ತೆರಿಗೆ ಪಾವತಿ (ಸಂಗ್ರಹ ಚಿತ್ರ) 
ವಾಣಿಜ್ಯ

ತೆರಿಗೆ ಹಣ ಪಾವತಿ ವಿಳಂಬ ಸಾಧ್ಯತೆ

ಈ ಬಾರಿ ನೀವು ಕಾಯುತ್ತಿರುವ ಆದಾಯ ತೆರಿಗೆ ಮರುಪಾವತಿ ತಡವಾಗುವ ಸಾಧ್ಯತೆ ಇದೆ...

ನವದೆಹಲಿ: ಈ ಬಾರಿ ನೀವು ಕಾಯುತ್ತಿರುವ ಆದಾಯ ತೆರಿಗೆ ಮರುಪಾವತಿ ತಡವಾಗುವ ಸಾಧ್ಯತೆ ಇದೆ. ಆಯವ್ಯಯದಲ್ಲಿ ಆದಾಯ ಮಿತಿಯನ್ನು ತಲುಪಬೇಕಾಗಿರುವ ಹಿನ್ನೆಲೆಯಲ್ಲಿ ಈ ಮರುಪಾವತಿ ವಿಳಂಬವಾಗುವ ನಿರೀಕ್ಷೆ ಇದೆ.

ಮುಂದಿನ ವಿತ್ತೀಯ ವರ್ಷದಲ್ಲಿ ಇದು ಪಾವತಿಯಾಗಬಹುದು. ಸರ್ಕಾರದ ಮೂಲಗಳ ಪ್ರಕಾರ ಮುಂದಿನ ತ್ರೈಮಾಸಿಕ  ಅವಧಿಯಲ್ಲಿ ಎಂದರೆ ಜೂನ್ 2015ರ ಅವಧಿಯಲ್ಲಿ ಪಾವತಿ ಆಗುವ ಸಾಧ್ಯತೆ ಇದೆ. ನಿರೀಕ್ಷಿತ ಆದಾಯದ ಮೇಲೆ ಕಾರ್ಪೋರೇಟ್ ಕಂಪನಿಗಳು ಈಗಾಗಲೇ ಹೆಚ್ಚುವರಿ ತೆರಿಗೆಯನ್ನು ಪಾವತಿಸಿವೆ. ವಿತ್ತೀಯ ವರ್ಷದ  ವೇಳೆಗೆ ಆ ಕಂಪನಿಗಳ ಖಚಿತ ಆದಾಯ ಘೋಷಣೆ ಆಗಲಿದೆ. ಇದರಿಂದಾಗಿ ತೆರಿಗೆ ಪಾವತಿ ಕುರಿತಂತೆ ಲೆಕ್ಕಾಚಾರಕ್ಕೆ ಕೊಂಚ ಸಮಯಾವಕಾಶ ಬೇಕಾಗುತ್ತದೆ.

ನಿರೀಕ್ಷಿತ ಆಯವ್ಯಯದ ಗುರಿ ಮತ್ತು ನೈಜ ಸಂಗ್ರಹದಲ್ಲಿ ಸಾಕಷ್ಟು ಅಂತರ ಇದೆ. ಅದೇ ರೀತಿ ಆರ್ಥಿಕ ಪ್ರಗತಿ ಮಂದಗತಿಯಲ್ಲಿ ಸಾಗಿರುವ ಕಾರಣದಿಂದ ಆದಾಯ ಇಲಾಖೆ ಅಧಿಕಾರಿಗಳು, ಈ ವಿತ್ತೀಯ ವರ್ಷದ ತೆರಿಗೆ ಪಾವತಿ ಯನ್ನು ಕೊಂಚ ವಿಳಂಬ ಮಾಡಿ ಪಾವತಿಸಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೇರ ತೆರಿಗೆ ಆದಾಯದ ಮೂಲಗಳಾದ, ಕಾರ್ಪೊರೇಟ್ ಆದಾಯ ತೆರಿಗೆ, ವೈಯಕ್ತಿಕ ಆದಾಯ ತೆರಿಗೆ ಮತ್ತು ಸಂಪತ್ತಿನ ತೆರಿಗೆ ಮೂಲಕ ಸರ್ಕಾರ ಕಳೆದ ವರ್ಷ ರು 6.36 ಲಕ್ಷ ಕೋಟಿ ಸಂಗ್ರಹಿಸಿತ್ತು. ಈ ಬಾರಿ ಇದರ ಮೊತ್ತ ಶೇ. 15ರಷ್ಟು ವೃದ್ಧಿಯಾಗಬೇಕು ಎಂದು ಆಯವ್ಯಯದಲ್ಲಿ ನಿರೀಕ್ಷಿಸಲಾಗಿದ್ದು, ಅದರ ಪ್ರಕಾರ ರು.7.36 ಲಕ್ಷ ಕೋಟಿ ಮೊತ್ತದ ಗುರಿ ತಲುಪಬೇಕಾಗಿದೆ.

ಜನವರಿ ಅಂತ್ಯದವರೆಗೆ ಸರ್ಕಾರ ಶೇ. 70ರಷ್ಟು ಮೊತ್ತವನ್ನು ಅಂದರೆ, ರು5.78715 ಕೋಟಿಯನ್ನಷ್ಟೇ ನೇರತೆರಿಗೆಯಿಂದ ಸಂಗ್ರಹಿಸಲು ಸಾಧ್ಯವಾಗಿದೆ. ಇದೇ ಕಾರಣದಿಂದ ಸರ್ಕಾರ ವೆಚ್ಚಗಳಿಗಾಗಿ ನಿಧಿಯನ್ನು ಹೊಂದಿಸಬೇಕಾಗುತ್ತದೆ. ಇದು ಸಹ ತೆರಿಗೆ ಮರುಪಾವತಿ ವಿಳಂಬಕ್ಕೆ ಕಾರಣವಾಗಲಿದೆ. ಭಾರತದಲ್ಲಿ ಇರುವ ತೆರಿಗೆ ಪಾವತಿದಾರರ ಸಂಖ್ಯೆ 34 ಲಕ್ಷ ಇದೆ. ಕೇಂದ್ರ ನಿವ್ವಳ ತೆರಿಗೆ ವರಮಾನ ಪೂರ್ಣ ವರ್ಷದ ಪ್ರಗತಿ ಶೇ.17.7 ನಿರೀಕ್ಷಿಸಲಾಗಿದ್ದು, ಅದರಲ್ಲಿ ಡಿಸೆಂಬರ್ 2014ರವರೆಗೆ ಶೇ.7 ಪ್ರಗತಿ ಸಾಧ್ಯವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT