ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗಾವರ್ 
ವಾಣಿಜ್ಯ

11.44 ಲಕ್ಷಕ್ಕೂ ಅಧಿಕ ಪ್ಯಾನ್ ಸಂಖ್ಯೆ ನಿಷ್ಕ್ರಿಯ: ಕಿರಿಯ ಸಚಿವ ಸಂತೋಷ್ ಕುಮಾರ್ ಗಂಗಾವರ್

ಒಬ್ಬ ವ್ಯಕ್ತಿಗೆ ಅಧಿಕ ಪ್ಯಾನ್ ಕಾರ್ಡುಗಳನ್ನು ನೀಡಿದ್ದು ಕಂಡುಬಂದ 11.44 ಲಕ್ಷಕ್ಕೂ ಅಧಿಕ ಪ್ಯಾನ್...

ನವದೆಹಲಿ: ಒಬ್ಬ ವ್ಯಕ್ತಿಗೆ ಅಧಿಕ ಪ್ಯಾನ್ ಸಂಖ್ಯೆಗಳನ್ನು  ನೀಡಿದ್ದು ಕಂಡುಬಂದ 11.44 ಲಕ್ಷಕ್ಕೂ ಅಧಿಕ ಪ್ಯಾನ್ ಕಾರ್ಡುಗಳಲ್ಲಿ ಕೆಲವನ್ನು ಅಳಿಸಲಾಗಿದ್ದು, ಇನ್ನು ಕೆಲವನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಕೇಂದ್ರ ಹಣಕಾಸು ಇಲಾಖೆ ರಾಜ್ಯ ಸಚಿವ ಸಂತೋಷ್ ಕುಮಾರ್ ಗಂಗಾವರ್ ಮಾಹಿತಿ ನೀಡಿದರು.
ನಿನ್ನೆ ರಾಜ್ಯಸಭೆಯಲ್ಲಿ ಲಿಖಿತ ಹೇಳಿಕೆ ನೀಡಿದ ಅವರು, ಜುಲೈ 27ಕ್ಕೆ ಇಂತಹ 11,44,211 ಪ್ಯಾಸ್ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಇಲ್ಲವೇ ಅಳಿಸಿಹಾಕಲಾಕಲಾಗಿದೆ ಎಂದರು. ಓರ್ವ ವ್ಯಕ್ತಿ ಹಲವು ಪ್ಯಾನ್ ಸಂಖ್ಯೆಯನ್ನು ಹೊಂದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ತೆರಿಗೆ ಪಾವತಿದಾರರಿಗೆ ಮತ್ತು ಒಬ್ಬ ವ್ಯಕ್ತಿ ಕೈಗೊಂಡ ಎಲ್ಲಾ ಹಣಕಾಸಿನ ವಹಿವಾಟುಗಳ ಅಧಿಕೃತತೆಗೆ ಪ್ಯಾನ್ ಸಂಖ್ಯೆ ಪ್ರಮುಖ ಗುರುತಾಗಿರುತ್ತದೆ.ಒಬ್ಬ ವ್ಯಕ್ತಿಗೆ ಒಂದು ಪ್ಯಾನ್ ಸಂಖ್ಯೆ ಕೇಂದ್ರ ಸರ್ಕಾರದ ಹಣಕಾಸು ಇಲಾಖೆಯ ಮಾರ್ಗಸೂಚಿ ಪ್ರಕಾರ ಇರಬೇಕು. ಆದರೆ ಜುಲೈ 27ಕ್ಕೆ 1,566 ಪ್ಯಾನ್ ಸಂಖ್ಯೆಗಳು ನಕಲಿ ಎಂದು ಕೂಡ ಗುರುತಿಸಲಾಗಿದೆ ಎಂದರು. ನಕಲಿ ಪ್ಯಾನ್ ಗಳು ಇಲ್ಲದೇ ಇರುವ ವ್ಯಕ್ತಿಗೆ ಹಾಗೂ ಇನ್ನು ಕೆಲವು ನಕಲಿ ಗುರುತಿನ ಮೂಲಕ ವ್ಯಕ್ತಿಗೆ ನೀಡಿರುವಂತಹದ್ದು ಎಂದು ವಿವರಿಸಿದರು.
ಹಳೆಯ ಅಧಿಕ ಮೌಲ್ಯದ ನೋಟುಗಳ ಅಮಾನ್ಯತೆ ನಂತರ ಅಘೋಷಿತ ಆದಾಯಗಳ ವಶಪಡಿಸಿಕೊಳ್ಳುವಿಕೆ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಗಂಗಾವರ್, ನವೆಂಬರ್ 2016ರಿಂದ ಮಾರ್ಚ್ 2017ರವರೆಗೆ ಆದಾಯ ತೆರಿಗೆ ಇಲಾಖೆ ಜನರ 900 ಗುಂಪುಗಳ ಮೇಲೆ ಶೋಧ ಕಾರ್ಯ ನಡೆಸಿದ್ದು 900 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಂಡಿದೆ. 7,961 ಕೋಟಿ ರೂಪಾಯಿ ಅಘೋಷಿತ ಆದಾಯ ಪತ್ತೆಯಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT