ಸಾಂದರ್ಭಿಕ ಚಿತ್ರ 
ವಾಣಿಜ್ಯ

ಆಧಾರ್ ಇಲ್ಲವೆಂದು ಸೌಲಭ್ಯ ನಿರಾಕರಣೆ ನಿಯಮ ಉಲ್ಲಂಘನೆಯಾಗುತ್ತದೆ: ಅಜಯ್ ಭೂಷಣ್ ಪಾಂಡೆ

ಆಧಾರ್ ಸಂಖ್ಯೆ ಇಲ್ಲದಿರುವವರಿಗೆ ಅಥವಾ ಅದರ ನಿಖರತೆಯಲ್ಲಿ ಏನಾದರೂ ಸಮಸ್ಯೆಯಿದ್ದರೆ ಅಂಥವರಿಗೆ...

ನವದೆಹಲಿ: ಆಧಾರ್ ಸಂಖ್ಯೆ ಇಲ್ಲದಿರುವವರಿಗೆ ಅಥವಾ ಅದರ ನಿಖರತೆಯಲ್ಲಿ ಏನಾದರೂ ಸಮಸ್ಯೆಯಿದ್ದರೆ ಅಂಥವರಿಗೆ ಸರ್ಕಾರದ ಸೌಲಭ್ಯಗಳನ್ನು ನೀಡಲು ನಿರಾಕರಿಸಿದರೆ ಅದು ನಿಯಮ ಉಲ್ಲಂಘನೆ ಎಂದು ಪರಿಗಣಿಸಿ ಶಿಕ್ಷೆ ನೀಡಬಹುದು ಎಂದು ಭಾರತೀಯ ವಿಶಿಷ್ಟ ಗುರುತು ಸಂಖ್ಯೆ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.
ದೇಶದ ಜನತೆಗೆ 12 ಅಂಕೆಗಳ ಗುರುತು ಚೀಟಿ ನೀಡುವ ಸಂಸ್ಥೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ,ಆಧಾರ್ ಸಂಖ್ಯೆ ಇಲ್ಲದವರು ನಕಲಿ ಫಲಾನುಭವಿಗಳೆಂದು ಕೆಲವು ಕಾರ್ಯಕರ್ತರು ಸಂಶಯ ವ್ಯಕ್ತಪಡಿಸುವುದು ತಪ್ಪು ಎಂದು ಹೇಳಿದರು.
ದುರುದ್ದೇಶಪೂರಕವಾಗಿ ಆಧಾರ್ ಸಂಖ್ಯೆಯನ್ನು ಗುರಿಯಾಗಿಟ್ಟುಕೊಂಡು ತಪ್ಪು ಮಾಹಿತಿಗಳನ್ನು ಹರಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇಂತಹ ತಪ್ಪು ಮಾಹಿತಿ ನೀಡುವುದು ದುರುದ್ದೇಶದಿಂದ. ಇದರಿಂದ ಆಧಾರ್ ಬಗ್ಗೆ ಜನತೆಗೆ ತಪ್ಪು ಮಾಹಿತಿ ಹೋಗುತ್ತದೆ ಎಂದು ಪಾಂಡೆ ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಧಾರ್ ಸಂಖ್ಯೆ ಜನರ ಸಬಲೀಕರಣಕ್ಕಾಗಿ ಇರುವುದೇ ಹೊರತು ಸರ್ಕಾರಿ ಸೌಲಭ್ಯಗಳಿಂದ ಜನರನ್ನು ಹೊರಗಿಡಲು ಅಥವಾ ನಿರಾಕರಿಸಲು ಅಲ್ಲ ಎಂದು ಅವರು ಆಧಾರ್ ನ್ನು ವ್ಯಾಖ್ಯಾನಿಸಿದ್ದಾರೆ.
ಇದುವರೆಗೆ ದೇಶದಲ್ಲಿ 116 ಕೋಟಿ ಜನರು 12 ಅಂಕೆಗಳ ಆಧಾರ್ ಸಂಖ್ಯೆಯನ್ನು ಹೊಂದಿದ್ದು ಶೇಕಡಾ 99ರಷ್ಟು ವಯಸ್ಕರು ಪಡೆದುಕೊಂಡಿದ್ದಾರೆ. ಆಧಾರ್ ಇಲ್ಲವೆಂದು ಒಬ್ಬನೇ ಒಬ್ಬ ವ್ಯಕ್ತಿಗೆ ಕೂಡ ಸೌಲಭ್ಯ ನಿರಾಕರಿಸುವಂತಿಲ್ಲ ಎಂದು ಆಧಾರ್ ಕಾಯ್ದೆಯೇ ಹೇಳುತ್ತದೆ ಎಂದು ಅವರು ಉಲ್ಲೇಖಿಸಿದರು.
ಒಬ್ಬ ವ್ಯಕ್ತಿ ಆಧಾರ್ ಸಂಖ್ಯೆಗೆ ಅರ್ಜಿ ಹಾಕಿದ ನಂತರ ಆತನಿಗೆ ಸಿಗುವವರೆಗೂ ಸೌಲಭ್ಯಗಳನ್ನು ನೀಡದೆ ಇರಲಾಗುವುದಿಲ್ಲ. ತಾಂತ್ರಿಕ ಕಾರಣ ಹಾಗೂ ಇತರ ಸಮಸ್ಯೆಗಳಿಂದ ತಮ್ಮ ನಿಖರತೆಯನ್ನು ತೋರಿಸಿಕೊಳ್ಳಲಾಗದಿದ್ದ ವ್ಯಕ್ತಿಗಳಿಗೆ ಆಧಾರ್ ಕಾಯ್ದೆ ಶಾಸನಬದ್ಧ ರಕ್ಷಣೆ ನೀಡುತ್ತದೆ. 
ವ್ಯಕ್ತಿಯ ಬೆರಳಿನ ಗುರುತಿನ ನಿಖರತೆಯನ್ನು ತಾಂತ್ರಿಕ ಸಮಸ್ಯೆ ಕಾರಣದಿಂದ ನೀಡಲು ಸಾಧ್ಯವಾಗದಿದ್ದರೆ ಆ ವ್ಯವಸ್ಥೆ ಸರಿಯಾಗುವವರೆಗೆ ಆಧಾರ್ ಕಾರ್ಡಿನ ಪ್ರತಿಯೊಂದನ್ನು ಸಲ್ಲಿಸಿ ಸರ್ಕಾರಿ ಸೌಲಭ್ಯವನ್ನು ಪಡೆಯುವ ಆಯ್ಕೆ ವ್ಯಕ್ತಿಗಿದೆ ಎಂದು ಪಾಂಡೆ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳು ನಾಡು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ TVK ಪಕ್ಷ ಸೇರಿದ ಸೆಂಗೊಟ್ಟೈಯನ್ ವಿಜಯ್

CM ಪಟ್ಟಕ್ಕಾಗಿ ಕಿತ್ತಾಟ: ಡಿಕೆಶಿಗೆ 'ಹೈಕಮಾಂಡ್' ಒಲವು ತೋರಿದ್ರೆ, ಸಿದ್ದರಾಮಯ್ಯರ ಮುಂದಿನ ಪ್ಲಾನ್ ಏನು?

ಶಂಕಿತ ದಾಳಿಕೋರ 'ನರಕ ದೇಶ' ಆಫ್ಘಾನಿಸ್ತಾನದಿಂದ ಬಂದವನು, ಇದು ಭಯೋತ್ಪಾದಕ ಕೃತ್ಯ: ನ್ಯಾಷನಲ್ ಗಾರ್ಡ್ ಮೇಲೆ ದಾಳಿಗೆ Donald Trump ತೀವ್ರ ಖಂಡನೆ

450 ಕೋಟಿ ರೂ. ಮೌಲ್ಯದ ಧರ್ಮೇಂದ್ರ ಆಸ್ತಿ ಯಾರ ಪಾಲಾಗುತ್ತೆ? ಕುತೂಹಲ ಕೆರಳಿಸಿದ ಹೇಮಾ ಮಾಲಿನಿ ಪೋಸ್ಟ್!

ಇದು ಜೈಲಲ್ಲ, ಮದ್ಯದ ಫ್ಯಾಕ್ಟರಿ: ಕೈದಿಗಳಿಂದ ಮದ್ಯ ತಯಾರಿಕೆ? ಏನಾಗುತ್ತಿದೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ?

SCROLL FOR NEXT