ಸಂಗ್ರಹ ಚಿತ್ರ 
ವಾಣಿಜ್ಯ

ಕಪ್ಪು ಹಣ: ಭಾರತೀಯ ಮೂಲದ ಎರಡು ಸಂಸ್ಥೆಗಳ ಮಾಹಿತಿ ವಿನಿಮಯಕ್ಕೆ ಸ್ವಿಸ್ ಸರ್ಕಾರ ಸಮ್ಮತಿ

ಕಪ್ಪು ಕುಳಗಳಿಗೆ ಹಣವಿಡಲು ಸುರಕ್ಷಿತ ಜಾಗವೆಂದೇ ಹೇಳಲಾಗುವ ಸಿಡ್ಜರ್ ಲ್ಯಾಂಡ್ ಇದೀಗ ಭಾರತ ಮೂಲಕ ಎರಡು ಸಂಸ್ಥೆಗಳು ಹಾಗೂ ಮೂವರು ವ್ಯಕ್ತಿಗಳು ತನ್ನಲ್ಲಿರಿಸಿದ.....

ನವದೆಹಲಿ: ಕಪ್ಪು ಕುಳಗಳಿಗೆ ಹಣವಿಡಲು ಸುರಕ್ಷಿತ ಜಾಗವೆಂದೇ ಹೇಳಲಾಗುವ ಸಿಡ್ಜರ್ ಲ್ಯಾಂಡ್ ಇದೀಗ ಭಾರತ ಮೂಲಕ ಎರಡು ಸಂಸ್ಥೆಗಳು ಹಾಗೂ ಮೂವರು ವ್ಯಕ್ತಿಗಳು ತನ್ನಲ್ಲಿರಿಸಿದ ಹಣ ಹಾಗೂ ಸ್ವತ್ತಿನ ವಿವರವನ್ನು ಭಾರತ ಸರ್ಕಾರದೊಡನೆ ಹಂಚಿಕೊಲ್ಳಲು ಸಮ್ಮತಿಸಿದೆ.
ಸ್ವಿಸ್ ರಾಷ್ಟ್ರವು ಮಾಹಿತಿ ಹಂಚಿಕೆಗೆ ಒಪ್ಪಿರುವ ಒಂದು ಸಂಸ್ಥೆ ಇದಾಗಲೇ ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಸೆಬಿ "ಕಪ್ಪುಪಟ್ಟಿ"ಗೆ ಸೇರಿಸಿರುವ ಸಂಸ್ಥೆಯಾಗಿದ್ದು ಇದು ಬಹುಪಾಲು ಶೇರು ಮಾರುಕಟ್ಟೆಯ ನಿಯಮಾವಳಿಗಳ ಉಲ್ಲಂಘನೆ ಮಾಡಿದೆ ಎನ್ನಲಾಗಿದೆ,. ಇದೇ ವೇಳೆ ಇನ್ನೊಂದು ಸಂಸ್ಥೆ ತಮಿಳುನಾಡಿನ ಪ್ರಮುಖ ರಾಜಕೀಯ ಪಕ್ಷದೊಡನೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ.
ಸ್ವಿಸ್ ಸರ್ಕಾರದ ಪ್ರತ್ಯೇಕ ಗೆಝೆಟ್ ಅಧಿಸೂಚನೆಗಳ ಪ್ರಕಾರ, ದೇಶದ ಫೆಡರಲ್ ತೆರಿಗೆ ಇಲಾಖೆಯು ಜಿಯೋಡೆಸಿಕ್ ಲಿಮಿಟೆಡ್ ಹಾಗೂ ಆದಿ ಎಂಟರ್ಪ್ರೈಸಸ್ ಪ್ರೈ.ಲಿ. ಕುರಿತು ಮಾಹಿತಿ ಒದಗಿಸಿ 'ಆಡಳಿತಾತ್ಮಕ ಸಹಾಯ’" ಮಾಡುವುದಾಗಿ ಹೇಳಿದೆ.
ಇದೇ ಬಗೆಯಲ್ಲಿ ಜಿಯೋಡೆಸಿಕ್ ಲಿಮಿಟೆಡ್ ಗೆ ಸೇರಿದ ಮೂವರು ವ್ಯಕ್ತಿಗಳಾದ ಪಂಕಜ್ ಕುಮಾರ್ ಓಂಕಾರ್ ಶ್ರೀವಾಸ್ತವ, ಪ್ರಶಾಂತ್ ಶರದ್ ಮುಲೇಕರ್ ಹಾಗೂ ಕಿರಣ್ ಕುಲಕರ್ಣಿ ಅವರ ಕುರಿತು ಮಾಹಿತಿ ಒದಗಿಸಲು ಸಹ ಒಪ್ಪಿಗೆ ಸೂಚಿಸಿದೆ.
ಸ್ವಿಸ್ ಸರ್ಕಾರವು ಎರಡು ಕಂಪನಿಗಳು ಮತ್ತು ಮೂರು ವ್ಯಕ್ತಿಗಳ ಬಗ್ಗೆ ಭಾರತೀಯ ಅಧಿಕಾರಿಗಳು ಕೋರಿರುವ ಮಾಹಿತಿ ಮತ್ತು ನೆರವು ಸಂಬಂಧಿಸಿದ ನಿರ್ದಿಷ್ಟ ವಿವರಗಳನ್ನು ಬಹಿರಂಗಪಡಿಸದಿದ್ದರೂ, ಅಂತಹ 'ಆಡಳಿತಾತ್ಮಕ ಸಹಾಯ"ಹಣಕಾಸು ಮತ್ತು ತೆರಿಗೆ-ಸಂಬಂಧಿತ ಪುರಾವೆಗಳನ್ನು ಸಲ್ಲಿಸಿದೆ,  ಬ್ಯಾಂಕ್ ಖಾತೆ ವಿವರಗಳು ಮತ್ತು ಇತರ ಹಣಕಾಸು ಮಾಹಿತಿಗೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಲ್ಳಲಾಗಿದೆ.
ಭಾರತಕ್ಕೆ ಆಡಳಿತಾತ್ಮಕ ನೆರವು ನೀಡಲು ಸ್ವಿಜರ್ಲೆಂಡ್ ನ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ (ಎಫ್ಟಿಎ) ಸಮ್ಮತಿಸಿದ್ದು ಈ ಕುರಿತಂತೆ ಸಂಬಂಧಪಟ್ಟ ಸಂಸ್ಥೆ ಅಥವಾ ವ್ಯಕ್ತಿಗಳುಮೇಲ್ಮನವಿ ಸಲ್ಲಿಸುವುದಕ್ಕೆ ಸಹ ಅವಕಾಶವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

MUDA ಹಗರಣ: ಕೇಸ್‌ ಡೈರಿ ಸಲ್ಲಿಸುವಂತೆ ಲೋಕಾಯುಕ್ತ ಅಧಿಕಾರಿಗಳಿಗೆ ಕೋರ್ಟ್ ಸೂಚನೆ..!

ಜನೌಷಧಿ ಕೇಂದ್ರ ಮುಚ್ಚುವ ಆದೇಶ ರದ್ದು: ಸಾರ್ವಜನಿಕ ಹಿತಾಸಕ್ತಿಗಳಲ್ಲಿ ರಾಜಕೀಯ ಸರಿಯಲ್ಲ: ಸರ್ಕಾರಕ್ಕೆ ಹೈಕೋರ್ಟ್‌ ಕಿವಿಮಾತು

Video-'ಆಕೆ ನರಕಕ್ಕೆ ಹೋಗಲಿ, ನಿತೀಶ್ ಕುಮಾರ್ ಕ್ರಮ ಸರಿ ಇದೆ': ಮುಸ್ಲಿಂ ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂನ್ನು ಸಮರ್ಥಿಸಿಕೊಂಡ BJP ಸಚಿವ ಗಿರಿರಾಜ್ ಸಿಂಗ್

ಬೆಂಗಳೂರಿಗೆ 2ನೇ ವಿಮಾನ ನಿಲ್ದಾಣ ಮರೀಚಿಕೆ: ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಹೇಳಿದ್ದೇನು?

ಇದೇ ಮೊದಲು: UP YouTuber ಮನೆ ಮೇಲೆ ED ದಾಳಿ: ಲಂಬೋರ್ಗಿನಿ, BMW Z4 ಐಷಾರಾಮಿ ಕಾರುಗಳನ್ನು ನೋಡಿ ಅಧಿಕಾರಿಗಳು ದಂಗು!

SCROLL FOR NEXT