ಸಾಂದರ್ಭಿಕ ಚಿತ್ರ 
ವಾಣಿಜ್ಯ

ಮಾರ್ಚ್ 2023 ರಂತೆ ಕೇಂದ್ರ ಸರ್ಕಾರದ ಒಟ್ಟು ಸಾಲ 156 ಲಕ್ಷ ಕೋಟಿಗೂ ಅಧಿಕ: ಹಿಂದಿನ ವರ್ಷಕ್ಕಿಂತ ಶೇ.11ರಷ್ಟು ಹೆಚ್ಚಳ

2022-23 ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಒಟ್ಟು ಸಾಲ (ತಾತ್ಕಾಲಿಕ) 156 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 11.5 ರಷ್ಟು  ಹೆಚ್ಚಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ತೋರಿಸಿವೆ. ಕಳೆದ ವರ್ಷ ಡಿಸೆಂಬರ್ ನಲ್ಲಿದ್ದ ಸಾಲಕ್ಕಿಂತ ಶೇ. 5 ರಷ್ಟು  ಹೆಚ್ಚಾಗಿದೆ. 

ನವದೆಹಲಿ: 2022-23 ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಒಟ್ಟು ಸಾಲ (ತಾತ್ಕಾಲಿಕ) 156 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ. ಇದು ಹಿಂದಿನ ವರ್ಷಕ್ಕಿಂತ ಶೇ. 11.5 ರಷ್ಟು  ಹೆಚ್ಚಾಗಿದೆ ಎಂದು ಸರ್ಕಾರಿ ಅಂಕಿ ಅಂಶಗಳು ತೋರಿಸಿವೆ. ಕಳೆದ ವರ್ಷ ಡಿಸೆಂಬರ್ ನಲ್ಲಿದ್ದ ಸಾಲಕ್ಕಿಂತ ಶೇ. 5 ರಷ್ಟು  ಹೆಚ್ಚಾಗಿದೆ. 

ಮಾರ್ಚ್ 2023 ರ ಅಂತ್ಯದಲ್ಲಿ ಕೇಂದ್ರ ಸರ್ಕಾರದ ಒಟ್ಟು ಸಾಲಗಳಲ್ಲಿ ಶೇ.  95.2 ರಷ್ಟು ದೇಶೀಯ ಕರೆನ್ಸಿಯಲ್ಲಿ ಗುರುತಿಸಲ್ಪಟ್ಟಿದ್ದರೆ,  ಬಾಹ್ಯ ಸಾಲವು ಶೇ.4.8 ರಷ್ಟಿದೆ. ಮಾರ್ಚ್ 2023 ರ ಅಂತ್ಯದ ವೇಳೆಗೆ ಕೇಂದ್ರ ಸರ್ಕಾರದ ಬಾಹ್ಯ ಸಾಲವು ಪ್ರಸ್ತುತದಲ್ಲಿನ ವಿನಿಮಯ ದರದಲ್ಲಿ ರೂ. 7.5 ಲಕ್ಷ ಕೋಟಿಗಳಷ್ಟಿತ್ತು.

ಕೇಂದ್ರ ಸರ್ಕಾರದ ಒಟ್ಟು ಸಾಲವು ಆಂತರಿಕ ಸಾಲ, ಬಾಹ್ಯ ಸಾಲ ಮತ್ತು ಸಣ್ಣ ಉಳಿತಾಯ ಠೇವಣಿಗಳು, ರಾಜ್ಯ ಭವಿಷ್ಯ ನಿಧಿ ಇನ್ನಿತರ ಸಾಲವನ್ನು ಒಳಗೊಂಡಂತೆ 156 ಲಕ್ಷ ಕೋಟಿಯಾಗಿದೆ.  ಕೇಂದ್ರ ಸರ್ಕಾರದ ಸಾಲ, ಜಿಡಿಪಿ ಅನುಪಾತವು ಸುಮಾರು ಶೇ. 57 ರಷ್ಟಾಗಿದೆ. ಇದು ಹಿಂದಿನ ಆರ್ಥಿಕ ವರ್ಷಕ್ಕಿಂತ ಶೇ. 59 ರಷ್ಟು ಕಡಿಮೆಯಾಗಿದೆ.  2020-21 ರಲ್ಲಿ ಶೇ.60ಕ್ಕೆ ಏರಿದ ನಂತರ  ಕೇಂದ್ರ ಸರ್ಕಾರದ ಸಾಲದ ಅನುಪಾತ ಕುಸಿಯಲು ಪ್ರಾರಂಭಿಸಿದೆ.

2020-21ರಲ್ಲಿ ಸರ್ಕಾರದ ಸಾಲವು (ಕೇಂದ್ರ ಮತ್ತು ರಾಜ್ಯ ಸರ್ಕಾರ) ಶೇ. 90 ರಷ್ಟಿದೆ ಎಂದು ಒಂದೆರಡು ವರ್ಷಗಳ ಹಿಂದೆ ಕಳವಳ ವ್ಯಕ್ತಪಡಿಸಲಾಗಿತ್ತು. ಆದರೆ ಎರಡು ವರ್ಷಗಳ ನಂತರ ಜಿಡಿಪಿ ಹೆಚ್ಚಳದಿಂದ ಸಾಲದ ಪ್ರಮಾಣ ಕುಸಿದಿದೆ ಎನ್ನಲಾಗಿತ್ತು. ದೇಶದಲ್ಲಿ ಜೆಡಿಪಿ ವೇಗವಾಗಿ ಬೆಳೆಯುತ್ತಿರುವುದು ಸಾಲದ ಕುಸಿತಕ್ಕೆ ಪ್ರಮುಖ ಕಾರಣ ಎಂದು ಇತ್ತೀಚಿಗೆ ರೇಟಿಂಗ್ ಏಜೆನ್ಸಿ ಮೂಡೀಸ್ ಹೇಳಿತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅಧಿಕಾರ ಹಂಚಿಕೆ ಬಗ್ಗೆ ಯಾರೂ ಮಾತನಾಡಬೇಡಿ, ಸಾರ್ವಜನಿಕ ಹೇಳಿಕೆ ಕೊಡಬೇಡಿ': ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಬುದ್ದಿಮಾತು

'ನೀವು ಶಾಶ್ವತ ವಿಪತ್ತು ನಿಧಿ ಏಕೆ ರಚಿಸಿಲ್ಲ': ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ

ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ: ಡಿ ಕೆ ಶಿವಕುಮಾರ್

ದೇವನಹಳ್ಳಿಯ 1,777 ಎಕರೆ ಜಮೀನು 'ಶಾಶ್ವತ ವಿಶೇಷ ಕೃಷಿ ವಲಯ'; ಭೂಮಿ ಮಾರಾಟಕ್ಕೆ ಕಡಿವಾಣ ಇಲ್ಲ: ಸರ್ಕಾರ

ಹೆಲಿಕಾಪ್ಟರ್, ಸ್ಪೆಷಲ್ ಫ್ಲೈಟ್ ಖರೀದಿ ಮಾಡಲ್ಲ, ಬಾಡಿಗೆ ಪಡೆಯಲು ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

SCROLL FOR NEXT