ಸಾಂದರ್ಭಿಕ ಚಿತ್ರ 
ವಾಣಿಜ್ಯ

ಸತತ 10ನೇ ತಿಂಗಳು ಪ್ರಯಾಣಿಕ ವಾಹನ ಮಾರಾಟದಲ್ಲಿ ಇಳಿಕೆ; ಆಗಸ್ಟ್ ನಲ್ಲಿ ಶೇ.31.57 ಕುಸಿತ

ಭಾರತದ ದೇಶೀಯ ಪ್ರಯಾಣಿಕರ ವಾಹನ ಮಾರಾಟದಲ್ಲಿ ಸತತ 10ನೇ ತಿಂಗಳು ಮತ್ತೆ ಇಳಿಕೆ ಕಂಡುಬಂದಿದೆ.

ನವದೆಹಲಿ: ಭಾರತದ ದೇಶೀಯ ಪ್ರಯಾಣಿಕರ ವಾಹನ ಮಾರಾಟದಲ್ಲಿ ಸತತ 10ನೇ ತಿಂಗಳು ಮತ್ತೆ ಇಳಿಕೆ ಕಂಡುಬಂದಿದೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 2 ಲಕ್ಷದ 87 ಸಾವಿರದ 198 ವಾಹನಗಳು ಮಾರಾಟವಾಗಿದ್ದರೆ ಈ ವರ್ಷ ಆಗಸ್ಟ್ ನಲ್ಲಿ 1 ಲಕ್ಷದ 96 ಸಾವಿರದ 524 ವಾಹನಗಳು ಮಾರಾಟವಾಗಿವೆ. ಅಂದರೆ ವಾಹನಗಳ ಮಾರಾಟದಲ್ಲಿ ಶೇಕಡಾ 31.57ರಷ್ಟು ಇಳಿಕೆ ಕಂಡುಬಂದಿದೆ.


ದೇಶೀಯ ಕಾರು ಮಾರಾಟದಲ್ಲಿ ಶೇಕಡಾ 41.09ರಷ್ಟು ಇಳಿಕೆ ಕಂಡುಬಂದಿದ್ದು ಕಳೆದ ವರ್ಷ ಆಗಸ್ಟ್ ನಲ್ಲಿ 1 ಲಕ್ಷದ 96 ಸಾವಿರದ 847 ಕಾರುಗಳು ಮಾರಾಟವಾಗಿದ್ದರೆ ಈ ವರ್ಷ 1 ಲಕ್ಷದ 15 ಸಾವಿರದ 957 ಕಾರುಗಳು ಮಾರಾಟವಾಗಿವೆ. ಸೊಸೈಟಿ ಆಫ್ ಇಂಡಿಯನ್ ಆಟೊಮೊಬೈಲ್ ಮ್ಯಾನ್ಯುಫ್ಯಾಕ್ಚರರ್ಸ್ ಬಿಡುಗಡೆ ಮಾಡಿದ ಅಂಕಿಅಂಶದಿಂದ ಇದು ಗೊತ್ತಾಗಿದೆ.


ಮೊಟಾರ್ ಸೈಕಲ್ ಗಳ ಮಾರಾಟದಲ್ಲಿ ಕಳೆದ ತಿಂಗಳು ಶೇಕಡಾ 22.33ರಷ್ಟು ಇಳಿಕೆ ಕಂಡುಬಂದಿದ್ದು ಆಗಸ್ಟ್ ತಿಂಗಳಲ್ಲಿ 9 ಲಕ್ಷದ 37 ಸಾವಿರದ 486 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಆಗಸ್ಟ್ ನಲ್ಲಿ 12 ಲಕ್ಷದ 7 ಸಾವಿರದ 5 ಮೋಟಾರ್ ಸೈಕಲ್ ಗಳು ಮಾರಾಟವಾಗಿದ್ದವು.


ಆಗಸ್ಟ್ ನಲ್ಲಿ ದ್ವಿಚಕ್ರ ವಾಹನಗಳ ಒಟ್ಟು ಮಾರಾಟದಲ್ಲಿ ಶೇಕಡಾ 22.24ರಷ್ಟು ಇಳಿಕೆಯಾಗಿದ್ದು 15 ಲಕ್ಷದ 14 ಸಾವಿರದ 196 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ 19 ಲಕ್ಷದ 47 ಸಾವಿರದ 304 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದವು.


ವಾಣಿಜ್ಯ ವಾಹನಗಳ ಮಾರಾಟದಲ್ಲಿ ಕೂಡ ಶೇಕಡಾ 38.71ರಷ್ಟು ಇಳಿಕೆಯಾಗಿವೆ, ಒಟ್ಟು 51 ಸಾವಿರದ 897 ವಾಣಿಜ್ಯ ಬಳಕೆ ವಾಹನಗಳು ಮಾರಾಟವಾಗಿವೆ ಎಂದು ಅಂಕಿಅಂಶ ತಿಳಿಸಿದೆ.


ಹಲವು ವರ್ಗಗಳಲ್ಲಿ ದಾಖಲಾತಿಯಾದ ವಾಹನಗಳ ಮಾರಾಟದಲ್ಲಿ ಶೇಕಡಾ 23.55ರಷ್ಟು ಇಳಿಕೆಯಾಗಿದ್ದು ಈ ವರ್ಷ ಆಗಸ್ಟ್ ತಿಂಗಳಲ್ಲಿ 18 ಲಕ್ಷದ 21 ಸಾವಿರದ 490 ವಾಹನಗಳು ಮಾರಾಟವಾಗಿವೆ. ಕಳೆದ ವರ್ಷ ಆಗಸ್ಟ್ ನಲ್ಲಿ 23 ಲಕ್ಷದ 82 ಸಾವಿರದ 436 ವಾಹನಗಳು ಮಾರಾಟವಾಗಿದ್ದವು ಎಂದು ಅಂಕಿಸಂಖ್ಯೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

No friendship only business: ತೈಲ ಬೇಕಾದರೆ..; ಸಂಕಷ್ಟದ ಸಮಯದಲ್ಲಿ ಕೈಹಿಡಿದಿದ್ದ ಭಾರತಕ್ಕೆ ಕೈ ಕೊಟ್ಟ ರಷ್ಯಾ!

ಆತ ಅಪ್ಪಿಕೊಳ್ಳುತ್ತಾರೆ, ಕಣ್ಣು ಹೊಡೆಯುತ್ತಾರೆ; ಪ್ರಿಯಾಂಕಾ ಉತ್ತಮ ವಿಪಕ್ಷ ನಾಯಕಿಯಾಗಬಹುದು: ರಾಹುಲ್ ವಿರುದ್ಧ ಕಿರಣ್ ರಿಜಿಜು ಟೀಕಾ ಪ್ರಹಾರ

ಮಧ್ಯಪ್ರಾಚ್ಯ ಯುದ್ಧ: ಅಡುಗೆ ಅನಿಲ ಕೊರತೆ ಬೆನ್ನಲ್ಲೆ ಏರ್ ಇಂಡಿಯಾ ಸಮೂಹದಿಂದ ಬೆಲೆ ಏರಿಕೆ ಶಾಕ್! Fuel surcharge ಏರಿಕೆ ಘೋಷಣೆ

ಬೇಡಿಕೆ ಈಡೇರಿಕೆಗೆ ರಾಜ್ಯ ಸರ್ಕಾರದ ಭರವಸೆ: ಅನಿರ್ದಿಷ್ಟಾವಧಿ ಮುಷ್ಕರ ಹಿಂಪಡೆದ ಸರ್ಕಾರಿ ವೈದ್ಯರು!

ಕಲ್ಯಾಣ ಕರ್ನಾಟಕಕ್ಕೆ ಹೊಸ ವಿಮಾನ ನಿಲ್ದಾಣ: ರಾಜ್ಯ ಸರ್ಕಾರ ಪ್ರಸ್ತಾಪ

SCROLL FOR NEXT