ಸಾಂದರ್ಭಿಕ ಚಿತ್ರ 
ವಾಣಿಜ್ಯ

ಠೇವಣಿಗಳ ಮೇಲಿನ ಪ್ರಶ್ನೆಗಳಿಗೆ ಉತ್ತರಿಸುವ ಗಡುವು ಫೆಬ್ರವರಿ 15 ಕ್ಕೆ ವಿಸ್ತರಿಸಿದ ಐಟಿ ಇಲಾಖೆ

ನೋಟುಗಳ ಅಮಾನ್ಯತೆ ನಂತರ ನಗದು ಠೇವಣಿ ಇರಿಸಿದ ಜನರಿಗೆ ಆನ್ ಲೈನ್ ಮೂಲಕ ಪ್ರತಿಕ್ರಿಯೆ...

ನವದೆಹಲಿ: ನೋಟುಗಳ ಅಮಾನ್ಯತೆ ನಂತರ ನಗದು ಠೇವಣಿ ಇರಿಸಿದ ಜನರಿಗೆ ಆನ್ ಲೈನ್ ಮೂಲಕ ಪ್ರತಿಕ್ರಿಯೆ, ಸಂದೇಹಗಳನ್ನು ನೀಡಲು ಅವಧಿಯನ್ನು ಫೆಬ್ರವರಿ 15ರವರೆಗೆ ಮುಂದೂಡಲಾಗಿದೆ ಎಂದು #Operation Clean Money ಎಂಬ ಆದಾಯ ತೆರಿಗೆ ಇಲಾಖೆಯ ಟ್ವಿಟ್ಟರ್ ನಲ್ಲಿ ತಿಳಿಸಲಾಗಿದೆ.
ಜನವರಿ 31ರಂದು ತೆರಿಗೆ ಇಲಾಖೆ ''Operation Clean Money'' ಎಂಬ ಪುಟವನ್ನು ಆರಂಭಿಸಿದ್ದು ಅದರಡಿ ನೋಟು ಅಮಾನ್ಯತೆ ನಂತರ  5 ಲಕ್ಷಕ್ಕಿಂತಲೂ ಹೆಚ್ಚು ಹಣ ಠೇವಣಿಯಿರಿಸಿದ 18 ಲಕ್ಷ ಸಂಶಯಾಸ್ಪದ ಜನರಿಗೆ ಎಸ್ಎಂಎಸ್ ಮತ್ತು ಇಮೇಲ್ ಮೂಲಕ ಉತ್ತರಿಸುವಂತೆ ತಿಳಿಸಲಾಗಿತ್ತು. ಇ-ಮೇಲ್ ಅಥವಾ ಎಸ್ಎಂಎಸ್ ಸಿಕ್ಕಿದ 10 ದಿನಗಳೊಳಗೆ ಐಟಿ ಇಲಾಖೆ ಪೋರ್ಟಲ್ ನಲ್ಲಿ ಉತ್ತರಿಸುವಂತೆ ಸೂಚಿಸಲಾಗಿತ್ತು. 
500 ಮತ್ತು 1000ದ ಹಳೆಯ ನೋಟುಗಳನ್ನು ನವೆಂಬರ್ 8ರಂದು ಚಲಾವಣೆ ರದ್ದುಗೊಳಿಸಿದ ನಂತರ ನೋಟುಗಳಿರುವವರು ಡಿಸೆಂಬರ್ 30ರೊಳಗೆ ಬ್ಯಾಂಕಿನಲ್ಲಿ ಠೇವಣಿಯಿಡುವಂತೆ ಕೇಂದ್ರ ಸರ್ಕಾರ ತಿಳಿಸಿತ್ತು. ಆ ನಂತರ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕಿನಲ್ಲಿ ಹಣ ಠೇವಣಿಯಾದ ಬಗ್ಗೆ ಇಲಾಖೆಗೆ ಮಾಹಿತಿ ಸಿಕ್ಕಿತ್ತು. 2 ಲಕ್ಷದಿಂದ 80 ಲಕ್ಷದವರೆಗೆ ಮತ್ತು 80 ಲಕ್ಷದಿಂದ ಹೆಚ್ಚು ಹಣವನ್ನು ಠೇವಣಿಯಿರಿಸಿದ್ದನ್ನು ಪ್ರತ್ಯೇಕಗೊಳಿಸಿತ್ತು. ಠೇವಣಿಯಿಟ್ಟ ಹಣ ಮತ್ತು ಠೇವಣಿದಾರರ ಪರಿಚಯವನ್ನು ಹೊಂದಿಕೆ ಮಾಡಿ ಹೊಂದಾಣಿಕೆಯಾಗದವರಿಗೆ ಆದಾಯ ತೆರಿಗೆ ಇಲಾಖೆ, ಯಾವ ಮೂಲದಿಂದ ಹಣ ಬಂದಿದೆ ಎಂದು ತೋರಿಸುವಂತೆ ಎಸ್ಎಂಎಸ್ ಮತ್ತು ಇ-ಮೇಲ್ ಕಳುಹಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

SCROLL FOR NEXT