ಸೇವಾ ತೆರಿಗೆ 
ವಾಣಿಜ್ಯ

ಜೂನ್ 1ರಿಂದ ಸೇವಾ ತೆರಿಗೆ ಏರಿಕೆ

ಬಜೆಟ್ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಘೋಷಣೆ ಮಾಡಿದ್ದ ಸೇವಾ ತೆರಿಗೆ ಹೆಚ್ಚಳ ಇದೇ ಜೂನ್ 1ರಿಂದ ದೇಶಾದ್ಯಂತ ಜಾರಿಯಾಗಲಿದೆ.

ನವದೆಹಲಿ: ಬಜೆಟ್ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಘೋಷಣೆ ಮಾಡಿದ್ದ ಸೇವಾ ತೆರಿಗೆ ಹೆಚ್ಚಳ ಇದೇ ಜೂನ್ 1ರಿಂದ ದೇಶಾದ್ಯಂತ ಜಾರಿಯಾಗಲಿದೆ.

ನೂತನ ಸೇವಾ ತೆರಿಗೆ ಆನ್ವಯ ವಿಮೆ, ದೂರವಾಣಿ ಕರೆ, ಹೋಟೆಲ್ ಮತ್ತಿತರ ಸೇವೆಗಳ ದರದಲ್ಲಿ ಹೆಚ್ಚಳವಾಗುವುದು ಬಹುತೇಕ ಖಚಿತಗೊಂಡಿದೆ. ಶೇ. 12.36 ಇರುವ ಸೇವಾ ತೆರಿಗೆಯನ್ನು ಜೂನ್ 1ರಿಂದ ಶೇ.14ಕ್ಕೆ ಏರಿಕೆ ಮಾಡಲಾಗಿದೆ. ಇದರಿಂದ ಜಾಹೀರಾತು, ವಿಮಾನಯಾನ, ಗೃಹ ನಿರ್ಮಾಣ, ಕ್ರೆಡಿಟ್ ಕಾರ್ಡ್, ಇವೆಂಟ್ ಮ್ಯಾನೇಜ್​ವೆುಂಟ್ ಮತ್ತಿತರ ಕ್ಷೇತ್ರಗಳಲ್ಲಿನ ಸೇವಾ ಶುಲ್ಕ ಏರಿಕೆಯಾಗಲಿದೆ.

ಕಳೆದ ಫೆಬ್ರವರಿಯಲ್ಲಿ ಮಂಡನೆಯಾಗಿದ್ದ ಬಜೆಟ್​ನಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸೇವಾ ತೆರಿಗೆ ಹೆಚ್ಚಿಸುವ ನಿರ್ಧಾರ ಘೊಷಿಸಿದ್ದರು. ಮಧ್ಯಮವರ್ಗದ ಜನತೆಗೆ ಬಜೆಟ್​ನಲ್ಲಿ ಹಲವು ತೆರಿಗೆ ವಿನಾಯಿತಿ ಕಲ್ಪಿಸಲಾಗಿದ್ದರೂ ಆದಾಯದ ಪ್ರಮಾಣದಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿರುವುದರಿಂದ ಸೇವಾ ತೆರಿಗೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಇದರ ಜೊತೆಗೆ ಕ್ಲಬ್, ವಿವಿಧ ಸಂಸ್ಥೆಗಳ ಸದಸ್ಯತ್ವ ಮತ್ತು ವಕೀಲರ ಸೇವಾ ಶುಲ್ಕ ಕೂಡ ಹೆಚ್ಚಳವಾಗಿದೆ.

ಯಾವ ಕ್ಷೇತ್ರಗಳಲ್ಲಿ ಏರಿಕೆ
ಹೋಟೆಲ್ ಬಿಲ್ ದುಬಾರಿಯಾಗಲಿದ್ದು, ಇದು ಎಲ್ಲಾ ಸಣ್ಣ ಪುಟ್ಟ ಹೋಟೆಲ್, ದರ್ಶಿನಿ, ರೆಸ್ಟೋರೆಂಟ್, ಪಂಚತಾರಾ ಹೋಟೆಲ್ ಗಳಿಗೂ ಅನ್ವಯವಾಗಲಿದೆ. ತಿಂಗಳ ಮೊಬೈಲ್ ಬಿಲ್ ಗೆ ಹೊಸದಾಗಿ ಸೇವಾ ತೆರಿಗೆ ಸೇರ್ಪಡೆಯಾಗಲಿದ್ದು, ಶೇ 14ರಷ್ಟು ಬಿಲ್ ಮೊತ್ತ ಹೆಚ್ಚಳವಾಗಲಿದೆ. ಬಿಲ್ ಮೊತ್ತ ಹೆಚ್ಚದಂತೆ ತೆರಿಗೆ ಮೊತ್ತವೂ ಏರಿಕೆಯಾಗಲಿದೆ. ಇದಲ್ಲದೆ ದೇಶಿ, ವಿದೇಶಿ ವಿಮಾನಯಾನ ಟಿಕೆಟ್ ದರದ ಜೊತೆಗೆ ಶೇ 14ರಷ್ಟು ಸೇವಾ ತೆರಿಗೆ ಸೇರ್ಪಡೆಗೊಳ್ಳಲಿದ್ದು, ವಿಮಾನದಲ್ಲಿ ಪ್ರಯಾಣ ದುಬಾರಿಯಾಗಲಿದೆ.

ಡಿಟಿಎಚ್, ಬ್ಯೂಟಿ ಪಾರ್ಲರ್, ಟ್ಯಾಕ್ಸಿ, ಕ್ಯಾಬ್ ಸೇವೆ, ವಿಮೆ, ಕೊರಿಯರ್, ಲಾಂಡ್ರಿ ಎಲ್ಲವೂ ದುಬಾರಿಯಾಗಲಿದೆ.ಇನ್ನು ಮನರಂಜನೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲ ರಾಜ್ಯಗಳಲ್ಲಿ ಮನರಂಜನೆ ತೆರಿಗೆ ವಿನಾಯತಿ ಇರುವುದರಿಂದ ಸಿನಿಮಾ ಟಿಕೆಟ್ ದರದಲ್ಲಿ ವ್ಯತ್ಯಾಸ ಕಂಡು ಬರಲಿದೆ. ಸೇವಾ ತೆರಿಗೆ ಮಾತ್ರ ಎಲ್ಲೆಡೆ ಅನ್ವಯವಾಗಲಿದ್ದು, ಆನ್ ಲೈನ್ ಸಿನಿಮಾ ಟಿಕೆಟ್ ಬುಕ್ಕಿಂಗ್ ದರ ಏರಿಕೆಯಾಗುವ ನಿರೀಕ್ಷಿ ಇದೆ. ಇದರ ಜೊತೆಗೆ ಎಜುಕೇಷನ್ ಸೆಸ್ ಕೂಡಾ ದುಬಾರಿಯಾಗಲಿದ್ದು, ಶಿಕ್ಷಣ ಸಂಸ್ಥೆಗಳ ಶುಲ್ಕ ಹೆಚ್ಚಳವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ