ವಾಣಿಜ್ಯ

ದೇಶದ ಆರ್ಥಿಕತೆ ಪುನಶ್ಚೇತನ ಕಾಣುತ್ತಿದೆ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 

Sumana Upadhyaya

ನವದೆಹಲಿ: ದೇಶದಲ್ಲಿ ಆರ್ಥಿಕ ಪುನಶ್ಚೇತನ ಕಾಣುವ ಲಕ್ಷಣ ಕಾಣುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ದೆಹಲಿಯ ನ್ಯಾಶನಲ್ ಮೀಡಿಯಾ ಸೆಂಟರ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರ್ಥಿಕತೆ ಚೆನ್ನಾಗಿ ಪುನಶ್ಚೇತನಗೊಳ್ಳುವ ಕೆಲವು ಸೂಚನೆ ಕಂಡುಬರುತ್ತಿದೆ. ಕೋವಿಡ್-19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಲಾಕ್ ಡೌನ್ ನಿಂದ ಉಂಟಾದ ಸಮಸ್ಯೆಯಿಂದ ಹೊರಬರಲು ಕೆಲವು ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದರು.

ಕೋವಿಡ್ ಸಕ್ರಿಯ ಕೇಸುಗಳು ಸಹ ದೇಶದಲ್ಲಿ 10 ಲಕ್ಷದಿಂದ ಇಳಿಕೆಯಾಗುತ್ತಿದ್ದು ಸದ್ಯ 4.89 ಲಕ್ಷ ಸಕ್ರಿಯ ಕೇಸುಗಳು ಮತ್ತು ಮೃತರ ಸಂಖ್ಯೆ ಶೇಕಡಾ 1.47ರಷ್ಟು ಇಳಿಕೆಯಾಗಿದೆ ಎಂದರು.

SCROLL FOR NEXT