯಂಕರ್ ಹೂಡಿಕೆದಾರನ್ನು ನಿರ್ಧರಿಸಬಹುದು.

ಆ್ಯಂಕರ್ ಹೂಡಿಕೆದಾರರಲ್ಲಿ ಆ್ಯಂಕರ್ ಹೂಡಿಕೆ ಬಿಡ್ಡಿಂಗ್ ದಿನವನ್ನು ಹೂಡಿಕೆ ದಿನ ಅಥವಾ ಅದರ ಒಂದು ದಿನ ಮೊದಲು ಮಾಡಬಹುದು. ಬಿಡ್ಡಿಂಗ್ ಡಿಸೆಂಗಬರ್ 21,2015ರಂದು ಅಂತ್ಯವಾಗಲಿದೆ. ಈಕ್ವಿಟಿ ಷೇರುಗಳುನ್ನು ಬಿಎಸ್‍ಇ ಲಿಮಿಟೆಡ್ ಮತ್ತು ರಾಷ್ಟ್ರೀಯ ಷೇರು ವಿತರಣಾ ಲಿಮಿಟೆಡ್ (ಎನ್‍ಎಇ) ಅಲ್ಲಿ ನೋಂದಣಿ ಮಾಡಲಾಗಿದೆ.

ಈ ಷೇರು ಆಹ್ವಾನವನ್ನು ಸೆಕ್ಯೂರಿಟೀಸ್ ಅಂಡ್ ಎಕ್ಸ್‍ಚೇಂಜ್ ಬೋರ್ಡ್ ಆಫ್ ಇಂಡಿಯಾದ ನಿಯಮ 26(1)ರ ಅನ್ಯವ ಮಾಡಲಾಗುತ್ತಿದೆ. ಬುಕ್ ಬಿಲ್ಡಿಂಗ್ ಪ್ರಾಸೆಸ್ ಮೂಲಕ ಮಾಡಲಿದ್ದು, ಈ ಪೈಕಿ ಶೇ. 50ರಷ್ಟು ಷೇರುಗಳನ್ನು ಅರ್ಹ ಸಾಂಸ್ಥಿಕ ಖರೀದಿದಾರಿಗೆ ಹಂಚಿಕೆ ಮಾಡಲಾಗುತ್ತದೆ. ಕಂಪನಿ ಅಥವಾ ಸೆಲ್ಲಿಂಗ್ ಶೇರ್‍ಹೋಲ್ಡರ್ಸ್ ಶೇ 60ರಷ್ಟು ಕ್ಯೂಐಬಿ ಭಾಗವನ್ನು ಆ್ಯಂಕರ್ ಹೂಡಿಕೆದಾರರನ್ನು ತಮ್ಮ ವಿವೇಚನಾ ಅನುಸಾರ ನಿಗದಿಪಡಿಸಬಹುದಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT