ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) 
ವಾಣಿಜ್ಯ

ಎಸ್ ಬಿಐಗೇ ದೋಖಾ: ಏಪ್ರಿಲ್-ಸೆಪ್ಟೆಂಬರ್ ನಲ್ಲಿ 5,555 ಕೋಟಿ ರೂ. ಮೌಲ್ಯದ 1,329 ವಂಚನೆ ಪ್ರಕರಣ!

5,555.48 ಕೋಟಿ ರೂ.ಮೊತ್ತದ ಬರೋಬ್ಬರಿ 1,329 ವಂಚನೆ ಪ್ರಕರಣಗಳು ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಬೆಳಕಿಗೆ ಬಂದಿದೆ ಎಂದು ದೇಶದ ಬೃಹತ್ ಸಾರ್ವಜನಿಕ ಬ್ಯಾಂಕ್......

ಇಂದೋರ್: 5,555.48 ಕೋಟಿ ರೂ.ಮೊತ್ತದ  ಬರೋಬ್ಬರಿ  1,329 ವಂಚನೆ ಪ್ರಕರಣಗಳು ಪ್ರಸಕ್ತ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲಿ ಬೆಳಕಿಗೆ ಬಂದಿದೆ ಎಂದು ದೇಶದ ಬೃಹತ್ ಸಾರ್ವಜನಿಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಹೇಳಿದೆ. ಆರ್ಟಿಐ ಮೂಲಕ ಕೇಳಳಾದ ಪ್ರಶ್ನೆಗೆ ಬ್ಯಾಂಕ್ ಈ ಉತ್ತರ ನೀಡಿದೆ.
ಆರ್ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಎಸ್ಬಿಐ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್) 723.06 ಕೋಟಿ ರೂ. ಮೊತ್ತದ 669 ಪ್ರಕರಣಗಳು ವರದಿಯಾಗಿದ್ದರೆ  ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್  4,832.42 ಕೋಟಿ ರೂ. ಮೌಲ್ಯದ 660 ಪ್ರಕರಣಗಳು ವರದಿಯಾಗಿದೆ ಎಂದು ವಿವರಿಸಿದೆ.
ಈ ಅಂಕಿಅಂಶಗಳ ಪ್ರಕಾರ ಮೊದಲ ಹಾಗೂ ಎರಡನೇ ತ್ರೈಮಾಸಿಕ ಅವಧಿಯಲ್ಲಿ ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚಿನ ವ್ಯತ್ಯಾಸವೇನೂ ಆಗಿಲ್ಲದಿರುವುದು ಕಂಡಿದೆ. ಎರಡೂ ಅವಧಿಯಲ್ಲಿ ಹೋಲಿಸಿದಾಗ ದ್ವಿತೀಯ ಅವಧಿಯಲ್ಲಿ ಮೊದಲಿಗಿಂತ ಕೇವಲ 9 ಪ್ರಕರಣಗಳಷ್ತೇ ಕಡಿಮೆಯಾಗಿದ್ದು ಕಾನೀಸುತ್ತದೆ.ಆದರೆ ಎರಡೂ ತ್ರೈಮಾಸಿಕಗಳಿಂದ ಒಟ್ಟಾರೆ  568.33 ಕೋಟಿ ರು. ವಂಚನೆ ನಡೆದಿದೆ.
ಬ್ಯಾಂಕಿಂಗ್ ವಂಚನೆಯ ಕಾರಣ ಬ್ಯಾಂಕ್ ಗೆ ಆದ ಹಣಕಾಸಿನ ನಷ್ಟವೆಷ್ಟು ಎಂದೂ ಗೌಡ ಪ್ರಶ್ನಿಸಿದ್ದು ಇದರ ಕುರಿತು ಪ್ರತಿಕ್ರಿಯೆ ನೀಡಿದ ಬ್ಯಾಂಕ್ "ತಾನಿನ್ನೂ ಆ ಮೊತ್ತವನ್ನು ಎಣಿಕೆ ಮಾಡಿಲ್ಲ" ಎಂದಿದೆ.
ನಿರ್ದಿಷ್ಟ ಅವಧಿಯಲ್ಲಿ ಬ್ಯಾಂಕಿಂಗ್ ವಂಚನೆಗಳ ಕಾರಣದಿಂದ ಬ್ಯಾಂಕಿನ ಗ್ರಾಹಕರು ಕಳೆದುಕೊಂಡ ಹಣದ ಬಗ್ಗೆ ಕೇ:ಳಲಾಗಿರುವ ಪ್ರಶ್ನೆಗೆ "ಎಸ್ಬಿಐ ಗ್ರಾಹಕರಿಗಾದ ಮೋಸ, ಅವರು ಕಳೆದುಕೊಂಡ ಹಣದ ಲೆಕ್ಕವನ್ನು ಬಹಿರಂಗಪಡಿಸುವುದು ಸಾಧ್ಯವಿಲ್ಲ. ಆರ್ಟಿಐ ಕಾಯಿದೆ, 2005 ರ ಸೆಕ್ಷನ್ 7 (9) ಅಡಿಯಲ್ಲಿ ಇದು ಬರುವುದಿಲ್ಲ" ಎಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT