ಬೆಂಗಳೂರಿನಲ್ಲಿ ವೋಲ್ವೋ ಪರ್ಸನಲ್ ಸರ್ವೀಸ್ ಕೇಂದ್ರ ಆರಂಭ 
ವಾಣಿಜ್ಯ

ಬೆಂಗಳೂರಿನಲ್ಲಿ ವೋಲ್ವೋ ಪರ್ಸನಲ್ ಸರ್ವೀಸ್ ಕೇಂದ್ರ ಆರಂಭ

ವಿಶ್ವದ ಖ್ಯಾತ ಕಾರು ತಯಾರಿಕಾ ಕಂಪನಿ ವೋಲ್ವೋ ಕಾರ್ ಇಂಡಿಯಾ ರಾಜ್ಯದ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ತನ್ನ ಅಧಿಕೃತ ಸೇವಾ ಸಂಸ್ಥೆ ಎಂದು ಮಾರ್ಷಲ್ ಮೋಟರ್ಸ್ ಗೆ ಮಾನ್ಯತೆ ನೀಡಿದೆ.

ಬೆಂಗಳೂರು: ವಿಶ್ವದ ಖ್ಯಾತ ಕಾರು ತಯಾರಿಕಾ ಕಂಪನಿ ವೋಲ್ವೋ ಕಾರ್ ಇಂಡಿಯಾ ರಾಜ್ಯದ ಗ್ರಾಹಕರಿಗೆ ವಿಶ್ವ ದರ್ಜೆಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ತನ್ನ ಅಧಿಕೃತ ಸೇವಾ ಸಂಸ್ಥೆ ಎಂದು ಮಾರ್ಷಲ್ ಮೋಟರ್ಸ್ ಗೆ ಮಾನ್ಯತೆ ನೀಡಿದೆ.

ಈ ಸಂಸ್ಥೆ ವೋಲ್ವೋ ಪರ್ಸನಲ್ ಸರ್ವೀಸ್ (ವಿಪಿಎಸ್) ಡೀಲರ್ ಆಗಿದೆ. ವಿಶ್ವದ ವಿವಿಧ ಮಾರುಕಟ್ಟೆಗಳಲ್ಲಿ ಮಾರಾಟವಾಗುವ ವೋಲ್ವೋ ಕಾರುಗಳಿಗೆ ಇಲ್ಲಿ ಸೇವೆ ಒದಗಿಸಲಿದೆ. ವಿಪಿಎಸ್ ಗ್ರಾಹಕರನ್ನು ರಕ್ಷಿಸುವ ಸಮಯದಲ್ಲಿ ಕನಿಷ್ಠ ಶೇ.50 ರಷ್ಟು ಉಳಿತಾಯ ಮಾಡಲಿದೆ. ಇಲ್ಲಿನ ತಂತ್ರಜ್ಞರು ನೇರವಾಗಿ ಗ್ರಾಹಕರೊಂದಿಗೆ ಸಂಪರ್ಕದಲ್ಲಿರಲಿದ್ದು, ಎರಡೂ ಬದಿಯಿಂದಲೂ ಸ್ಪಷ್ಟವಾದ ಮಾಹಿತಿಗಳು ವಿನಿಮಯವಾಗಿ ವಾಹನದ ಸರ್ವೀಸ್ ಸೇವೆಯ ಗುಣಮಟ್ಟ ಹೆಚ್ಚಾಗಲಿದೆ.ವೋಲ್ವೋ ಕಾರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಚಾರ್ಲ್ಸ್ ಫ್ರಂಪ್ ಸಮ್ಮುಖದಲ್ಲಿ ಮಾರ್ಷಲ್ ಮೋಟರ್ಸ್ ಗೆ ಈ ಅಧಿಕೃತ ಸೇವಾ ಕೇಂದ್ರದ ಪ್ರಮಾಣ ಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಚಾರ್ಲ್ಸ್ ಫ್ರಂಪ್, 'ನಮ್ಮ ಶೋರೂಂನಲ್ಲಿ ಮಾರಾಟವಾದ ಕಾರುಗಳಿಗೆ ಸೂಕ್ತ ರೀತಿಯಲ್ಲಿ ಸರ್ವೀಸ್ ಸೌಲಭ್ಯ ಒದಗಿಸುತ್ತಿದ್ದೇವೆ. ನಮ್ಮ ವಿಪಿಎಸ್ ಸಂಪರ್ಕ ಜಾಲದ ಮೂಲಕ ಗ್ರಾಹಕರು ತಡೆರಹಿತವಾದ ಸೇವೆಗಳನ್ನು ಪಡೆಯಬಹುದಾಗಿದೆ. ನಮ್ಮ ಪಾಲುದಾರರಾಗಿರುವ ಮಾರ್ಷಲ್ ಮೋಟರ್ಸ್ ಇದೀಗ ಪ್ರಮಾಣೀಕೃತ ವಿಪಿಎಸ್ ಡೀಲರ್ ಎಂದು ಘೋಷಿಸಲು ನಮಗೆ ಸಂತಸವೆನಿಸುತ್ತದೆ' ಎಂದರು.

ಮಾರ್ಷಲ್ ಮೋಟರ್ಸ್ ನ ಡೀಲರ್ ಪ್ರಿನ್ಸಿಪಾಲ್ ರಿತೇಶ್ ರೆಡ್ಡಿ ಅವರು ಮಾತನಾಡಿ, `ವೋಲ್ವೋ ಕಾರು ಸಂಸ್ಥೆಯು ತನ್ನ ಗ್ರಾಹಕರಿಗೆ ಗುಣಮಟ್ಟದ ಸಮಯವನ್ನು ವಾಪಸ್ ನೀಡಲು ಬಯಸುತ್ತದೆ. ಈ ಮೂಲಕ ಗ್ರಾಹಕರು ತಮ್ಮ ಪ್ರೀತಿ ಪಾತ್ರರೊಂದಿಗೆ ಸಮಯ ಕಳೆಯಬಹುದಾಗಿದೆ. ಈ ವಿಪಿಎಸ್ ಮಾದರಿಯ ಸೇವೆಯು ಗ್ರಾಹಕರಿಗೆ ತಮ್ಮ ಅತ್ಯಮೂಲ್ಯವಾದ ಸಮಯ ಉಳಿತಾಯ ಮಾಡಲು ಸಾಧ್ಯವಾಗುತ್ತದೆ. ಗ್ರಾಹಕರಿಗೆ ಅತ್ಯುತ್ತಮವಾದ ಸೇವೆಯ ಅನುಭವ ನೀಡುತ್ತಿರುವ ವೋಲ್ವೋ ಕಾರು ಸಂಸ್ಥೆಯೊಂದಿಗೆ ಪಾಲುದಾರಿಕೆಯನ್ನು ಹೊಂದುತ್ತಿರುವುದಕ್ಕೆ ನಮಗೆ ಅತೀವ ಸಂತಸವೆನಿಸುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT