ಭಾರತೀಯ ಅಂಚೆ 
ವಾಣಿಜ್ಯ

ಡೆಲಿವರಿ ಮಾಹಿತಿಗೆ ಅಂಚೆ ಇಲಾಖೆ ಎಸ್ಸೆಮ್ಮೆಸ್

ಇನ್ನು ಮುಂದೆ ನೀವು ಅಂಚೆ ಮೂಲಕ ಯಾವುದಾದರೂ ಪಾರ್ಸೆಲ್, ಮೇಲ್, ಮನಿ ಆರ್ಡರ್ ಕಳುಹಿಸಿದರೆ ಅವುಗಳ ಸ್ಥಿತಿಗತಿ ಬಗ್ಗೆ ನಿಮಗೆ ಎಸ್ಸೆಮ್ಮೆಸ್...

ನವದೆಹಲಿ: ಇನ್ನು ಮುಂದೆ ನೀವು ಅಂಚೆ ಮೂಲಕ ಯಾವುದಾದರೂ ಪಾರ್ಸೆಲ್, ಮೇಲ್, ಮನಿ ಆರ್ಡರ್ ಕಳುಹಿಸಿದರೆ ಅವುಗಳ ಸ್ಥಿತಿಗತಿ ಬಗ್ಗೆ ನಿಮಗೆ ಎಸ್ಸೆಮ್ಮೆಸ್ ಸಂದೇಶ ಬರುತ್ತಿರುತ್ತವೆ. ಸೆಪ್ಟೆಂಬರ್‍ನಿಂದ ಇಂತದೊಂದು ಸೌಲಭ್ಯ ಕಲ್ಪಿಸಲು ಇಲಾಖೆ ನಿರ್ಧರಿಸಿದೆ. ಡೆಲಿವರಿಗಳ ಸ್ಥಿತಿಗತಿ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡುವುದು ಇಲಾಖೆ ಉದ್ದೇಶ. ಇದೇ ವೇಳೆ, ಅಕ್ಟೋಬರ್‍ನಿಂದ ಜಿಪಿಎಸ್ ಆಧರಿತ ಸಾಧನದ ಮೂಲಕ ಪೋಸ್ಟ್ ಮ್ಯಾನ್  ಅನ್ನು ಟ್ರ್ಯಾಕ್ ಮಾಡುವ ಕೆಲಸವನ್ನೂ ಇಲಾಖೆ ಮಾಡಲಿದೆ. ಪಾರ್ಸೆಲ್ ಗಳನ್ನು ಡೆಲಿವರಿ ಮಾಡಲು ಹೋದ ಅಂಚೆಯಣ್ಣ ಯಾವ ಸ್ಥಳದಲ್ಲಿದ್ದಾನೆ ಎಂಬುದನ್ನು ಕಂಡುಹಿಡಿಯಲು ದೆಹಲಿಯಲ್ಲಿ ಈ ವ್ಯವಸ್ಥೆ ಪ್ರಾಯೋಗಿಕವಾಗಿ ಜಾರಿಯಾಗಲಿದೆ. ಇದಲ್ಲದೆ, ಪ್ರಸಕ್ತ ವರ್ಷ ದೇಶಾದ್ಯಂತ ಸಾವಿರ ಎಟಿಎಂಗಳನ್ನು ಸ್ಥಾಪಿಸುವ ಉದ್ದೇಶವನ್ನೂ ಇಲಾಖೆ ಹೊಂದಿದೆ. ಅಂಚೆ ಬ್ಯಾಂಕ್ ವಹಿವಾಟು ಆರಂಭಿಸಲು ನೆರವಾಗುವಂತೆ ಆರ್‍ಬಿಐ ಸೆಪ್ಟೆಂಬರ್‍ನೊಳಗೆ ಇಲಾಖೆಗೆ ಪರವಾನಗಿ ನೀಡುವ ನಿರೀಕ್ಷೆಯಿದೆ ಎಂದುಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT