ವಾಣಿಜ್ಯ

ವಿದೇಶಿ ವಿನಿಮಯ ನಿಧಿ ಭಾರಿ ಏರಿಕೆ

ದೇಶಧ ವಿದೇಶಿ ವಿನಿಮಯ ನಿಧಿ ಪ್ರಮಾಣ ಜ.30ಕ್ಕೆ ಕೊನೆಗೊಂಡ ವಾರದಿಂದ ಈವರೆಗೆ 327.88 ಶತಕೋಟಿ...

ಮುಂಬೈ: ದೇಶದ ವಿದೇಶಿ ವಿನಿಮಯ ನಿಧಿ ಪ್ರಮಾಣ ಜ.30ಕ್ಕೆ ಕೊನೆಗೊಂಡ ವಾರದಿಂದ ಈವರೆಗೆ 327.88 ಶತಕೋಟಿ ಡಾಲರ್ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಈ ವಾರ ವಿದೇಶಿ ವಿನಿಮಯ ನಿಧಿಯು 5.84 ಬಿಲಿಯನ್‌ನಷ್ಟು ಏರಿಕೆ ಕಂಡಿತ್ತು.

ಇದಕ್ಕೂ ಮೊದಲ ವಾರದಲ್ಲಿ ವಿದೇಶಿ ವಿನಿಮಯ ನಿಧಿ 97.9 ದಶಲಕ್ಷ ಡಾಲರ್‌ನಷ್ಟು ಇಳಿಕೆ ಕಂಡಿತ್ತು. ಇದರಿಂದ ವಿದೇಶಿ ವಿನಿಮಯ ನಿಧಿ 322.037 ಶತಕೋಟಿ ಡಾಲರ್‌ಗೆ ಕುಸಿದಿತ್ತು. ಜನವರಿ ತಿಂಗಳ ಎರಡನೇ ವಾರದಲ್ಲಿ ವಿದೇಶಿ ವಿನಿಮಯ ನಿಧಿ 322.13 ಶತಕೋಟಿ ಡಾಲರ್ ತಲುಪುವ ಮೂಲಕ  ದಿಢೀರ್ ಏರಿಕೆ ದಾಖಲಿಸಿತ್ತು. ಆದರೆ, ದೇಶದ ಚಿನ್ನದ ನಿಧಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದು 19.377 ಶತಕೋಟಿ ಡಾಲರ್‌ನಷ್ಟೇ ಇದೆ.

ಜ.23ರಿಂದ
ಒಟ್ಟು ವಿದೇಶಿ ವಿನಿಮಯ 322.037 ದಶಲಕ್ಷ ಡಾಲರ್
ವಿದೇಶಿ ಕರೆನ್ಸಿ ಆಶ್ತಿ 297.510 ದಶಲಕ್ಷ ಡಾಲರ್
ಚಿನ್ನ 19,377 ದಶಲಕ್ಷ ಡಾಲರ್
ಎಸ್‌ಡಿಆರ್‌ಗಳು 4,047 ದಶಲಕ್ಷ ಡಾಲರ್
ಐಎಂಎಫ್‌ನಲ್ಲಿ ನಿಧಿ ಪ್ರಮಾಣ 1,101 ದಶಲಕ್ಷ ಡಾಲರ್

2011ರಲ್ಲೂ...
2011ರ ಜು.1ರಂದು ಅಂತ್ಯಗೊಂಡ ವಾರದಲ್ಲಿ ವಿದೇಶಿ ವಿನಿಮಯ ನಿಧಿ 6.70 ಬಿಲಿಯನ್ ಡಾಲರ್‌ನಷ್ಟು ಏರಿಕೆ ಕಂಡಿತ್ತು. ಅದು ಇತ್ತೀಚಿನ ದಾಖಲೆ.

ಯಾಕೆ ಬೇಕು?

ಅಂತಾರಾಷ್ಟ್ರೀಯ ಪಾವತಿಗಾಗಿ, ವಾಣಿಜ್ಯ ಸಾಲಗಳು, ಆಮದು, ಅಂತಾರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಲು.

ಕಾರಣಗಳೇನು?

ವಿದೇಶಿ ವಿನಿಮಯ ನಿಧಿಯಲ್ಲಿನ ಹೆಚ್ಚಳಕ್ಕೆ ಅನೇಕ ವಿಚಾರಗಳು ಪಾತ್ರವಹಿಸುತ್ತವೆ. ವಿದೇಶಿ ಕರೆನ್ಸಿ ಅದರಲ್ಲೂ ಮುಖ್ಯವಾಗಿ ಡಾಲರ್‌ನ ಮೌಲ್ಯ ಕುಸಿತವೂ ಒಂದು ಕಾರಣ. ಈ ನಡುವೆ, ಕಳೆದ ತಿಂಗಳಾಂತ್ಯದಲ್ಲಿ ದೇಶದ ಈಕ್ವಿಟಿ ಮತ್ತು ಸಾಲದ ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆಯಾಗಿದೆ. ಕಳೆದ 35 ತಿಂಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹೂಡಿಕೆಯಾಗುತ್ತಿರುವುದು ಇದೇ ಮೊದಲು. ಆದರೆ, ಫಸ್ಟ್‌ರ್ಯಾಂಡ್ ಬ್ಯಾಂಕ್‌ನ ಖಜಾಂಚಿ ಹರಿಹರ್ ಕೃಷ್ಣಮೂರ್ತಿ ಅವರ ಪ್ರಕಾರ, ರುಪಾಯಿ ಮೌಲ್ಯ ಏರಿಕೆಯಾಗುವುದನ್ನು ತಡೆಯಲು ಆರ್‌ಬಿಐ ಒಂದುಷ್ಟು ಡಾಲರ್‌ಗಳನ್ನು ಖರೀದಿಸಿದ್ದೇ ಈ ಬೆಳವಣಿಗೆಗೆ ಮುಖ್ಯ ಕಾರಣ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT