ಗೋವಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿತ್ತಖಾತೆ ಸಚಿವೆ ನಿರ್ಮಲಾ ಸೀತಾರಾಮನ್ 
ವಾಣಿಜ್ಯ

ಕಾರ್ಪೊರೇಟ್ ತೆರಿಗೆ ಕಡಿತದ ಮುಖ್ಯಾಂಶಗಳು ಹೀಗಿವೆ

ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಪ್ರಕಟಿಸಿದ ಕೊರ್ಪೊರೇಟ್ ತೆರಿಗೆ ಇಳಿಕೆಯ ಮುಖ್ಯಾಂಶಗಳು ಇಂತಿವೆ. 

ಗೋವಾ: ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಪ್ರಕಟಿಸಿದ ಕೊರ್ಪೊರೇಟ್ ತೆರಿಗೆ ಇಳಿಕೆಯ ಮುಖ್ಯಾಂಶಗಳು ಇಂತಿವೆ.


1. ಯಾವುದೇ ಪ್ರೋತ್ಸಾಹ / ವಿನಾಯಿತಿಗಳನ್ನು ಸರ್ಕಾರದಿಂದ ಪಡೆಯದ ದೇಶೀಯ ಕಂಪನಿಗಳ ಕಾರ್ಪೊರೇಟ್ ದರ ಶೇಕಡಾ 22 ಕ್ಕೆ ಇಳಿಸಲಾಗಿದೆ, ; ಹಿಂದಿನ ದರ ಶೇಕಡಾ 30ರಷ್ಟಾಗಿತ್ತು.


2. ಅಂತಹ ದೇಶೀಯ ಕಂಪನಿಗಳಿಗೆ ತೆರಿಗೆ ದರವು ಈಗ ಸೆಸ್ ಮತ್ತು ಹೆಚ್ಚುವರಿ ಶುಲ್ಕ ಸೇರಿದಂತೆ ಶೇಕಡಾ 25.17 ರಷ್ಟಿದೆ; ಈ ಹಿಂದೆ ಅದು ಶೇಕಡಾ 34.94 ರಷ್ಟಿತ್ತು


3. ಅಲ್ಲದೆ, ಅಂತಹ ಕಂಪನಿಗಳು ಕನಿಷ್ಠ ಪರ್ಯಾಯ ತೆರಿಗೆಯನ್ನು (MAT) ಪಾವತಿಸುವ ಅಗತ್ಯವಿಲ್ಲ


4. ಅಕ್ಟೋಬರ್ 1, 2019 ರಂದು ಅಥವಾ ನಂತರ ಅಸ್ಥಿತ್ವಕ್ಕೆ ಬಂದ ಹೊಸ ದೇಶೀಯ ಕಂಪನಿಗಳು, ಉತ್ಪಾದನೆಯಲ್ಲಿ ಹೊಸ ಹೂಡಿಕೆ ಮಾಡುವುದರಿಂದ 15 ಪಿಸಿ ದರದಲ್ಲಿ ಆದಾಯ ತೆರಿಗೆ ಪಾವತಿಸಬಹುದು; ಹಿಂದಿನ ದರ 25 ಪಿಸಿ ಆಗಿತ್ತು.


5. ಆದಾಗ್ಯೂ, ಕಂಪನಿಗಳು ಯಾವುದೇ ವಿನಾಯಿತಿ / ಪ್ರೋತ್ಸಾಹಕವನ್ನು ಪಡೆಯದಿದ್ದರೆ ಮತ್ತು ಮಾರ್ಚ್ 31, 2023 ರೊಳಗೆ ಉತ್ಪಾದನೆಯನ್ನು ಪ್ರಾರಂಭಿಸಿದರೆ ಮಾತ್ರ ಅಂತಹ ಕಂಪೆನಿಗಳಿಗೆ ಕಡಿಮೆ ತೆರಿಗೆ ಅನ್ವಯಿಸುತ್ತದೆ


6. ಅಂತಹ ಕಂಪೆನಿಗಳಿಗೆ ತೆರಿಗೆ ದರವು ಹೆಚ್ಚುವರಿ ಶುಲ್ಕ ಮತ್ತು ಸೆಸ್ ಅನ್ನು ಒಳಗೊಂಡಂತೆ ಶೇಕಡಾ 17.01 ಆಗಿರುತ್ತದೆ; ಹಿಂದಿನ ದರವು ಶೇಕಡಾ 29.12 ರಷ್ಟಿತ್ತು.


7. ಈ ಕಂಪನಿಗಳು ಸಹ MAT ಪಾವತಿಸುವ ಅಗತ್ಯವಿಲ್ಲ


8. ವಿನಾಯಿತಿ / ಪ್ರೋತ್ಸಾಹಕವನ್ನು ಪಡೆಯುವುದನ್ನು ಮುಂದುವರಿಸುವ ಕಂಪನಿಗಳಿಗೆ, ಮ್ಯಾಟ್(MAT) ಅನ್ನು ಶೇಕಡಾ 18.5 ರಿಂದ 15 ಕ್ಕೆ ಇಳಿಸಲಾಗಿದೆ.


9. ವಿದೇಶಿ ಬಂಡವಾಳ ಹೂಡಿಕೆದಾರರ (ಎಫ್‌ಪಿಐ) ಭದ್ರತೆಯ ಮಾರಾಟದ ಮೇಲಿನ ಬಂಡವಾಳ ಲಾಭಕ್ಕೂ ವರ್ಧಿತ ಹೆಚ್ಚುವರಿ ಶುಲ್ಕ ಅನ್ವಯಿಸುವುದಿಲ್ಲ.


10. ಕಳೆದ ಬಾರಿಯ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಪರಿಚಯಿಸಲಾದ ವರ್ಧಿತ ಹೆಚ್ಚುವರಿ ಶುಲ್ಕವು ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ಟ್ಯಾಕ್ಸ್ (ಎಸ್‌ಟಿಟಿ) ಗೆ ಹೊಣೆಗಾರಿಕೆಯಲ್ಲಿರುವ ಈಕ್ವಿಟಿ ಷೇರುಗಳ ಮಾರಾಟದಿಂದ ಉಂಟಾಗುವ ಬಂಡವಾಳ ಲಾಭದ ಮೇಲೆ ಅನ್ವಯಿಸುವುದಿಲ್ಲ.


11. 2019 ರ ಜುಲೈ 5 ರ ಮೊದಲು ಕಂಪನಿಗಳು ಈ ಬಗ್ಗೆ ಪ್ರಕಟಣೆ ನೀಡಿದ್ದರೆ ಷೇರುಗಳ ಮರುಖರೀದಿಯ ಮೇಲೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ


12. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಚಟುವಟಿಕೆಗಳ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ


13. ಕಡಿಮೆ ತೆರಿಗೆ ದರ ಏಪ್ರಿಲ್ 1, 2019 ರಿಂದ ಜಾರಿಗೆ ಬರುತ್ತದೆ.


14. ಆದಾಯ ತೆರಿಗೆ ಕಾಯ್ದೆ 1961 ಮತ್ತು ಹಣಕಾಸು ಕಾಯ್ದೆ 2019 ರಲ್ಲಿ ಬದಲಾವಣೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT