ಬಂಡಾರು ದತ್ತಾತ್ರೇಯ 
ವಾಣಿಜ್ಯ

2016-17ನೇ ಸಾಲಿನ ಕಾರ್ಮಿಕರ ಭವಿಷ್ಯನಿಧಿಗೆ ಶೇಕಡಾ 8.65 ಬಡ್ಡಿದರ ನಿಗದಿ

2016-17ನೇ ಸಾಲಿನ ನೌಕರರ ಭವಿಷ್ಯ ನಿಧಿಗೆ ಶೇಕಡಾ 8.65ರಷ್ಟು ಬಡ್ಡಿ ನಿಗದಿಪಡಿಸುವಂತೆ...

ನವದೆಹಲಿ: 2016-17ನೇ ಸಾಲಿನ ನೌಕರರ ಭವಿಷ್ಯ ನಿಧಿಗೆ ಶೇಕಡಾ 8.65ರಷ್ಟು ಬಡ್ಡಿ ನಿಗದಿಪಡಿಸುವಂತೆ ಹಣಕಾಸು ಸಚಿವಾಲಯ ಕಾರ್ಮಿಕ ಸಚಿವಾಲಯಕ್ಕೆ ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದೆ. ಸುಮಾರು 4 ಕೋಟಿ ನೌಕರರ ಭವಿಷ್ಯ ನಿಧಿ ಸಂಘದ ಸದಸ್ಯರಿಗೆ ಇದರಿಂದ ಅನುಕೂಲವಾಗಲಿದೆ. 
ಭವಿಷ್ಯನಿಧಿ ಸಂಘಟನೆ ಅಂದಾಜಿನ ಪ್ರಕಾರ, ಕಳೆದ ವರ್ಷದ ಭವಿಷ್ಯನಿಧಿಗೆ ಶೇಕಡಾ 8.65 ಬಡ್ಡಿದರ ನೀಡಿದ ನಂತರ ಹಣದ ಉಳಿತಾಯ ಕಾಣಲಿದೆ. ಭವಿಷ್ಯನಿಧಿ ಬಡ್ಡಿದರವನ್ನು ಇನ್ನಷ್ಟು ಕಡಿಮೆ ಮಾಡುವಂತೆ ಹಣಕಾಸು ಸಚಿವಾಲಯ ಕಾರ್ಮಿಕ ಸಚಿವಾಲಯಕ್ಕೆ ಹೇಳಿತ್ತು.
2016-17ನೇ ಸಾಲಿನ ಕಾರ್ಮಿಕರ ಭವಿಷ್ಯ ನಿಧಿಗೆ ಶೇಕಡಾ 8.65ರಷ್ಟು ಬಡ್ಡಿ ನೀಡಲಾಗುವುದು. ಕೇಂದ್ರ ಟ್ರಸ್ಟಿ ಮಂಡಳಿ ಶೇಕಡಾ 8.65ರಷ್ಟು ನೀಡಲು ನಿರ್ಧರಿಸಿದೆ. ನಮ್ಮ ಸಚಿವಾಲಯ ಹಣಕಾಸು ಸಚಿವಾಲಯ ಜೊತೆ ಮಾತುಕತೆ ನಡೆಸುತ್ತಿದೆ. ನಮ್ಮಲ್ಲಿ 158 ಕೋಟಿ ರೂಪಾಯಿ ಹೆಚ್ಚುವರಿ ಹಣವಿದೆ. ಅಗತ್ಯಬಿದ್ದರೆ ಹಣಕಾಸು ಸಚಿವಾಲಯ ಜೊತೆ ಮಾತುಕತೆ ನಡೆಸುತ್ತೇನೆ. ಹೆಚ್ಚುವರಿ ಉಳಿತಾಯವನ್ನು ನೌಕರರಿಗೆ ನೀಡಲಾಗುವುದು ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದ್ದಾರೆ.
ಕಳೆದ ವರ್ಷ ಹಣಕಾಸು ಇಲಾಖೆ ಕಾರ್ಮಿಕರ ಭವಿಷ್ಯ ನಿಧಿಗೆ ಶೇಕಡಾ 8.8 ಬಡ್ಡಿದರ ನೀಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT