ಸಾಂದರ್ಭಿಕ ಚಿತ್ರ 
ವಾಣಿಜ್ಯ

ನಗದು ಬಿಕ್ಕಟ್ಟು: ಹೊಸ 500 ರು. ನೋಟು ಮುದ್ರಣ ಮೂರುಪಟ್ಟು ಹೆಚ್ಚಳ

ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ದೇಶಾದ್ಯಂತ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು, ನೋಟುಗಳ ಕೊರತೆ...

ನಾಶಿಕ್: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ದೇಶಾದ್ಯಂತ ನಗದು ಬಿಕ್ಕಟ್ಟು ಸೃಷ್ಟಿಯಾಗಿದ್ದು, ನೋಟುಗಳ ಕೊರತೆ ತಗ್ಗಿಸಲು ನೋಟು ಮುದ್ರಣಾಲಯ ಹೊಸ 500 ರುಪಾಯಿ ನೋಟುಗಳ ಮುದ್ರಣವನ್ನು ಮೂರು ಪಟ್ಟು ಹೆಚ್ಚಿಸಿದೆ.
ನಾಶಿಕ್ ನೋಟ್ ಮುದ್ರಣಾಲಯ ಈವರೆಗೆ ದಿನಕ್ಕೆ 35 ಲಕ್ಷ ನೋಟುಗಳನ್ನು ಮುದ್ರಿಸುತ್ತಿತ್ತು. ಆದರೆ ಈಗ ಅದನ್ನು ದಿನಕ್ಕೆ 1 ಕೋಟಿ ನೋಟುಗಳಿಗೆ ಹೆಚ್ಚಿಸಲಾಗಿದೆ ಎಂದು ಮುದ್ರಣಾಲಯದ ಮೂಲಗಳು ತಿಳಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಒಟ್ಟಾರೆ ಕಳೆದ ಶುಕ್ರವಾರ 4 ಕೋಟಿ 30 ಲಕ್ಷ ನೋಟುಗಳನ್ನು ಆರ್‌ಬಿಐಗೆ ಕಳಿಸಲಾಗಿದ್ದು, 500 ರು. ನೋಟುಗಳಲ್ಲದೆ, 100, 50 ಮತ್ತು 20 ರು. ಮುಖಬೆಲೆಯ ನೋಟುಗಳನ್ನೂ ಮುದ್ರಿಸಲಾಗುತ್ತಿದೆ ಎಂದೂ ಮುದ್ರಣಾಲಯದ ಮೂಲಗಳು ತಿಳಿಸಿವೆ.
ನವೆಂಬರ್ 11 ರಂದು 500 ರು.ಗಳ ಕೇವಲ 50 ಲಕ್ಷ ನೋಟುಗಳನ್ನು ಮುದ್ರಿಸಲಾಗಿತ್ತು. ಕಳೆದ 43 ದಿನಗಳಲ್ಲಿ ಒಟ್ಟು 82 ಕೋಟಿ 80 ಲಕ್ಷ ವಿವಿಧ ಮೌಲ್ಯಗಳ ನೋಟುಗಳನ್ನು ಮುದ್ರಿಸಲಾಗಿದೆ. ಇವುಗಳಲ್ಲಿ 25 ಕೋಟಿ 500 ರು. ನೋಟುಗಳಾಗಿದ್ದು, ಕಳೆದ 3 ದಿನಗಳಲ್ಲಿ ಮುದ್ರಣಾಲಯ 8 ಕೋಟಿ 30 ಲಕ್ಷ ನೋಟುಗಳನ್ನು ರವಾನೆ ಮಾಡಿದೆ.
ದೇಶದಲ್ಲಿ ನೋಟು ಮುದ್ರಿಸುವ 4 ಮುದ್ರಣಾಲಯಗಳು ಮಾತ್ರ ಇವೆ. ಇವುಗಳಲ್ಲಿ ಆರ್‌ಬಿಐಗೆ ಸೇರಿದ ಎರಡು ಕರ್ನಾಟಕ ಮತ್ತು ಬಂಗಾಳದ ಸಲ್ಬೋನಿ ಎಂಬಲ್ಲಿವೆ. ಉಳಿದೆರಡು ನಾಶಿಕ್ ಮತ್ತು ದೇವಾಸ್ ಎಂಬಲ್ಲಿವೆ.
ಈ ಮುದ್ರಣಾಲಯಗಳ ಕೆಲಸಗಾರರು ಭಾನುವಾರ ರಜೆ ತೆಗೆದುಕೊಳ್ಳುತ್ತಿಲ್ಲ. ಊಟ ತಿಂಡಿಗೂ ಬಿಡುವು ಪಡೆಯದೆ ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT