ಬ್ಯಾಂಕಿಂಗ್ ಸೇವೆ ಅಲಭ್ಯ 
ವಾಣಿಜ್ಯ

ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಮಾಹಿತಿ: ಜನವರಿಯಲ್ಲಿ 16 ದಿನ ಬ್ಯಾಂಕಿಂಗ್ ಸೇವೆ ಅಲಭ್ಯ!!!

ನೂತನ ವರ್ಷಾರಂಭದಲ್ಲೇ ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದು ಇದ್ದು, ಜನವರಿ ತಿಂಗಳಲ್ಲಿ ಬರೊಬ್ಬರಿ 16 ದಿನಗಳ ಕಾಲ ಬ್ಯಾಂಕ್ ಗಳನ್ನು ಮುಚ್ಚಲಾಗುತ್ತಿದೆ.

ನವದೆಹಲಿ: ನೂತನ ವರ್ಷಾರಂಭದಲ್ಲೇ ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ಸುದ್ದಿಯೊಂದು ಇದ್ದು, ಜನವರಿ ತಿಂಗಳಲ್ಲಿ ಬರೊಬ್ಬರಿ 16 ದಿನಗಳ ಕಾಲ ಬ್ಯಾಂಕ್ ಗಳನ್ನು ಮುಚ್ಚಲಾಗುತ್ತಿದೆ.

ಹೌದು... ಜನವರಿ 2022ರಲ್ಲಿ ಭಾರತದಲ್ಲಿ ಬ್ಯಾಂಕ್‍ಗಳಿಗೆ ಹಲವು ರಜೆಗಳ ಕಾರಣ ಮುಚ್ಚಲಾಗುತ್ತಿದ್ದು, ಜನವರಿ 2022 ದೇಶಾದ್ಯಂತ 16 ಬ್ಯಾಂಕಿಂಗ್ ರಜಾದಿನಳು ಬಂದಿವೆ. 

ದೇಶದ ಎಲ್ಲ ಭಾಗಗಳಲ್ಲಿಯೂ 16 ದಿನ ರಜೆ ಇಲ್ಲ
ದೇಶಾದ್ಯಂತ ಬ್ಯಾಂಕ್ ಗಳಿಗೆ ಜನವರಿಯಲ್ಲಿ 16 ದಿನ ರಜೆ ಇದೆಯಾದರೂ, ಇದು ದೇಶದ ಎಲ್ಲ ರಾಜ್ಯಗಳಿಗೂ ಅನ್ವಯಿಸುವುದಿಲ್ಲ. ಅಂದರೆ ದೇಶದ ಎಲ್ಲಾ ಭಾಗಗಳಲ್ಲಿ ಎಲ್ಲಾ 16 ದಿನಗಳವರೆಗೆ ಬ್ಯಾಂಕ್‍ಗಳನ್ನು ಮುಚ್ಚಲಾಗುವುದಿಲ್ಲ. ಸಂಭ್ರಮಾಚರಣೆ ಕಾರಣ ಕೆಲವು ಬ್ಯಾಂಕುಗಳು ನಿರ್ದಿಷ್ಟ ರಾಜ್ಯದಲ್ಲಿ ನಿರ್ದಿಷ್ಟ ದಿನಾಂಕದಂದು ಮುಚ್ಚಲ್ಪಡುತ್ತವೆ ಮತ್ತು ದೇಶದ ಇತರ ಭಾಗಗಳಲ್ಲಿ ತೆರೆದಿರುತ್ತವೆ. ಉದಾಹರಣೆಗೆ, ಚೆನ್ನೈನಲ್ಲಿ ಜನವರಿ 28 ರಂದು ಥಾಯ್ ಪೂಸಂಗಾಗಿ ಬ್ಯಾಂಕ್‍ಗಳಿಗೆ ರಜೆ ನೀಡಲಾಗುತ್ತದೆ. ಆದರೆ ಅಸ್ಸಾಂನಲ್ಲಿ ಅಂದು ಬ್ಯಾಂಕ್ ಕಾರ್ಯನಿರ್ವಹಿಸಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ರಜಾ ಕ್ಯಾಲೆಂಡರ್ ಪಟ್ಟಿಯ ಪ್ರಕಾರ ಜನವರಿ ತಿಂಗಳಲ್ಲಿ 9 ರಜಾದಿನಗಳು ಇರುತ್ತವೆ. ಉಳಿದ 7 ರಜಾದಿನಗಳು ಭಾನುವಾರ ಮತ್ತು 2 ಶನಿವಾರದಂದು ಇರುತ್ತವೆ. ಬ್ಯಾಂಕುಗಳು ಮುಚ್ಚಲ್ಪಡುವ ದಿನಗಳಲ್ಲಿ, ಗ್ರಾಹಕರು ತಮ್ಮ ಕೆಲಸವನ್ನು ಪೂರ್ಣಗೊಳಿಸಲು ಆನ್‍ಲೈನ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಬಹುದು.

ಜನವರಿ 2022 ರಲ್ಲಿ ಬ್ಯಾಂಕ್ ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ:
ಜನವರಿ 1-ಹೊಸ ವರ್ಷದ ದಿನ, ಜನವರಿ-2 ಭಾನುವಾರ, ಜನವರಿ-3 ಹೊಸ ವರ್ಷದ ಆಚರಣೆ/ಲೂಸೂಂಗ್, ಜನವರಿ 4 -ಲೋಸೂಂಗ್, ಜನವರಿ-8 ಎರಡನೇ ಶನಿವಾರ, ಜನವರಿ-9 ಭಾನುವಾರ, ಜನವರಿ-11 ಮಿಷನರಿ ದಿನ, ಜನವರಿ-12 ಸ್ವಾಮಿ ವಿವೇಕಾನಂದರ ಜನ್ಮದಿನ, ಜನವರಿ 14-ಮಕರ ಸಂಕ್ರಾಂತಿ, ಜನವರಿ 15-ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಾಂತಿ ಹಬ್ಬ/ಮಾಘೆ ಸಂಕ್ರಾಂತಿ/ಸಂಕ್ರಾಂತಿ ತಿರುವಳ್ಳುವರ್ ದಿನ, ಜನವರಿ 16-ಭಾನುವಾರ, ಜನವರಿ 18-ಥಾಯ್ ಪೂಸಂ, ಜನವರಿ-22 ನಾಲ್ಕನೇ ಶನಿವಾರ, ಜನವರಿ-23 ಭಾನುವಾರ, ಜನವರಿ 26-ಗಣರಾಜ್ಯೋತ್ಸವ, ಜನವರಿ 30-ಭಾನುವಾರ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT