ಸೆನ್ಸೆಕ್ಸ್ (ಸಂಗ್ರಹ ಚಿತ್ರ) 
ವಾಣಿಜ್ಯ

ಸಮಾಧಾನ ತಂದ ಚೇತರಿಕೆ

ಕಳೆದ ಒಂದು ವಾರದಿಂದ ಸತತ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಅಚ್ಚರಿಯಂತೆ ಏರಿಕೆ ಕಂಡಿದೆ...

ಮುಂಬೈ: ಕಳೆದ ಒಂದು ವಾರದಿಂದ ಸತತ ಕುಸಿತ ಕಂಡಿದ್ದ ಭಾರತೀಯ ಷೇರುಮಾರುಕಟ್ಟೆ ಶುಕ್ರವಾರ ಅಚ್ಚರಿಯಂತೆ ಏರಿಕೆ ಕಂಡಿದೆ.

ಯೂರೋಪಿಯನ್ ಒಕ್ಕೂಟ ಹೊಸ ಆರ್ಥಿಕ ಉತ್ತೇಜನ ಪ್ಯಾಕೇಜ್ ನೀಡಲಿದೆ ಎಂಬ ವರದಿಗಳು ಮತ್ತು ಕಚ್ಚಾ ತೈಲ ದರಗಳು ತುಸು ಏರಿಕೆಯಾಗಿರುವುದರಿಂದ ಹೂಡಿಕೆದಾರರು ವಹಿವಾಟಿನಲ್ಲಿ ತೊಡಗಿದ್ದರು. ಇದರಿಂದ ಸೆನ್ಸೆಕ್ಸ್ 473.45 ಅಂಕಗಳಷ್ಟು ಏರಿಕೆ ಕಂಡು 24, 435.66 ಅಂಶಗಳಿಗೆ ಏರಿಕೆಯಾಯಿತು. ಕಳೆದ ಅಕ್ಬೋಬರ್ 5ರ ನಂತರಇದು ಗರಿಷ್ಠ ಏಕದಿನ ಗಳಿಕೆಯಾಗಿದೆ.

24, 122.06 ಅಂಶಗಳೊಂದಿಗೆ ವಹಿವಾಟು ಆರಂಭಿಸಿದ ಸೂಚ್ಯಂಕ ದಿನಪೂರ್ತಿ ಏರುಮುಖದಲ್ಲಿತ್ತು. ಒಂದು ಹಂತದಲ್ಲಿ ದಿನದ ಗರಿಷ್ಠ 24, 472.88ರವರೆಗೂ ತಲುಪಿತ್ತು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಸಹ 145.65 ಅಂಕಗಳ ಏರಿಕೆಯೊಂದಿಗೆ 7, 422.45ಕ್ಕೆ ವಹಿವಾಟು ಮುಗಿಸಿತು. ವಿದೇಶಿ ವಿನಿಮಯ ಮಾರುಕಟ್ಟೆ ವಹಿವಾಟಿನಲ್ಲಿ ರುಪಾಯಿ ಮೌಲ್ಯ 36 ಪೈಸೆಯಷ್ಟು ಏರಿಕೆಯೊಂದಿಗೆ 67.66ಕ್ಕೆ ತಲುಪಿತು. ಅಂದರೆ 29 ತಿಂಗಳ ಕನಿಷ್ಠದಿಂದ ಮೇಲೇರಿತು. ಈ ಬೆಳವಣಿಗೆಗಳು ಹೂಡಿಕೆದಾರರಲ್ಲಿ ಭಾರಿ ವಿಶ್ವಾಸ ತುಂಬಿದವು.

ಹಾಗಿದ್ದರೂ ವಾರದ ಲೆಕ್ಕಾಚಾರದಲ್ಲಿ ಸೆನ್ಸೆಕ್ಸ್ 19.38 ಅಂಕ ನಷ್ಟದೊಂದಿಗೆ ಕೊನೆಗೊಂಡಿತು. ಇದು ಸತತ ಮೂರು ವಾರಗಳಿಂದ ನಷ್ಟದೊಂದಿಗೆ ವಾರಾಂತ್ಯ ಕಂಡಂತಾಯಿತು. ಯೂರೋಪಿಯನ್ ಸೆಂಟ್ರಲ್ ಬ್ಯಾಂಕ್ (ಇಸಿಬಿ) ಅಲ್ಲಿನ ಅರ್ಥಿಕತೆಗೆ ಉತ್ತೇಜನ ನೀಡಲು ಇನ್ನಷ್ಟು ಹಣವನ್ನು ಮಾರುಕಟ್ಟೆಗೆ ಪೂರೈಸಲಿದೆ ಎಂಬ ಸೂಚನೆಗಳು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲ ದರ 30 ಡಾಲರ್ ಗೆ ಏರಿಕೆ ಕಂಡಿದ್ದು, ಮಾರುಕಟ್ಟೆಯಲ್ಲಿ ಉತ್ಸಾಹ ತುಂಬಿತು. ಜಾಗತಿಕ ಮಾರುಕಟ್ಟೆ ಬ್ರೆಂಟ್  ಕಚ್ಚಾ ತೈಲ ದರ ಶೇ.5.2ರಷ್ಟು ಏರಿಕೆ ಕಂಡು 30.77 ಡಾಲರ್ ಗೆ ತಲುಪಿತು. ವಹಿವಾಟು ಏರಿಕೆಯೊಂದಿಗೇ ಆರಂಭಕಂಡಿತು. ಇಡೀ ದಿನ ಏರುಮುಖದಲ್ಲೇ ಇತ್ತು. ಕಳೆದ ಎರಡು ವಹಿವಾಟು ಅವಧಿಗಳಲ್ಲಿ ಸೂಚ್ಯಂಕ 517.63 ಅಂಕ ನಷ್ಟ ದಾಖಲಿಸಿತ್ತು.

ಇಂದಿನ ವಹಿವಾಟಿನಲ್ಲಿ ಮಿಡ್‌ ಕ್ಯಾಪ್‌ ಶೇರುಗಳು ಶೇ.1.9ರಷ್ಟು ಏರುವ ಮೂಲಕ ಅಚ್ಚರಿ ಉಂಟುಮಾಡಿದವು. ಇದನ್ನು ಮೀರಿಸುವಂತೆ ಸ್ಮಾಲ್‌ ಕ್ಯಾಪ್‌ ಶೇರುಗಳು ಶೇ.2.25 ರಷ್ಟು ಮುನ್ನಡೆ ಸಾಧಿಸಿದವು. ಗೇಲ್‌, ಹಿಂಡಾಲ್ಕೋ, ಮಾರುತಿ ಸುಜುಕಿ, ಟಾಟಾ ಸ್ಟೀಲ್‌, ಹೀರೋ ಮೋಟೋಕಾರ್ಪ್‌ ಮತ್ತು ಮಹೀಂದ್ರ ಶೇರುಗಳು ಶೇ.5ರಿಂದ 8ರಷ್ಟು ಏರಿ ಟಾಪ್‌ ಗೇನರ್‌ ಎನಿಸಿಕೊಂಡವು. ಆದರೆ ಭಾರ್ತಿ ಏರ್‌ಟೆಲ್‌ ಮತ್ತು ಐಡಿಯಾ ಸೆಲ್ಯುಲರ್‌ ಶೇರುಗಳು ಅನುಕ್ರಮವಾಗಿ ಶೇ.3.36 ಮತ್ತು 6.23ರಷ್ಟು ಕುಸಿದವು. ಈ ಹಿಂದೆ ಅಮೆರಿಕನ್‌ ಶೇರು ಮಾರುಕಟ್ಟೆ ಏರುಗತಿಯನ್ನು ಕಂಡಿದ್ದು ಅದನ್ನು ಅನುಸರಿಸಿ ಇಂದು ಏಷ್ಯನ್‌ ಶೇರು ಮಾರುಕಟ್ಟೆಗಳು ಕೂಡ ಅದೇ ಹಾದಿ ಹಿಡಿದು ಮುನ್ನಡೆ ಕಂಡವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

Afghan-Pak War: 'ಅಲ್ಲಾ ಕಾಪಾಡು' ಅಫ್ಘಾನ್ ಪ್ರತೀಕಾರದ ದಾಳಿ; ಆಗಸದೆತ್ತರಕ್ಕೆ ಚಿಮ್ಮಿದ ಪಾಕ್ ಸೈನಿಕರ ಶವಗಳು, ಗಡಿಯಿಂದ ಕಾಲ್ಕಿತ್ತ ಸೇನೆ, Video

ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಹಾಸನಾಂಬ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳ: ಎರಡೇ ದಿನಗಳಲ್ಲಿ ರೂ. 2.24 ಕೋಟಿ ಆದಾಯ, ಆರು ಸಿಬ್ಬಂದಿ ಅಮಾನತು!

SCROLL FOR NEXT