ಸಾಂದರ್ಭಿಕ ಚಿತ್ರ 
ವಾಣಿಜ್ಯ

ಮುಂದುವರೆದ ಚಿನ್ನಾಭರಣ ವ್ಯಾಪಾರಿಗಳ ಮುಷ್ಕರ; ಮದುಮಕ್ಕಳಿಗೆ ಪರದಾಟ

ಕೇಂದ್ರ ಬಜೆಟ್ ಬಿಸಿ ಅನಿರೀಕ್ಷಿತ ವಲಯಕ್ಕೆ ಮುಟ್ಟಿದೆ. ೨೦೧೬-೧೭ ರ ಕೇಂದ್ರ ಬಜೆಟ್ ನಲ್ಲಿ ಚಿನ್ನಾಭರಣಗಳಿಗೆ ೧% ಅಬಕಾರಿ ತೆರಿಗೆ ಪರಿಚಯಿಸಿರುವುದನ್ನು ವಿರೋಧಿಸಿ ಚಿನ್ನಾಭರಣ

ಬೆಂಗಳೂರು: ಕೇಂದ್ರ ಬಜೆಟ್ ಬಿಸಿ ಅನಿರೀಕ್ಷಿತ ವಲಯಕ್ಕೆ ಮುಟ್ಟಿದೆ. ೨೦೧೬-೧೭ ರ ಕೇಂದ್ರ ಬಜೆಟ್ ನಲ್ಲಿ ಚಿನ್ನಾಭರಣಗಳಿಗೆ ೧% ಅಬಕಾರಿ ತೆರಿಗೆ ಪರಿಚಯಿಸಿರುವುದನ್ನು ವಿರೋಧಿಸಿ ಚಿನ್ನಾಭರಣ ಉತ್ಪಾದಕರು ಮತ್ತು ವ್ಯಾಪಾರಿಗಳು ಮಾರ್ಚ್ ೨ ರಿಂದ ೭ ರವರೆಗೆ ಮುಷ್ಕರ ಹೂಡಿದ್ದರು. ಈಗ ಈ ಮುಷ್ಕರ ಅನಿರ್ಧಿಷ್ಟಾವಧಿಗೆ ಮುಂದೂಡಿದ್ದು, ಈ ತಿಂಗಳಲ್ಲಿ ಮದುವೆ ಸಮಾರಂಭಗಳನ್ನು ನಿಗದಿ ಮಾಡಿಕೊಂಡಿರುವ ಕುಟುಂಬಗಳಿಗೆ ಚಿನ್ನಾಭರಣಕ್ಕಾಗಿ ಪರದಾಡುವಂತಾಗಿದೆ.

ಹೊಸದಾಗಿ ಪರಿಚಯಿಸಲಾಗಿರುವ ೧% ಅಬಕಾರಿ ತೆರಿಗೆಯನ್ನು ವಾಪಸ್ ಪಡೆಯುವಂತೆ ವಿವಿಧ ಚಿನ್ನಾಭಾರಣ ವ್ಯಾಪಾರಿಗಳ ಸಂಘಟನೆಗಳು ವಿತ್ತ ಸಚಿವ ಅರುಣ್ ಜೇಟ್ಲಿ ಒಳಗೊಂಡಂತೆ ವಿವಿಧ ಸಚಿವರು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಈ ನಿಟ್ಟಿನಲ್ಲಿ ಸರ್ಕಾರದಿಂದ ಯಾವುದೇ ಪೂರಕ ಪ್ರತಿಕ್ರಿಯೆ ಬಂದಿಲ್ಲ.

ಈ ಮುಷ್ಕರ ಮದುವೆ ಸಮಾರಂಭಗಳನ್ನು ಈ ತಿಂಗಳಲ್ಲಿ ನಿಗದಿ ಮಾಡಿದ್ದ ಕುಟುಂಬಗಳಿಗೆ ತಟ್ಟಿದೆ. ಸರಿಯಾದ ಸಮಯಕ್ಕೆ ಚಿನ್ನಾಭರಣಗಳು ಒದಗದೆ ಹೋಗಿರುವುದು ಹಲವರಿಗೆ ಕಿರಿಕಿರಿ ಉಂಟುಮಾಡಿದೆ. ರಾಜಾಜಿನಗರ ಚಿನ್ನಾಭರಣ ಮಳಿಗೆಯಲ್ಲಿ 'ತಾಳಿ' ಮಾಡಿಸಲು ಕೊಟ್ಟು ಬಂದಿದ್ದ ರವಿತೇಜ್ ತಮ್ಮ ಕೋಪ ತೋಡಿಕೊಂಡಿದ್ದು ಹೀಗೆ "ನಾಳೆ ನನ್ನ ಮದುವೆ ಇದೆ. ಈಗ ನೋಡಿದರೆ ಆಭರಣ ಅಂಗಡಿ ಮುಚ್ಚಿದ್ದಾರೆ. ನನಗೆ ಕೊಟ್ಟಿರುವ ರಶೀದಿಯ ಮೇಲೆ ಅವರ ಸ್ಥಿರ ದೂರವಾಣಿ ಸಂಖ್ಯೆ ಮಾತ್ರ ಇದೆ. ಇಂದು ತಾಳಿ ಕೊಡುವುದಾಗಿ ಅವರು ಭರವಸೆ ನೀಡಿದ್ದರು. ಇವರು ಮುಷ್ಕರ ಮುಂದೂಡಿದರೆ ನಮಗೆ ಮದುವೆ ಮುಂದೂಡಲು ಸಾಧ್ಯವೇ?" ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಈ ಮಧ್ಯೆ ಅಬಕಾರಿ ತೆರಿಗೆ ವಾಪಸ್ ಪಡೆಯುವವರೆಗೆ ಶಾಂತಿಯುತ ಧರಣಿ ಮಾಡುವುದಾಗಿ ಚಿನ್ನಾಭರಣಗಳ ವ್ಯಾಪಾರಿಗಳ ಸಂಘ ಎಚ್ಚರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

SCROLL FOR NEXT